![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Aug 11, 2020, 6:20 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಫೇಸ್ಬುಕ್ ಸಿಬಂದಿಯ ಸಮಯಪ್ರಜ್ಞೆ ಮತ್ತು ಎಚ್ಚೆತ್ತ ಎರಡು ರಾಜ್ಯಗಳ ಪೊಲೀಸರ ಶ್ರಮದಿಂದಾಗಿ ಆರ್ಥಿಕ ಸಂಕಷ್ಟದಿಂದ ಬೇಸತ್ತು ಆತ್ಮಹತ್ಯೆಗೆ ಮುಂದಾಗಿದ್ದ ವ್ಯಕ್ತಿಯೊಬ್ಬ ನಿರ್ಧಾರ ಬದಲಾಯಿಸಿಕೊಂಡ ಕತೆ ಇದು!
ಲಾಕ್ಡೌನ್ನಿಂದಾಗಿ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಗೆ ಸಿದ್ಧನಾಗಿದ್ದ ವ್ಯಕ್ತಿಯೊಬ್ಬನ ಜೀವ ಉಳಿಸುವಲ್ಲಿ ಫೇಸ್ಬುಕ್ ಸಿಬಂದಿ, ಮಹಾರಾಷ್ಟ್ರ ಮತ್ತು ದಿಲ್ಲಿ ಪೊಲೀಸರ ಯತ್ನ ಯಶಸ್ವಿಯಾಗಿದೆ.
ಮುಂಬಯಿಯಲ್ಲಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಕೆಲವು ವೀಡಿಯೋಗಳನ್ನು ತನ್ನ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದ. ಅಯರ್ಲಂಡ್ನಲ್ಲಿರುವ ಫೇಸ್ಬುಕ್ ಕಚೇರಿಯ ಸಿಬಂದಿ ಇದನ್ನು ಗಮನಿಸಿ, ಆತನನ್ನು ಉಳಿಸುವ ಸಲುವಾಗಿ ರವಿವಾರ ಸಂಜೆ 7 ಗಂಟೆಗೆ ದಿಲ್ಲಿ ಸೈಬರ್ ವಿಭಾಗದ ಡಿಸಿಪಿ ಅನ್ಯೆಶ್ ರಾಯ್ ಅವರನ್ನು ಸಂಪರ್ಕಿಸಿದ್ದರು. ವ್ಯಕ್ತಿ ಆತ್ಮಹತ್ಯೆಗೆ ಚಿಂತಿಸುತ್ತಿರುವುದರ ಕುರಿತು ವಿವರಿಸಿ, ಆತನ ಫೇಸ್ಬುಕ್ ಅಕೌಂಟ್ನಲ್ಲಿದ್ದ ಮೊಬೈಲ್ ನಂಬರ್ ರವಾನಿಸಿದ್ದರು.
ದಿಲ್ಲಿಯಲ್ಲಿ ಪರಿಶೀಲನೆ
ನಂಬರ್ ಬಗ್ಗೆ ಪರಿಶೀಲನೆ ನಡೆಸಿದಾಗ ಅದು ಪೂರ್ವ ದಿಲ್ಲಿಯ ಮನೆಯದ್ದು ಎಂದು ವಿಳಾಸ ಪತ್ತೆ ಹಚ್ಚಲಾಯಿತು. ಬಳಿಕ ಅನ್ಯೆಶ್ ರಾಯ್ ಅವರು ಪೂರ್ವ ವಿಭಾಗದ ಪೊಲೀಸ್ ಅಧಿಕಾರಿ ಜಸ್ಮಿತ್ ಸಿಂಗ್ಗೆ ವಿಷಯ ತಿಳಿಸಿದರು. ಆ ವಿಳಾಸವಿದ್ದ ಮನೆಗೆ ಪೊಲೀಸರು ತೆರಳಿದಾಗ ವ್ಯಕ್ತಿಯ ಪತ್ನಿ ಮಾತ್ರ ಇದ್ದರು. ಆಕೆಗೆ ಪತಿ ಪೋಸ್ಟ್ ಮಾಡಿದ ವೀಡಿಯೋ ಬಗ್ಗೆ ಏನೂ ತಿಳಿದಿರಲಿಲ್ಲ. ಫೇಸ್ಬುಕ್ ಅಕೌಂಟ್ನಲ್ಲಿರುವ ನಂಬರ್ ನನ್ನದು. ಆದರೆ ಖಾತೆಯನ್ನು ನನ್ನ ಪತಿ ಬಳಸುತ್ತಿದ್ದಾರೆ. ಇತ್ತೀಚೆಗೆ ನನ್ನೊಂದಿಗೆ ಜಗಳವಾಡಿ ಮುಂಬಯಿಗೆ ಹೋಗಿದ್ದಾರೆ. ಅಲ್ಲಿ ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ’ ಎಂದಿದ್ದಳಾಕೆ.
ಮುಂಬಯಿಯಲ್ಲಿ ಹುಡುಕಾಟ
ಡಿಸಿಪಿ ರಾಯ್, ರಾತ್ರಿ 9.30ಕ್ಕೆ ಮುಂಬಯಿ ಡಿಸಿಪಿ ಡಾ| ರಶ್ಮಿ ಅವರನ್ನು ಸಂಪರ್ಕಿಸಿದರು. ಆತನ ಪತ್ನಿ ಕೊಟ್ಟಿದ್ದ ನಂಬರ್ಗೆ ಕರೆ ಮಾಡಿ ದಾಗ ಸ್ವಿಚ್ಆಫ್ ಆಗಿತ್ತು. ಆಗ ಪೊಲೀಸರು ವ್ಯಕ್ತಿಯ ತಾಯಿಗೆ ಫೋನ್ ಮಾಡಿ, ಪುತ್ರನಿಗೆ ಕೂಡಲೇ ವಾಟ್ಸ್ ಆ್ಯಪ್ ವೀಡಿಯೋ ಕರೆ ಮಾಡುವಂತೆ ತಿಳಿಸಿದರು. ತಾಯಿ ಕರೆ ಮಾಡಿ ದಾಗ ಕಟ್ಟಾಯಿತು. ಪೊಲೀಸರು ಕರೆ ಮಾಡಿ, ದುಡುಕಿನ ನಿರ್ಧಾರ ಕೈಗೊಳ್ಳದಂತೆ ಮನವೊಲಿ ಸಿದರು. ತಡರಾತ್ರಿ 1.30ಕ್ಕೆ ಪೊಲೀಸರ ತಂಡ ಆತನಿದ್ದ ಸ್ಥಳವನ್ನು ಪತ್ತೆಹಚ್ಚಿ ಕೌನ್ಸೆಲಿಂಗ್ಗೆ ಒಳಪಡಿಸಿತು. ಆತ್ಮಹತ್ಯೆ ಯೋಚನೆಯಿಂದ ಹಿಂದೆಗೆವಂತೆ ಮಾಡುವಲ್ಲಿ ಯಶಸ್ವಿಯಾಯಿತು.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.