ಪರೀಕ್ಷೆಗಿನ್ನು ಎಐ ಕೆಮರಾ ಕಣ್ಣು; ಎಲ್ಲ ಪರೀಕ್ಷಾ ಅಕ್ರಮ ತಡೆಗೆ ಕ್ರಮ

ನೀಟ್‌, ಯುಜಿಸಿ ನೆಟ್‌ ಪರೀಕ್ಷೆ ಅಕ್ರಮಗಳ ನಡುವೆ ಯುಪಿಎಸ್‌ಸಿ ನಿರ್ಧಾರ

Team Udayavani, Jun 25, 2024, 7:25 AM IST

ಪರೀಕ್ಷೆಗಿನ್ನು ಎಐ ಕೆಮರಾ ಕಣ್ಣು; ಎಲ್ಲ ಪರೀಕ್ಷಾ ಅಕ್ರಮ ತಡೆಗೆ ಕ್ರಮ

ಹೊಸದಿಲ್ಲಿ: ನೀಟ್‌-ಯುಜಿ ಮತ್ತು ಯುಜಿಸಿ ನೆಟ್‌ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದು ಸಿಬಿಐ ತನಿಖೆಗೆ ಆದೇಶವಾಗಿರುವ ನಡುವೆಯೇ ಅಂತಹ ತಪ್ಪುಗಳು ಪುನರಾವರ್ತನೆ ಆಗದಂತೆ ಕೇಂದ್ರೀಯ ಲೋಕಸೇವಾ ಆಯೋಗ (ಯುಪಿ ಎಸ್‌ಸಿ) ಮಹತ್ವದ ಹೆಜ್ಜೆಯನ್ನಿ ಟ್ಟಿದೆ. ಪರೀಕ್ಷೆಯಲ್ಲಿ ಅಕ್ರಮ ಗಳಾಗುವುದನ್ನು ತಡೆಯಲು ಎಐಆಧಾರಿತ ಸಿಸಿಟಿವಿ, ಆಧಾರ್‌ ಆಧಾರಿತ ಬೆರಳಚ್ಚು ವ್ಯವಸ್ಥೆಯಂತಹ ನೂತನ ತಂತ್ರಜ್ಞಾನಗಳನ್ನು ಅಳವಡಿಸಿ
ಕೊಳ್ಳಲು ನಿರ್ಧರಿಸಿದೆ.

ಯುಪಿಎಸ್‌ಸಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿ ಕೊಳ್ಳಲು ಜೂ. 10ರಂದೇ ನಿರ್ದಿಷ್ಟ ಕಂಪೆನಿಗಳಿಂದ ಬಿಡ್‌ ಆಹ್ವಾನಿಸಿದೆ. ಇದರ ಮೂಲಕ ಸೇವಾ ಪರೀಕ್ಷೆಗಳನ್ನು ಯಾವುದೇ ತಪ್ಪಿಲ್ಲದೆ ನಡೆಸಲು ಸಜ್ಜಾಗಿದೆ.

ಯುಪಿಎಸ್‌ಸಿಯಡಿ ಪ್ರತೀ ವರ್ಷ 23 ಬೇರೆಬೇರೆ ಪರೀಕ್ಷೆಗಳು ನಡೆಯುತ್ತವೆ. ಪೂರ್ವಭಾವಿ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವ ಒಟ್ಟು 10 ಲಕ್ಷ ಮಂದಿ ಸೇರಿ ಒಟ್ಟು 26 ಲಕ್ಷ ಅಭ್ಯರ್ಥಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಮುಖ್ಯವಾಗಿ ಕೇಂದ್ರದ ಎ ಮತ್ತು ಬಿ ಗುಂಪಿಗೆ ಸೇರಿದ ಹುದ್ದೆಗಳಿಗೆ ಯುಪಿಎಸ್‌ಸಿ ಆಯ್ಕೆ ನಡೆಸುತ್ತದೆ.

