![Udupi: ಗೀತಾರ್ಥ ಚಿಂತನೆ-187: ಭಗವಂತನಿಗಿಲ್ಲದ ಸ್ವಾಭಾವಿಕ, ನೈಮಿತ್ತಿಕ ನಾಶ](https://www.udayavani.com/wp-content/uploads/2025/02/puttige-shree-1-415x250.jpg)
![Udupi: ಗೀತಾರ್ಥ ಚಿಂತನೆ-187: ಭಗವಂತನಿಗಿಲ್ಲದ ಸ್ವಾಭಾವಿಕ, ನೈಮಿತ್ತಿಕ ನಾಶ](https://www.udayavani.com/wp-content/uploads/2025/02/puttige-shree-1-415x250.jpg)
Team Udayavani, Nov 21, 2024, 12:02 PM IST
ಹೊಸದಿಲ್ಲಿ: ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿಗೆ (Gautam Adani) ಮತ್ತೊಂದು ಹೊಡೆತ ಬಿದ್ದಿದ್ದು, ಹೂಡಿಕೆದಾರರನ್ನು ವಂಚಿಸಿದ ಮತ್ತು ಭಾರತೀಯ ಅಧಿಕಾರಿಗಳಿಗೆ ಲಂಚ ನೀಡುವ ಯೋಜನೆಯನ್ನು ಮರೆಮಾಚಿದ್ದಾರೆ ಎಂದು ಯುಎಸ್ ಪ್ರಾಸಿಕ್ಯೂಟರ್ಗಳು ಆರೋಪಿಸಿದ್ದಾರೆ.
ಉಪಖಂಡದಲ್ಲಿ ತನ್ನ ಕಂಪನಿಯ ಬೃಹತ್ ಸೌರಶಕ್ತಿ ಯೋಜನೆಯು ಲಂಚದ ಯೋಜನೆಯಿಂದ ಸುಗಮಗೊಳಿಸಲಾಗುತ್ತಿದೆ ಎಂದು ಮರೆಮಾಚುವ ಮೂಲಕ ಅದಾನಿ ಹೂಡಿಕೆದಾರರನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ನ್ಯೂಯಾರ್ಕ್ನ ಈಸ್ಟರ್ನ್ ಡಿಸ್ಟ್ರಿಕ್ಟ್ಗಾಗಿ ಯುನೈಟೆಡ್ ಸ್ಟೇಟ್ಸ್ ಡಿಸ್ಟ್ರಿಕ್ಟ್ ಕೋರ್ಟ್ನಲ್ಲಿ ಕ್ರಿಮಿನಲ್ ದೋಷಾರೋಪಣೆ ಮಾಡಲಾಗಿದೆ.
ಯುಎಸ್ ಪ್ರಾಸಿಕ್ಯೂಟರ್ ಗಳು ಅದಾನಿ ಗ್ರೂಪ್ ನ ಅಧ್ಯಕ್ಷ ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಇತರ ಆರು ಮಂದಿಯನ್ನು ರಾಜ್ಯ ವಿದ್ಯುತ್ ವಿತರಣಾ ಕಂಪನಿಗಳೊಂದಿಗೆ ಸೌರ ವಿದ್ಯುತ್ ಒಪ್ಪಂದಗಳನ್ನು ಪಡೆದುಕೊಳ್ಳಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ರೂ 2,029 ಕೋಟಿ ($265 ಮಿಲಿಯನ್) ಲಂಚವನ್ನು ಪಾವತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ವಿನೀತ್ ಎಸ್ ಜೈನ್, ರಂಜಿತ್ ಗುಪ್ತಾ, ರೂಪೇಶ್ ಅಗರ್ವಾಲ್, ಸೌರಭ್ ಅಗರ್ವಾಲ್, ದೀಪಕ್ ಮಲ್ಹೋತ್ರಾ ವಿರುದ್ದ ಕೇಸು ದಾಖಲಿಸಲಾಗಿದೆ.
ಯುಎಸ್ ಬ್ಯಾಂಕ್ಗಳು ಮತ್ತು ಹೂಡಿಕೆದಾರರಿಂದ ಸತ್ಯವನ್ನು ಮರೆಮಾಚಿ ಸೌರಶಕ್ತಿ ಯೋಜನೆಗಾಗಿ ಅದಾನಿ ಗ್ರೂಪ್ ಶತಕೋಟಿ ಹಣವನ್ನು ಸಂಗ್ರಹಿಸಿದ್ದಾರೆ ಎಂದು ಯುಎಸ್ ಪ್ರಾಸಿಕ್ಯೂಟರ್ಗಳು ಪ್ರತಿಪಾದಿಸಿದ್ದಾರೆ. ಅದಾನಿ ಗ್ರೂಪ್ ಇಂಧನ ಒಪ್ಪಂದಗಳನ್ನು ಪಡೆದುಕೊಳ್ಳುವ ಮೂಲಕ $2 ಶತಕೋಟಿ ಲಾಭವನ್ನು ಗಳಿಸಲು ಆಶಿಸಿದೆ.
Illegal money case: ಆಪ್ ನಾಯಕನ ವಿರುದ್ಧ ಕ್ರಮಕ್ಕೆ ರಾಷ್ಟ್ರಪತಿಗೆ ಕೇಂದ್ರ ಮನವಿ
Supreme Court: ನಿಯಮ ಉಲ್ಲಂಘಿಸಿದ ಈಶಾ ವಿರುದ್ಧ ಅರ್ಜಿ ವಿಳಂಬ: ತ.ನಾಡಿಗೆ ಸುಪ್ರೀಂ ತರಾಟೆ
Maharashtra: ಮತ್ತೆ ಇಬ್ಬರಿಗೆ ಜಿಬಿಎಸ್: ಪ್ರಕರಣ 205ಕ್ಕೇರಿಕೆ
Supreme Court : ಪಕ್ಷಗಳು ಆರ್ಟಿಐ ವ್ಯಾಪ್ತಿಗೆ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ
Manipur: ರಾಷ್ಟ್ರಪತಿ ಆಳ್ವಿಕೆಗೆ ಕುಕಿ ಸ್ವಾಗತ,ಮೈತೇಯಿ ವಿರೋಧ
Udupi: ಗೀತಾರ್ಥ ಚಿಂತನೆ-187: ಭಗವಂತನಿಗಿಲ್ಲದ ಸ್ವಾಭಾವಿಕ, ನೈಮಿತ್ತಿಕ ನಾಶ
Modi-Trump ಮೆಗಾ ಡೀಲ್; ರಕ್ಷಣೆ, ಇಂಧನ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಹಭಾಗಿತ್ವ ಚರ್ಚೆ
Mangaluru: ಲಕ್ಷದ್ವೀಪದಿಂದ ಮಂಗಳೂರಿಗೆ ಬಂದ “ಚೆರಿಯಪಾನಿ’
Manipal: ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮನ್ನಣೆಗೆ ಮಾಹೆ ಚಿಂತನೆ: ಡಾ| ಎಂ.ಡಿ. ವೆಂಕಟೇಶ್
Kaup: ಹರಿದ್ವಾರದಿಂದ ನವಕುಂಭಗಳಲ್ಲಿ ತರಲಾದ ಗಂಗಾಜಲಕ್ಕೆ ಅದ್ದೂರಿ ಸ್ವಾಗತ
You seem to have an Ad Blocker on.
To continue reading, please turn it off or whitelist Udayavani.