![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Aug 17, 2023, 12:25 AM IST
ಮುಂಬಯಿ: ಮಹಾರಾಷ್ಟ್ರದ ಮುಂಬಯಿಯ ರೆಸ್ಟೋರೆಂಟ್ ಒಂದರಲ್ಲಿ ಚಿಕನ್ ಊಟ ಸವಿಯಲೆಂದು ತೆರಳಿದ್ದ ವ್ಯಕ್ತಿಯೊಬ್ಬರಿಗೆ ಊಟದಲ್ಲಿ ಕೋಳಿ ಮಾಂಸದ ಬದಲಿಗೆ ಇಲಿಮರಿಯ ಮಾಂಸ ಸಿಕ್ಕಿದೆ. ಈ ಸಂಬಂಧಿಸಿದಂತೆ ರೆಸ್ಟೋರೆಂಟ್ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
ಅನುರಾಗ್ ಸಿಂಗ್ ಎಂಬವರು ತಮ್ಮ ಸ್ನೇಹಿತರೊಂದಿಗೆ ಬಾಂದ್ರಾದಲ್ಲಿರುವ ಪಂಜಾಬಿ ಡಾಬಾ ಒಂದಕ್ಕೆ ಭೇಟಿ ನೀಡಿ, ಮಟನ್ ಹಾಗೂ ಚಿಕನ್ ಊಟಗಳನ್ನು ಆರ್ಡರ್ ಮಾಡಿದ್ದಾರೆ. ಕೋಳಿ ಮಾಂಸ ತಿನ್ನುವಾಗ ಅದರಲ್ಲಿನ ಮಾಂಸ ಕೋಳಿಯಂತೆ ಅನ್ನಿಸದ ಕಾರಣ ಪರಿಶೀಲಿಸಿದಾಗ ಅದು ಸತ್ತ ಇಲಿ ಎಂಬುದು ತಿಳಿದುಬಂದಿದೆ. ತತ್ಕ್ಷಣವೇ ಸಿಂಗ್ ಈ ಸಂಬಂಧಿಸಿದಂತೆ ಹೊಟೇಲ್ ಮ್ಯಾನೇಜರ್ಗೆ ದೂರು ನೀಡಿದರೂ ಅವರು ಸರಿಯಾಗಿ ಸ್ಪಂದಿಸಿಲ್ಲ. ಬಳಿಕ ಈ ಸಂಬಂಧಿಸಿದಂತೆ ಜಾಲತಾಣದಲ್ಲಿ ಪೋಸ್ಟ್ ಕೂಡ ಮಾಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಊಟ ಸೇವಿಸಿದ ಬಳಿಕ ತಮ್ಮ ಆರೋಗ್ಯ ಹದಗೆಟ್ಟಿತು ಎಂಬುದಾಗಿಯೂ ಸಿಂಗ್ ಆರೋಪಿಸಿದ್ದಾರೆ.
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
You seem to have an Ad Blocker on.
To continue reading, please turn it off or whitelist Udayavani.