![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 10, 2019, 4:03 PM IST
ಪಾಲಕ್ಕಾಡ್ : ಜಿಲ್ಲೆಯ ಥಣ್ಣಿಶೇರಿಯಲ್ಲಿ ಮೀನು ತುಂಬಿದ್ದ ಮಿನಿ ಟ್ರಕ್, ಅಂಬುಲೆನ್ಸ್ ಗೆ ಢಿಕ್ಕಿ ಹೊಡೆದ ಭೀಕರ ಅಪಘಾತದಲ್ಲಿ ಅಂಬುಲೆನ್ಸ್ನಲ್ಲಿದ್ದವರ ಪೈಕಿ 8 ಮಂದಿ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತರಲ್ಲಿ ಅಂಬುಲೆನ್ಸ್ ಡ್ರೈವರ್ ಕೂಡ ಸೇರಿದ್ದಾರೆ; ಅಂಬುಲೆನ್ಸ್ನಲ್ಲಿ ಒಟ್ಟು 12 ಮಂದಿ ಇದ್ದರು. ಮೃತರಲ್ಲಿ ಕೆಲವರು ಪಟ್ಟಾಂಬಿ ಎಂಬಲ್ಲಿಯವರಾಗಿದ್ದು ಅವರು ಬೆಳಗ್ಗೆ ಪ್ರವಾಸಾರ್ಥ ನೆಳ್ಳಿಯಂಪಾಟಿ ಗೆ ಹೋಗಿದ್ದಾಗ ಲಘು ಅಪಘಾತಕ್ಕೆ ಗುರಿಯಾಗಿದ್ದರು.
ಇವರನ್ನು ಮೊದಲು ನೇನ್ಮಾರಾ ದಲ್ಲಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಅವರನ್ನು ಅಲ್ಲಿಂದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಅಂಬುಲೆನ್ಸ್ನಲ್ಲಿ ತರಲಾಗುತ್ತಿತ್ತು. ಆ ವೇಳೆ ಮಿನಿ ಟ್ರಕ್ ಢಿಕ್ಕಿಯಾಗಿತ್ತು. ಬೆಳಗ್ಗೆ ನಡೆದಿದ್ದ ಅಪಘಾತದ ಸುದ್ದಿ ತಿಳಿದು ಧಾವಿಸಿ ಬಂದಿದ್ದ ಕೆಲವು ಸಂಬಂಧಿಕರು ಕೂಡ ಅಂಬುಲೆನ್ಸ್ನಲ್ಲಿ ಇದ್ದರು.
ಟ್ರಕ್ ಢಿಕ್ಕಿಯ ರಭಸಕ್ಕೆ ಅಪ್ಪಚ್ಚಿಯಾಗಿದ್ದ ಅಂಬುಲೆನ್ಸ್ನಿಂದ ಮೃತ ದೇಹಗಳನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತೆಂದು ಪೊಲೀಸರು ತಿಳಿಸಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.