![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Feb 25, 2023, 6:25 AM IST
ನವದೆಹಲಿ: ಅದಾನಿ-ಹಿಂಡನ್ಬರ್ಗ್ ಪ್ರಕರಣದ ಕುರಿತು ವರದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ಪ್ರತಿಬಂಧಕಾಜ್ಞೆ ಹೊರಡಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಮಾಧ್ಯಮಗಳಿಗೆ ವರದಿ ಪ್ರಸಾರ ಮಾಡದಂತೆ ನಿರ್ಬಂಧ ಹೇರಬೇಕು ಎಂದು ಕೋರಿ ವಕೀಲ ಎಂ.ಎಲ್.ಶರ್ಮಾ ಸಲ್ಲಿಸಿದ್ದ ಅರ್ಜಿಯ ವಿಚಾ ರಣೆ ನಡೆಸಿದ ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, “ಪ್ರಕರಣದ ಪರಿಶೀಲ ನೆಗೆ ಸಮಿತಿ ರಚಿಸುವ ಕುರಿತು ಆದೇಶ ಹೊರ ಬೀಳು ವವರೆಗೂ ಮಾಧ್ಯಮಗಳಿಗೆ ನಿರ್ಬಂಧ ಹೇರಲು ಸಾಧ್ಯವಿಲ್ಲ’ ಎಂದು ಹೇಳಿದೆ.
12 ಲಕ್ಷ ಕೋಟಿ ನಷ್ಟ: ಈ ನಡುವೆ, ಹಿಂಡನ್ಬರ್ಗ್ ವರದಿ ಪರಿಣಾಮವೆಂಬಂತೆ, ಕೇವಲ ಒಂದು ತಿಂಗಳಲ್ಲಿ ಅದಾನಿ ಗ್ರೂಪ್ನ 10 ಕಂಪನಿಗಳ ಮಾರುಕಟ್ಟೆ ಮೌಲ್ಯ 12 ಲಕ್ಷ ಕೋಟಿ ರೂ.ಗಳಷ್ಟು ಕುಸಿತ ಕಂಡಿದೆ. ಜನವರಿ 24ಕ್ಕೂ ಮುಂಚೆ ಅದಾನಿ ಗ್ರೂಪ್ ಮೌಲ್ಯ 19 ಲಕ್ಷ ಕೋಟಿ ರೂ.ಗಳಾಗಿದ್ದವು. ಈಗ ಅದು 7.2 ಲಕ್ಷ ಕೋಟಿ ರೂ.ಗೆ ಇಳಿದಿದೆ.
ಖರೀದಿ ಮೊತ್ತಕ್ಕಿಂತಲೂ ಕೆಳಗಿಳಿದ ಮೌಲ್ಯ: ಇದೇ ವೇಳೆ, ಎಲ್ಐಸಿ ಬಳಿಯಿದ್ದ ಅದಾನಿ ಗ್ರೂಪ್ನ 7 ಕಂಪನಿಗಳ ಷೇರುಗಳ ಮೌಲ್ಯವು ಖರೀದಿ ಮೊತ್ತಕ್ಕಿಂತಲೂ ಕೆಳಗಿಳಿದಿದ್ದು, ಶೇ.11 ರಷ್ಟು ಕುಸಿತ ಕಂಡಿದೆ. ಕಂಪನಿಗಳ ಷೇರುಗಳನ್ನು ಎಲ್ಐಸಿ 30,127 ಕೋಟಿ ರೂ.ಗಳಿಗೆ ಖರೀದಿಸಿತ್ತು. ಶುಕ್ರವಾರ ಇವುಗಳ ಮೌಲ್ಯ 26,862 ಕೋಟಿ ರೂ.ಗಳಿಗೆ ತಲುಪಿದೆ .
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.