Russian army ಸೇರಿಕೊಂಡಿದ್ದ ಹರಿಯಾಣ ಯುವಕ ಸಾವು!
Team Udayavani, Jul 30, 2024, 6:30 AM IST
ಚಂಡೀಗಢ: ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಮತ್ತೂಬ್ಬ ಭಾರತೀಯ ಯುವಕ ಈಗ ಉಕ್ರೇನ್ನ ಯುದ್ಧ ಭೂಮಿ ಯಲ್ಲಿ ಪ್ರಾಣ ಕಳೆದುಕೊಂಡಿ ದ್ದಾರೆ. ಹರಿಯಾಣದ ಕೈಥಾಲ್ ಜಿಲ್ಲೆಯ ರವಿ ಮೌನ್(22) ಮೃತ ದುರ್ದೈವಿ.
ಸಾರಿಗೆ ವಲಯದಲ್ಲಿ ಉದ್ಯೋಗ ಕೊಡಿ ಸುವುದಾಗಿ ಹೇಳಿ ಜ.13ರಂದು ರವಿ ಅವರನ್ನು ರಷ್ಯಾಗೆ ಕರೆಸಿಕೊಳ್ಳಲಾ ಗಿತ್ತು. ಆದರೆ ಅಲ್ಲಿ ಕಂದಕಗಳನ್ನು ತೋಡುವ ತರಬೇತಿ ನೀಡಿ, ಉಕ್ರೇನ್ ಯುದ್ಧಕ್ಕೆ ಬಳಸಿಕೊಳ್ಳಲಾಗಿತ್ತು. ಯುದ್ಧ ದಲ್ಲಿ ಹೋರಾಡದೇ ಇದ್ದರೆ 10 ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ರಷ್ಯಾ ಸೇನೆ ಬೆದರಿಕೆ ಹಾಕಿತ್ತು ಎಂದು ರವಿ ಸೋದರ ಅಜಯ್ ಮೌನ್ ಹೇಳಿದ್ದಾರೆ.
ಒತ್ತಾಯಪೂರ್ವಕವಾಗಿ ರವಿ ಸೇನೆಯಲ್ಲಿ ಕೆಲಸ ಮಾಡಬೇಕಾಯಿತು. ಮಾ.12 ರ ವರೆಗೆ ನಮ್ಮೊಂದಿಗೆ ಆತ ಸಂಪರ್ಕ ದಲ್ಲಿದ್ದ. ಅಲ್ಲದೇ, ಈ ಕೆಲಸದಿಂದ ಬಹಳ ನೊಂದಿದ್ದ. ಬಳಿಕ ಆತ ಸಂಪರ್ಕಕ್ಕೆ ಸಿಗಲಿಲ್ಲ. ಜು.21ರಂದು ರಾಯಭಾರ ಕಚೇರಿಗೆ ನಾನು ಪತ್ರ ಬರೆದು, ನನ್ನ ತಮ್ಮನ ಬಗ್ಗೆ ವಿಚಾರಿಸಿದೆ. ಆಗ, “ಆತ ಯುದ್ಧದಲ್ಲಿ ಮೃತಪಟ್ಟಿದ್ದು, ಮೃತದೇಹದ ಗುರುತು ಪತ್ತೆಗಾಗಿ ನಿಮ್ಮ ತಾಯಿಯ ಡಿಎನ್ಎ ಪರೀಕ್ಷೆಯ ವರದಿ ಕಳುಹಿಸಿ’ ಎಂದು ತಿಳಿಸಿದರು ಎಂದು ಅಜಯ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.