ದಿಲ್ಲಿಯಲ್ಲೂ ನೀಟ್‌ ಅಕ್ರಮ
ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಮಹಾ ರಾಷ್ಟ್ರದ ಇಬ್ಬರು ಶಿಕ್ಷಕರ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ದಿಲ್ಲಿಯಲ್ಲೂ ಅಕ್ರಮ ಪತ್ತೆಯಾಗಿದೆ. ಶಿಕ್ಷಕ ಜಲೀಲ್‌ ಉಮರ್‌ಖಾನ್‌ ಪಠಾಣ್‌ ಬಂಧನಕ್ಕೆ ಒಳಗಾಗಿದ್ದರೆ, ಸಂಜಯ್‌ ತುಕಾರಾಮ್‌ ಜಾಧವ್‌ ಪರಾರಿಯಾಗಿದ್ದಾನೆ. ಹಲವು ವಿದ್ಯಾರ್ಥಿಗಳ ಅಡ್ಮಿಟ್‌ ಕಾರ್ಡ್‌, ವಾಟ್ಸ್‌ಆ್ಯಪ್‌ ಚಾಟ್‌ ಮತ್ತು ಫೋನ್‌ ನಂಬರ್‌ಗಳು ದೊರೆತಿವೆ ಎಂದು ಪೊಲೀಸರು ಹೇಳಿದ್ದಾರೆ.

ಏನೇನು
ತಂತ್ರಜ್ಞಾನಗಳಿಗೆ ಆದ್ಯತೆ?
ಯುಪಿಎಸ್‌ಸಿ ಆಧಾರ್‌ ಕಾರ್ಡ್‌ ಆಧಾರಿತವಾದ ಬೆರಳಚ್ಚು ಮಾದರಿ, ಮುಖ ಗುರುತಿಸುವಂತಹ ತಂತ್ರಜ್ಞಾನ ಉಪಯೋಗಿ ಸಲು ಬಯಸಿದೆ. ಇ-ಪ್ರವೇಶ ಪತ್ರ ಪಡೆಯಲು ಕ್ಯುಆರ್‌ ಕೋಡ್‌ಗಳನ್ನು ಸ್ಕ್ಯಾನ್‌ ಮಾಡುವ ತಂತ್ರಜ್ಞಾನ ಬಳಸುವ ಗುರಿಯಿದೆ. ಸಂಪೂರ್ಣ ಪರೀಕ್ಷೆಯ ಮೇಲೆ ಎಐ ಆಧಾರಿತ ಸಿಸಿಟಿವಿಗಳ ಮೂಲಕ ಕಣ್ಗಾವಲು ಇರಿಸಲಾಗುತ್ತದೆ. ಇದರ ಮೂಲಕ ಅಭ್ಯರ್ಥಿಗಳ ಚಲನವಲನಗಳ ಮೇಲೆ ನಿಗಾ ಇಡಲಾಗುತ್ತದೆ. ಮೋಸ, ಅಸಮರ್ಪಕ ವರ್ತನೆಗಳು, ಬೇರೆಯವರ ಹೆಸರಿನಲ್ಲಿ ಪರೀಕ್ಷೆಗೆ ಹಾಜರಾಗುವುದನ್ನು ತಪ್ಪಿ ಸಲು ಗಂಭೀರ ಗಮನ ಹರಿಸಲಾಗುತ್ತದೆ.

