ಆಧಾರ್‌ ಡಾಟಾಬೇಸ್‌ ಕನ್ನ ಸಾಧ್ಯ: ಎಡ್ವರ್ಡ್‌ ಸ್ನೋಡೆನ್‌ ಎಚ್ಚರಿಕೆ


Team Udayavani, Jan 5, 2018, 3:43 PM IST

Aadhar-doll-700.jpg

ಹೊಸದಿಲ್ಲಿ : ಭಾರತ ಸರಕಾರ ಹೇಳಿಕೊಂಡಿರುವಂತೆ ಆಧಾರ್‌ ಡಾಟಾಬೇಸ್‌ ಸುರಕ್ಷಿತವಲ್ಲ; ಅದಕ್ಕೆ ಹ್ಯಾಕರ್‌ಗಳು ಸುಲಭದಲ್ಲಿ ಕನ್ನ ಹಾಕಬಹುದಾಗಿದೆ ಎಂದು ಅಮೆರಿಕದ ವ್ಹಿಸಲ್‌ ಬ್ಲೋವರ್‌ ಎಡ್ವರ್ಡ್‌ ಸ್ನೋಡೆನ್‌ ಹೇಳಿದ್ದಾರೆ.

ಭಾರತದಲ್ಲಿ ಆಧಾರ್‌ ಡಾಟಾ ಬೇಸ್‌ಗೆ ಅಕ್ರಮವಾಗಿ ಕೈ ಹಾಕಲಾಗಿರುವ ಬಗ್ಗೆ ಸಿಬಿಎಸ್‌ ಪತ್ರಕರ್ತ ಝಾಕ್‌ ವಿಟೇಕರ್‌ ಅವರು ಬಝ್ಫೀಡ್‌ ವರದಿಗೆ ನೀಡಿರು ಪ್ರತಿಕ್ರಿಯೆಗೆ ರೀ-ಟ್ವೀಟ್‌ ಮಾಡಿರುವ ಸ್ನೋಡನ್‌, ಖಾಸಗಿ ಮಾಹಿತಿಗಳ ಸುರಕ್ಷಿತವಾಗಿರಬೇಕು ಎಂಬುದು ಎಲ್ಲ ಸರಕಾರಗಳ ಸಹಜ ಪ್ರವೃತ್ತಿ ಮತ್ತು ಆಶಯವಾಗಿರುತ್ತದೆ; ಆದರೆ ಅದಕ್ಕೆ ಕನ್ನ ಹಾಕುವುದಕ್ಕೆ ಯಾವುದೇ ಕಾನೂನು ಒಂದು ಅಡಚಣೆಯೇ ಅಲ್ಲ ಎಂಬುದನ್ನು ಇತಿಹಾಸವೇ ನಮಗೆ ತೋರಿಸುತ್ತದೆ; ಪರಿಣಾಮವಾಗಿ ಅವು ಸುಲಭದಲ್ಲಿ ಚೋರರ ಕೈವಶವಾಗುತ್ತವೆ’ ಎಂದು ಹೇಳಿದ್ದಾರೆ. 

ವಿಟೇಕರ್‌ ಅವರು ಈ ಮೊದಲು ಭಾರತವು ತನ್ನ 1.2 ಶತಕೋಟಿ ಜನರ ಖಾಸಗಿ ಮಾಹಿತಿಗಳ ಆಧಾರ್‌ ಡಾಟಾ ಬೇಸ್‌ ಹೊಂದಿದೆ; ಅದಕ್ಕೆ ಕನ್ನ ಹಾಕಲಾಗಿದೆ ಎಂದು ವರದಿಯಾಗಿದೆ. ಆ್ಯಡ್ಮಿನ್‌ ಖಾತೆಗಳು ಸುಲಭದಲ್ಲಿ ಕನ್ನ ಹಾಕುವವರ ವಶವಾಗುತ್ತವೆ ಮತ್ತು ಅವು ಮಾರಲ್ಪಡುತ್ತವೆ’ ಎಂದು ಎಚ್ಚರಿಸಿದ್ದರು. 

ಟ್ರಿಬ್ಯೂನ್‌ ಪತ್ರಿಕೆ ನಡೆಸಿದ್ದ ತನಿಖೆಯಲ್ಲಿ ಆಧಾರ್‌ ಭದ್ರತೆಯಲ್ಲಿ ಲೂಪ್‌ ಹೋಲ್‌ ಇರುವುದು ಬಹಿರಂಗವಾಗಿತ್ತು.  ಆಧಾರ್‌ ಕಾರ್ಡ್‌ ಡೇಟಾ ಭದ್ರತೆ ಮತ್ತು ಸುರಕ್ಷೆಯ ಬಗ್ಗೆ ಯುಐಡಿಎಐ ಮತ್ತು ಕೇಂದ್ರ ಸರಕಾರ ಎಷ್ಟೇ ಭರವಸೆ ನೀಡಿದರೂ 12 ಡಿಜಿಟ್‌ಗಳ ಈ ವಿಶಿಷ್ಟ ಗುರುತು ಸಂಖ್ಯೆಯ ಡಾಟಾಗಳನ್ನು ಸುಲಭದಲ್ಲಿ ಮತ್ತು ಅನಿರ್ಬಂಧಿತವಾಗಿ ಪಡೆಯಬಹುದಾಗಿದೆ ಎಂಬುದು “ದ ಟ್ರಿಬ್ಯೂನ್‌’ತನಿಖೆಯಲ್ಲಿ ಬಹಿರಂಗವಾಗಿತ್ತು.

