![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Aug 28, 2019, 4:30 PM IST
ಅದೃಷ್ಟ ಅನ್ನುವುದು ಮನುಷ್ಯನಿಗೆ ಸಿಗುವ ಅಪರೂಪದ ಉಡುಗೊರೆ. ಎಲ್ಲರ ಜೀವನದಲ್ಲಿ ಒಳ್ಳೆಯ ದಿನಗಳು ಬಂದೇ ಬರುತ್ತದೆ ಆ ಸಮಯ ಮಾತ್ರ ಗೌಪ್ಯ ಅಷ್ಟೇ. ಮೊನ್ನೆಯಷ್ಟೇ ಸ್ಟೇಷನ್ ಒಂದರಲ್ಲಿ ಹಾಡು ಹಾಡುತ್ತಾ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ರಾನು ಮಂಡಲ್ ಎನ್ನುವ ಮಹಿಳೆ ಇಂದು ಬಾಲಿವುಡ್ ಅಂಗಳಕ್ಕೆ ಬಂದಿದ್ದಾರೆ ಅಂದರೆ ಅದು ಅವರ ಅದೃಷ್ಟವೇ ಸರಿ.
ರಾನು ಮಂಡಲ್ ಪಶ್ಚಿಮ ಬಂಗಾಳದ ರಣಘಾಟ್ ರೈಲ್ವೇ ನಿಲ್ದಾಣದಲ್ಲಿ ಲತಾ ಮಂಗೇಶ್ಕರ್ ರವರ ಜನಪ್ರಿಯ ಹಾಡು ‘ಏಕ್ ಪ್ಯಾರ್ ಕಾ ನಗ್ಮಾ’ ಎನ್ನುವ ಹಾಡನ್ನು ಹಾಡುತ್ತಿರುವಾಗ ವ್ಯಕ್ತಿ ಒಬ್ಬರು ಇದನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಾರೆ. ನೋಡ ನೋಡುತ್ತಿದ್ದಂತೆ ರಾತ್ರೋ ರಾತ್ರಿ ರಾನು ಮಂಡಲ್ ಕಂಚಿನ ಧ್ವನಿ ಎಲ್ಲೆಡೆ ಸಂಚಲನ ಮೂಡಿಸುತ್ತದೆ. ಇಲ್ಲಿಂದ ರಾನು ಮಂಡಲ್ ಜೀವನದ ಪಥವೇ ಬದಲಾಗುತ್ತದೆ.
ಹಿಂದಿಯ ಖ್ಯಾತ ಗಾಯಕ ಹಿಮೇಶ್ ರೆಶ್ ಮಿಯಾ ರಾನು ಮಂಡಲ್ ಗಾಗಿ “ತೇರಿ ಮೇರಿ ಕಹಾನಿ” ಅನ್ನುವ ಹಾಡನ್ನು ರೆಕಾರ್ಡ್ ಮಾಡಿಸಿದ್ದಾರೆ. ಈ ಹಾಡನ್ನು ಹಿಮೇಶ್ ತಮ್ಮ ಮುಂದಿನ ಚಿತ್ರದಲ್ಲಿ ಅಳವಡಿಸಿಕೊಳ್ಳಲಿದ್ದಾರೆ. ರಾನು ಹಾಡಿದ ಈ ಹಾಡು ವೈರಲ್ ಆಗಿದೆ. ಸದ್ಯ ರಾನು ಮಂಡಲ್ ಬಾಲಿವುಡ್ ಮಾತ್ರವಲ್ಲ ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
ಈಗ ರಾನು ಮಂಡಲ್ ಗಾಗಿ ನಟ ಸಲ್ಮಾನ್ ಖಾನ್ 55 ಲಕ್ಷ ಮೌಲ್ಯದ ಬಂಗಲೆಯನ್ನು ಉಡುಗೊರೆ ಆಗಿ ಕೊಟ್ಟಿದ್ದಾರೆ ಎನ್ನುವ ವರದಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ ಸಲ್ಮಾನ್ ಖಾನ್ ತಮ್ಮ ದಬಾಂಗ್-3 ಚಿತ್ರಕ್ಕಾಗಿ ರಾನು ಮಂಡಲ್ ರಿಂದ ಹಾಡನ್ನು ರೆಕಾರ್ಡ್ ಮಾಡಲು ಇಚ್ಛಿಸಿದ್ದು, 55 ಲಕ್ಷ ಮೌಲ್ಯವುಳ್ಳ ಬಂಗಲೆಯನ್ನು ಉಡುಗೊರೆ ಆಗಿ ನೀಡಿದ್ದರ ಬಗ್ಗೆ ಇನ್ನಷ್ಟೇ ಖಚಿತ ಮಾಹಿತಿ ಹೊರ ಬೀಳಬೇಕಿದೆ.
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.