ISIS ಭಾರತದಲ್ಲಿ ರೈಲು ಸ್ಫೋಟಿಸಿ: ಕೆಫೆ ಸ್ಫೋಟದ ಆರೋಪಿ ಕರೆ
ಟೆಲಿಗ್ರಾಮ್ನಲ್ಲಿ ಐಸಿಸ್ ಉಗ್ರ ಫರ್ಹತುಲ್ಲಾ ಘೋರಿ ವೀಡಿಯೋ ; ಸ್ಲೀಪರ್ ಉಗ್ರರಿಗೆ ಸ್ಫೋಟದ ಕರೆ
Team Udayavani, Aug 29, 2024, 7:30 AM IST
ಹೊಸದಿಲ್ಲಿ/ಬೆಂಗಳೂರು: “ಭಾರತದಾದ್ಯಂತ ರೈಲುಗಳನ್ನು ಹಳಿ ತಪ್ಪಿಸಿ, ದಾಳಿ ನಡೆಸಿ, ಕುಕ್ಕರ್ ಬಾಂಬ್, ಪೆಟ್ರೋಲಿಯಂ ಲೈನ್ಗಳನ್ನು ಸ್ಫೋಟಿಸಿ ಹಾಗೂ ಹಿಂದೂ ನಾಯಕರನ್ನು ಹತ್ಯೆ ಮಾಡಿ’… ಹೀಗೆಂದು ಪಾಕಿಸ್ಥಾನ ಮೂಲದ ಐಸಿಸ್ ಉಗ್ರ ಫರ್ಹತುಲ್ಲಾ ಘೋರಿ ಭಾರತದಲ್ಲಿರುವ ಉಗ್ರರ ಸ್ಲೀಪರ್ ಸೆಲ್ಗಳಿಗೆ ಕರೆ ನೀಡಿದ್ದಾನೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಐಇಡಿ ಸ್ಫೋಟದ ಕುತಂತ್ರಿಯಾಗಿರುವ ಈತ ಟೆಲಿಗ್ರಾಂ ವೀಡಿಯೋ ಮೂಲಕ ಈ ಕರೆ ನೀಡಿದ್ದು, ಭಾರತೀಯ ಗುಪ್ತ ಚರ ಸಂಸ್ಥೆಗಳು ಚುರುಕಾಗಿವೆ.
ದೇಶಾದ್ಯಂತ ರೈಲುಗಳನ್ನು ಹಳಿ ತಪ್ಪಿಸುವಂತೆ ಕರೆ ನೀಡಿದ್ದಾನೆ. ಪ್ರಶರ್ ಕುಕ್ಕರ್ ಬಳಸಿ ಹೇಗೆಲ್ಲ ಬಾಂಬ್ ಸ್ಫೋಟಿಸಬಹುದೆಂದು ವಿವರಿಸಿದ್ದಾನೆ. ಜತೆಗೆ ಹಿಂದೂ ನಾಯಕರನ್ನೂ ಗುರಿಯಾಗಿಸಿ ದಾಳಿ ನಡೆಸಿ ಎಂದೂ ಪ್ರೇರೇಪಿಸಿದ್ದಾನೆ ಎಂದು ಗುಪ್ತ ಚರ ಮೂಲಗಳು ತಿಳಿಸಿವೆ.
ತನಿಖಾ ಸಂಸ್ಥೆಗಳ ನಡುಗಿಸಿ ಭಾರತದ ತನಿಖಾ ಸಂಸ್ಥೆಗಳ ಬಗ್ಗೆಯೂ ಘೋರಿ ಮಾತನಾಡಿದ್ದು, “ಭಾರತ ಸರಕಾರವು ಜಾರಿ ನಿರ್ದೇಶನಾಲಯ, ರಾಷ್ಟ್ರೀಯ ತನಿಖಾ ಸಂಸ್ಥೆಗಳ (ಎನ್ಐಎ) ಮೂಲಕ ಸ್ಲೀಪರ್ ಸೆಲ್ಗಳ ಆಸ್ತಿ ಜಪ್ತಿ ಮಾಡಿ ನಮ್ಮ ಬಲ ಕುಗ್ಗಿಸುತ್ತಿದೆ. ಆದರೆ ನಾವು ದಾಳಿಗಳ ಮೂಲಕ ವಾಪಸಾಗಿ ಭಾರತ ಸರಕಾರವನ್ನು ನಡುಗಿಸಬೇಕು’ ಎಂದೂ ಹೇಳಿದ್ದಾನೆ ಎನ್ನಲಾಗಿದೆ. ಇನ್ನು ಇತ್ತೀಚೆಗಷ್ಟೇ (ಆ. 17ರಂದು) ಸಬರಮತಿ ಎಕ್ಸ್ಪ್ರೆಸ್ ರೈಲು ಉತ್ತರಪ್ರದೇಶದ ಕಾನ್ಪುರದಲ್ಲಿ ಹಳಿ ತಪ್ಪಿತ್ತು. ಅದರ ಬೆನ್ನಲ್ಲೇ ತೂತುಕುಡಿ ಎಗೊರ್ ಪರ್ಲ್ ಸಿಟಿ ಎಕ್ಸ್ಪ್ರೆಸ್ ರೈಲು ಕೂಡ ಹಳಿ ತಪ್ಪಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಇದೀಗ ಘೋರಿ ಕರೆಗೂ ಈ ಘಟನೆಗಳಿಗೂ ನಂಟು ಇರಬಹುದೇ ಎಂಬ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲೂ ತನಿಖೆ ನಡೆಯುತ್ತಿವೆ.