ತನ್ನ ವರದಿಗಾರರು ವಾಟ್ಸಾಪ್‌ನಲ್ಲಿ ಅನಾಮಿಕ ಮಾರಾಟಗಾರರ ಮೂಲಕ, ಪೇಟಿಎಂ ನಲ್ಲಿ ಏಜಂಟ್‌ ಒಬ್ಬರಿಗೆ ಕೇವಲ 500 ರೂ. ಪಾವತಿಸಿ  ಆಧಾರ್‌ ಡಾಟಾ ಖರೀದಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿತ್ತು.

ಖರೀದಿ ನಡೆಸಿದ ಕೇವಲ 10 ನಿಮಿಷಗಳಲ್ಲಿ ಆ ಏಜಂಟ್‌ ಪತ್ರಿಕಾ ವರದಿಗಾರನಿಗೆ ಲಾಗಿನ್‌ ಐಡಿ ಮತ್ತು ಪಾಸ್‌ ವರ್ಡ್‌ ಕೊಟ್ಟಿದ್ದಾನೆ. ಇದರ ಮೂಲಕ ನೂರು ಕೋಟಿ ಆಧಾರ್‌ ನಂಬರ್‌ಗಳಿಗೆ ಅನಿರ್ಬಂಧಿತ ಸಂಪರ್ಕ ದೊರಕಿ ಅವುಗಳಲ್ಲಿನ ಖಾಸಗಿ ಮಾಹಿತಿಗಳನ್ನು ತನಿಖಾ ವರದಿಗಾರ ಪಡೆದಿರುವುದಾಗಿ “ದ ಟ್ರಿಬ್ಯೂನ್‌’ ವರದಿ ತಿಳಿಸಿತ್ತು.

ಲಾಗ್‌ ಇನ್‌ ಗೇಟ್‌ವೇ ಮೂಲಕ ಯಾರೇ ಆದರೂ ಯಾವುದೇ ನಿರ್ದಿಷ್ಟ ಆಧಾರ್‌ ನಂಬರ್‌ ಅನ್ನು ಪೋರ್ಟಲ್‌ನಲ್ಲಿ ತಲುಪಬಹುದಾಗಿದ್ದು ಆ ನಂಬರ್‌ನ ವ್ಯಕ್ತಿಯ ಹೆಸರು, ವಿಳಾಸ, ಪೋಸ್ಟಲ್‌ ಕೋಡ್‌, ಫೋಟೋ, ಫೋನ್‌ ನಂಬರ್‌, ಇ-ಮೇಲ್‌ ವಿಳಾಸ ಇತ್ಯಾದಿಗಳನ್ನು ಸುಲಭದಲ್ಲಿ ಪಡೆಯಬಹುದಾಗಿದೆ. ಇದಕ್ಕಿಂತ ಗಂಭೀರವಾದ ಇನ್ನೊಂದು ಆಘಾತಕಾರಿ ಸಂಗತಿ ಎಂದರೆ ಹೆಚ್ಚುವರಿಯಾಗಿ 300 ರೂ.ಗಳನ್ನು ಏಜಂಟ್‌ಗೆ ಪಾವತಿಸಿದರೆ ಆಧಾರ್‌ ಕಾರ್ಡ್‌ ಪ್ರಿಂಟ್‌ ಮಾಡಬಲ್ಲ ಸಾಫ್ಟ್ ವೇರನ್ನು ಕೂಡ ಆತ ಒದಗಿಸುತ್ತಾನೆ ಎಂದು ಪತ್ರಿಕಾ ವರದಿ ತಿಳಿಸಿತ್ತು.

ಟಾಪ್ ನ್ಯೂಸ್

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-wqeqwewqe

J&K ಸಂಸದ ಇಂಜಿನಿಯರ್ ರಶೀದ್ ಗೆ ಕೈಕೊಟ್ಟು ಎನ್ ಸಿ ಸೇರಿದ ಅಭ್ಯರ್ಥಿ!

1-modi-BG

Modi 100 days; ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ತಳಹದಿ ಸಿದ್ಧಪಡಿಸಲಾಗುತ್ತಿದೆ

1-shah

J-K ಉಗ್ರವಾದ ಯಾರೂ ಪುನರುಜ್ಜೀವನಗೊಳಿಸುವ ಧೈರ್ಯ ತೋರದಂತೆ ಸಮಾಧಿ: ಶಾ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.