![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Apr 26, 2017, 9:25 AM IST
ಮುಂಬಯಿ: ಬಾಲಿವುಡ್ ನಟ, ನಿರ್ಮಾಪಕ, ನಿರ್ದೇಶಕ ಅಮೀರ್ಖಾನ್ಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮಗಳಿಗೂ ದೂರದ ಸಂಬಂಧ. 16 ವರ್ಷ (2001)ಗಳ ಬಳಿಕ ಅವರು ಅಂಥ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಆರ್ಎಸ್ಎಸ್ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೊಡಮಾಡುವ ‘ಮಾಸ್ಟರ್ ದೀನಾನಾಥ್ ಮಂಗೇಶ್ಕರ್ ಪ್ರಶಸ್ತಿ’ಯನ್ನು ಅಮೀರ್ಖಾನ್ ಸಂಘಟನೆ ಮುಖ್ಯಸ್ಥ ಮೋಹನ್ ಭಾಗವತ್ರಿಂದ ಸ್ವೀಕರಿಸಿದರು. ‘ದಂಗಲ್’ ಸಿನೆಮಾಕ್ಕಾಗಿ ಈ ಗೌರವ ಕೊಡಮಾಡಲಾಗಿದೆ. ಲಗಾನ್ ಆಸ್ಕರ್ ಪ್ರಶಸ್ತಿಯ ಅತ್ಯುತ್ತಮ ಸಿನೆಮಾ ವಿಭಾಗಕ್ಕೆ ಆಯ್ಕೆಯಾಗಿದ್ದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಮೀರ್ ಭಾಗವಹಿಸಿದ್ದಾರೆ. ಮಾಜಿ ಕ್ರಿಕೆಟಿಗ ಕಪಿಲ್ದೇವ್, ಹಿರಿಯ ನಟಿ ವೈಜಯಂತಿಮಾಲಾಗೂ ಇದೇ ಪ್ರಶಸ್ತಿ ನೀಡಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.