ಯಾರೀತ ಘೋರಿ?
ಪಾಕಿಸ್ಥಾನ ಗುಪ್ತಚರ ಸಂಸ್ಥೆಯ ನೆರವಿನೊಂದಿಗೆ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಚು ರೂಪಿಸಿದ್ದು ಮಾತ್ರವಲ್ಲದೆ, ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದ ಉಗ್ರರೊಂದಿಗೂ ಫರ್ಹತುಲ್ಲಾ ಘೋರಿ ಅಲಿಯಾಸ್ ಅಬು ಸುಫಿಯಾನ್ ಸಂಪರ್ಕ ಹೊಂದಿ ದ್ದಾನೆ. ಅಲ್ಲದೇ 2002ರ ಅಕ್ಷರ ಧಾಮ ದೇಗುಲ ದಾಳಿ (30 ಸಾವು), ಹೈದರಾಬಾದ್ನ ಕಾರ್ಯ ಪಡೆ ಮೇಲೆ 2005ರಲ್ಲಿ ನಡೆದ ದಾಳಿಯಲ್ಲೂ ಈತನ ಕೈವಾಡವಿದೆ. ಭಾರತದಲ್ಲಿ ನಡೆದ ಹಲವು ಪ್ರಮುಖ ದಾಳಿಗಳ ಹಿಂದೆಯೂ ಈತನಿದ್ದು, ಭಾರತದಲ್ಲಿ ಉಗ್ರರ ನೇಮಕಾತಿಯ ಉಸ್ತುವಾರಿಯೂ ಈತನೇ ವಹಿಸಿಕೊಂಡಿದ್ದಾನೆ ಎನ್ನಲಾಗಿದೆ. ಪುಣೆ ಐಸಿಸ್ ಮಾಡ್ನೂಲ್ ಪ್ರಕರಣದಲ್ಲೂ ದಿಲ್ಲಿ ಪೊಲೀಸರು ಈತನ ಹೆಸರು ಉಲ್ಲೇಖಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ
Chennai: ರಸ್ತೆ ಬದಿ ಪತ್ತೆಯಾದ ಸೂಟ್ಕೇಸ್ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…
Jammu Kashmir: ಯುವಕರ ಕೈಯಲ್ಲೀಗ ಕಲ್ಲುಗಳಿಲ್ಲ, ಪೆನ್ನು-ಪುಸ್ತಕಗಳಿವೆ: ಪ್ರಧಾನಿ ಮೋದಿ
West Bengal: ಪ್ರವಾಹ ಪರಿಸ್ಥಿತಿ ಅವಲೋಕಿಸಲು ಹೋದ ಸಂಸದರು, ಶಾಸಕರಿದ್ದ ದೋಣಿ ಪಲ್ಟಿ
ಪ್ರತೀ ಪೇಜರ್ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್ನ ಮೊಸಾದ್?
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!
Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ
Sep.20: ಮುನಿಯಾಲ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಕಾಲೇಜು ಘಟಿಕೋತ್ಸವ
By Election: ದ. ಕನ್ನಡ ಸ್ಥಳೀಯ ಸಂಸ್ಥೆಗಳ ಪರಿಷತ್ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ
Vijayapura: ಗ್ರಾ.ಪಂ ಕಾಯಕ ಮಿತ್ರ ಸಿಬ್ಬಂದಿ ಮೇಲೆ ಗ್ರಾಪಂ ಉಪಾಧ್ಯಕ್ಷೆ ಚಪ್ಪಲಿಯಿಂದ ಹಲ್ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.