![Drug Case: ಮತ್ತೆ ಜೀವ ಪಡೆದ ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್: ಸಂಜನಾ ಗಲ್ರಾನಿಗೆ ಸಂಕಷ್ಟ](https://www.udayavani.com/wp-content/uploads/2025/02/sanjana-415x233.jpg)
![Drug Case: ಮತ್ತೆ ಜೀವ ಪಡೆದ ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್: ಸಂಜನಾ ಗಲ್ರಾನಿಗೆ ಸಂಕಷ್ಟ](https://www.udayavani.com/wp-content/uploads/2025/02/sanjana-415x233.jpg)
Team Udayavani, Nov 21, 2024, 12:02 PM IST
ಹೊಸದಿಲ್ಲಿ: ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿಗೆ (Gautam Adani) ಮತ್ತೊಂದು ಹೊಡೆತ ಬಿದ್ದಿದ್ದು, ಹೂಡಿಕೆದಾರರನ್ನು ವಂಚಿಸಿದ ಮತ್ತು ಭಾರತೀಯ ಅಧಿಕಾರಿಗಳಿಗೆ ಲಂಚ ನೀಡುವ ಯೋಜನೆಯನ್ನು ಮರೆಮಾಚಿದ್ದಾರೆ ಎಂದು ಯುಎಸ್ ಪ್ರಾಸಿಕ್ಯೂಟರ್ಗಳು ಆರೋಪಿಸಿದ್ದಾರೆ.
ಉಪಖಂಡದಲ್ಲಿ ತನ್ನ ಕಂಪನಿಯ ಬೃಹತ್ ಸೌರಶಕ್ತಿ ಯೋಜನೆಯು ಲಂಚದ ಯೋಜನೆಯಿಂದ ಸುಗಮಗೊಳಿಸಲಾಗುತ್ತಿದೆ ಎಂದು ಮರೆಮಾಚುವ ಮೂಲಕ ಅದಾನಿ ಹೂಡಿಕೆದಾರರನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ನ್ಯೂಯಾರ್ಕ್ನ ಈಸ್ಟರ್ನ್ ಡಿಸ್ಟ್ರಿಕ್ಟ್ಗಾಗಿ ಯುನೈಟೆಡ್ ಸ್ಟೇಟ್ಸ್ ಡಿಸ್ಟ್ರಿಕ್ಟ್ ಕೋರ್ಟ್ನಲ್ಲಿ ಕ್ರಿಮಿನಲ್ ದೋಷಾರೋಪಣೆ ಮಾಡಲಾಗಿದೆ.
ಯುಎಸ್ ಪ್ರಾಸಿಕ್ಯೂಟರ್ ಗಳು ಅದಾನಿ ಗ್ರೂಪ್ ನ ಅಧ್ಯಕ್ಷ ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಇತರ ಆರು ಮಂದಿಯನ್ನು ರಾಜ್ಯ ವಿದ್ಯುತ್ ವಿತರಣಾ ಕಂಪನಿಗಳೊಂದಿಗೆ ಸೌರ ವಿದ್ಯುತ್ ಒಪ್ಪಂದಗಳನ್ನು ಪಡೆದುಕೊಳ್ಳಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ರೂ 2,029 ಕೋಟಿ ($265 ಮಿಲಿಯನ್) ಲಂಚವನ್ನು ಪಾವತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ವಿನೀತ್ ಎಸ್ ಜೈನ್, ರಂಜಿತ್ ಗುಪ್ತಾ, ರೂಪೇಶ್ ಅಗರ್ವಾಲ್, ಸೌರಭ್ ಅಗರ್ವಾಲ್, ದೀಪಕ್ ಮಲ್ಹೋತ್ರಾ ವಿರುದ್ದ ಕೇಸು ದಾಖಲಿಸಲಾಗಿದೆ.
