![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Oct 17, 2017, 5:17 PM IST
ಹೈದರಾಬಾದ್ : ಶೀಘ್ರವೇ ಮತದಾನಕ್ಕೆ ಆಧಾರ್ ಕಾರ್ಡನ್ನು ಏಕೈಕ ಗುರುತು ಪತ್ರವಾಗಿ ಬಳಸುವ ಸಾಧ್ಯತೆ ಇದೆಯೇ ?
ಈ ಸಂದೇಹಕ್ಕೆ ಉತ್ತರ ಎನ್ನುವಂತೆ ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ ಎಸ್ ಕೃಷ್ಣಮೂರ್ತಿ ಅವರು “ಮತದಾನಕ್ಕೆ ಆಧಾರ್ ಕಾರ್ಡನ್ನೇ ಏಕೈಕ ಗುರುತು ಪತ್ರವಾಗಿ ಬಳಸಬಹುದಾಗಿದೆ’ ಎಂದು ಹೇಳಿದ್ದಾರೆ.
ಪ್ರಕೃತ ಚುನಾವಣಾ ಆಯೋಗವು ಮತದಾನಕ್ಕೆ ವೋಟರ್ ಐಡಿ ಕಾರ್ಡ್ ಇಲ್ಲದ ಸಂದರ್ಭಗಳಲ್ಲಿ ಪಾಸ್ಪೋರ್ಟ್ ಸೇರಿದಂತೆ ಹಲವಾರು ಬಗೆಯ ದಾಖಲೆ ಪತ್ರಗಳನ್ನು ಬಳಸುವುದಕ್ಕೆ ಅವಕಾಶ ನೀಡುತ್ತದೆ.
“ಇಂದು ನಾವು ಮತದಾನಕ್ಕೆ ಹಲವಾರು ಬಗೆಯ ಗುರುತು ಪತ್ರಗಳನ್ನು ಬಳಸುತ್ತಿದ್ದೇವೆ ಮತ್ತು ಇದು ಹಲವಾರು ಬಗೆಯ ತೊಂದರೆ, ಗೊಂದಲಗಳಿಗೆ ಕಾರಣವಾಗಿದೆ. ಅಂತಿರುವಾಗ ಈ ಸಮಸ್ಯೆಯ ಶಾಶ್ವತ ನಿವಾರಣೆಗಾಗಿ ಮತದಾನಕ್ಕೆ ಒಂದೇ ಗುರುತು ಪತ್ರವನ್ನು ಬಳಸುವುದು ಒಳ್ಳೆಯದು. ಆಧಾರ್ ಕಾರ್ಡ್ ಈ ಉದ್ದೇಶಕ್ಕೆ ಉತ್ತಮವಾಗಿದೆ’ ಎಂದು ಮಾಜಿ ಸಿಇಸಿ ಕೃಷ್ಣಮೂರ್ತಿ ಹೇಳಿದರು.
“ಆಧಾರ್ ಕಾರ್ಡನ್ನು ನೀವು ಬೇರೆಲ್ಲ ಉದ್ದೇಶಗಳಿಗೆ ಬಳಸುವಿರಾದರೆ ಮತದಾನಕ್ಕೂ ಅದೇ ಗುರುತು ಪತ್ರ ಬಳಸಬಹುದಾಗಿದೆ ಮತ್ತು ಅದರಿಂದ ಅನುಕೂಲವೂ ಆಗುತ್ತದೆ’ ಎಂದವರು ಹೇಳಿದರು.
“ದೇಶದಲ್ಲೀಗ ಬಹುತೇಕ ಎಲ್ಲರೂ ಆಧಾರ್ ಕಾರ್ಡ್ ಹೊಂದಿದ್ದಾರೆ. ಇನ್ನೂ ಅದನ್ನು ಹೊಂದದವರಿಗೆ 2019 ಅಥವಾ 2020 ಕಟ್ ಆಫ್ ಡೇಟ್ ಎಂದು ನಿಗದಿಸಬಹುದು. ಆ ಬಳಿಕ ಆಧಾರ್ ಕಾರ್ಡನ್ನು ಮತದಾನಕ್ಕೆ ಏಕೈಕ ಗುರುತು ಪತ್ರವೆಂದು ಸರಕಾರ ಘೋಷಿಸಬಹುದು’ ಎಂದು ಕೃಷ್ಣಮೂರ್ತಿ ಹೇಳಿದರು.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.