ಯುಎಸ್ ಬ್ಯಾಂಕ್ಗಳು ಮತ್ತು ಹೂಡಿಕೆದಾರರಿಂದ ಸತ್ಯವನ್ನು ಮರೆಮಾಚಿ ಸೌರಶಕ್ತಿ ಯೋಜನೆಗಾಗಿ ಅದಾನಿ ಗ್ರೂಪ್ ಶತಕೋಟಿ ಹಣವನ್ನು ಸಂಗ್ರಹಿಸಿದ್ದಾರೆ ಎಂದು ಯುಎಸ್ ಪ್ರಾಸಿಕ್ಯೂಟರ್ಗಳು ಪ್ರತಿಪಾದಿಸಿದ್ದಾರೆ. ಅದಾನಿ ಗ್ರೂಪ್ ಇಂಧನ ಒಪ್ಪಂದಗಳನ್ನು ಪಡೆದುಕೊಳ್ಳುವ ಮೂಲಕ $2 ಶತಕೋಟಿ ಲಾಭವನ್ನು ಗಳಿಸಲು ಆಶಿಸಿದೆ.
Rajya Sabha: ವಿಪಕ್ಷಗಳ ತೀವ್ರ ವಿರೋಧದ ನಡುವೆ ವಕ್ಫ್ ಮಸೂದೆ ಕುರಿತ ಜೆಪಿಸಿ ವರದಿ ಮಂಡನೆ
Tirupati: ತಿರುಮಲ ಬೆಟ್ಟದ ಸಮೀಪ ಮುಮ್ತಾಜ್ ಹೋಟೆಲ್ ನಿರ್ಮಾಣ; ಸಾಧುಗಳ ಆಕ್ರೋಶ
Video: ಹೇಳಿಕೆ ಇಲ್ಲದಿದ್ದರೂ ಮದುವೆ ಹಾಲ್ ಗೆ ಬಂದು ಸರ್ಪ್ರೈಸ್ ನೀಡಿದ ಚಿರತೆ…
Jamui: ಸಾಲ ರಿಕವರಿಗೆ ಬಂದ ಏಜೆಂಟ್ ನನ್ನೇ ಮದುವೆಯಾದ ವಿವಾಹಿತ ಮಹಿಳೆ!
U.P: ರಿಷಭ್ ಪಂತ್ ಜೀವ ಉಳಿಸಿದ್ದ ರಜತ್ ಗೆಳತಿಯೊಂದಿಗೆ ಆತ್ಮಹ*ತ್ಯೆಗೆ ಯತ್ನ: ಆಗಿದ್ದೇನು?
Mangaluru: ‘ಶಿವದೂತೆ ಗುಳಿಗೆ’ ಬಳಿಕ ‘ಶಿವಾಜಿ’ ಸಂಚಲನ!
Drug Case: ಮತ್ತೆ ಜೀವ ಪಡೆದ ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್: ಸಂಜನಾ ಗಲ್ರಾನಿಗೆ ಸಂಕಷ್ಟ
Job Opportunities: ಕರ್ನಾಟಕ ಲೋಕಸೇವಾ ಆಯೋಗ-945 ವಿವಿಧ ಹುದ್ದೆಗೆ ಅರ್ಜಿ ಆಹ್ವಾನ
Rajat: 3 ವರ್ಷದ ಹಿಂದೆ ಅನ್ ಸೋಲ್ಡ್.. ಈಗ ಆರ್ಸಿಬಿ ನಾಯಕ: ರಜತ್ ಕ್ರಿಕೆಟ್ ಪಯಣವೇ ರೋಚಕ
Udupi: ಶ್ರೀ ಕೃಷ್ಣಮಠಕ್ಕೆ ಗೋವಾ ಸಿಎಂ ಡಾ| ಪ್ರಮೋದ್ ಸಾವಂತ್ ಭೇಟಿ
You seem to have an Ad Blocker on.
To continue reading, please turn it off or whitelist Udayavani.