ಟಾಪ್ ನ್ಯೂಸ್

Madikeri ಅಂಗಡಿ, ದೇವಾಲಯ ಕಳವು ಪ್ರಕರಣದ ಆರೋಪಿ ಬಂಧನ

Madikeri ಅಂಗಡಿ, ದೇವಾಲಯ ಕಳವು ಪ್ರಕರಣದ ಆರೋಪಿ ಬಂಧನ

BJP ಕಾಲದಲ್ಲೇ ಸೈಟ್‌ ಕೊಟ್ಟಿದ್ದು: ಸಿಎಂ ಸಮರ್ಥನೆ

BJP ಕಾಲದಲ್ಲೇ ಸೈಟ್‌ ಕೊಟ್ಟಿದ್ದು: ಸಿಎಂ ಸಮರ್ಥನೆ

Wimbledon-2024: Shock for champion Vondrousova

Wimbledon-2024: ಚಾಂಪಿಯನ್‌ ವೊಂಡ್ರೂಸೋವಾಗೆ ಆಘಾತ

ಮುಡಾ ಅಕ್ರಮದಲ್ಲಿ ಗೋಲ್ಮಾಲ್‌ ಸಿಎಂ: ಆರ್‌. ಅಶೋಕ್‌ ಆರೋಪ

Muda ಅಕ್ರಮದಲ್ಲಿ ಗೋಲ್ಮಾಲ್‌ ಸಿಎಂ: ಆರ್‌. ಅಶೋಕ್‌ ಆರೋಪ

Grama Panchayat ಮಟ್ಟದಲ್ಲಿ ಟಾಸ್ಕ್ ಪೋರ್ಸ್‌: ಕೃಷ್ಣ ಬೈರೇಗೌಡ

Grama Panchayat ಮಟ್ಟದಲ್ಲಿ ಟಾಸ್ಕ್ ಪೋರ್ಸ್‌: ಕೃಷ್ಣ ಬೈರೇಗೌಡ

Parameshwar

Congress Party; ನೋಟಿಸ್‌ ಯಾಕೆ ಕೊಡ್ತೀರಿ ಅಂತಾ ಹೇಳಬೇಕು: ಡಾ.ಜಿ.ಪರಮೇಶ್ವರ್‌

Indian based businessman arrested in 8300 crore scam

8300 ಕೋಟಿ ಹಗರಣದಲ್ಲಿ ಭಾರತ ಮೂಲದ ಉದ್ಯಮಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Young couple who ready to fly Canada captured in delhi

ಕೆನಡಾಗೆ ಹೊರಟಿದ್ದ ಯುವ ದಂಪತಿ ಸೆರೆ!

Government should promote prevention of uterine cancer: Sudha Murthy

Rajyasabha; ಗರ್ಭಕೋಶ ಕ್ಯಾನ್ಸರ್‌ ತಡೆಗಟ್ಟಲು ಸರ್ಕಾರ ಉತ್ತೇಜಿಸಬೇಕು: ಸುಧಾಮೂರ್ತಿ

Will not believe EVMs says akhilesh yadav

ಉ.ಪ್ರ.ದ 80 ಕ್ಷೇತ್ರ ಗೆದ್ದರೂ EVM ನಂಬಲ್ಲ: ಅಖೀಲೇಶ್‌

Question paper ready 2 hours before NEET-PG exam start?

NEET-PG ಪರೀಕ್ಷೆ ಆರಂಭಕ್ಕಿಂತ 2 ಗಂಟೆ ಮುಂಚೆ ಪ್ರಶ್ನೆಪತ್ರಿಕೆ ಸಿದ್ಧ?

Indian Prime Minister visits Austria after 41 years!

Narendra Modi; 41 ವರ್ಷಗಳ ಬಳಿಕ ಆಸ್ಟ್ರಿಯಾಗೆ ಭಾರತದ ಪ್ರಧಾನಿ ಭೇಟಿ!

MUST WATCH

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

ಹೊಸ ಸೇರ್ಪಡೆ

Madikeri ಅಂಗಡಿ, ದೇವಾಲಯ ಕಳವು ಪ್ರಕರಣದ ಆರೋಪಿ ಬಂಧನ

Madikeri ಅಂಗಡಿ, ದೇವಾಲಯ ಕಳವು ಪ್ರಕರಣದ ಆರೋಪಿ ಬಂಧನ

BJP ಕಾಲದಲ್ಲೇ ಸೈಟ್‌ ಕೊಟ್ಟಿದ್ದು: ಸಿಎಂ ಸಮರ್ಥನೆ

BJP ಕಾಲದಲ್ಲೇ ಸೈಟ್‌ ಕೊಟ್ಟಿದ್ದು: ಸಿಎಂ ಸಮರ್ಥನೆ

Wimbledon-2024: Shock for champion Vondrousova

Wimbledon-2024: ಚಾಂಪಿಯನ್‌ ವೊಂಡ್ರೂಸೋವಾಗೆ ಆಘಾತ

ಮುಡಾ ಅಕ್ರಮದಲ್ಲಿ ಗೋಲ್ಮಾಲ್‌ ಸಿಎಂ: ಆರ್‌. ಅಶೋಕ್‌ ಆರೋಪ

Muda ಅಕ್ರಮದಲ್ಲಿ ಗೋಲ್ಮಾಲ್‌ ಸಿಎಂ: ಆರ್‌. ಅಶೋಕ್‌ ಆರೋಪ

Murder-Represent

Hasana: ಪತ್ನಿಯ ಕೊಂದ ಪಿಸಿಗೆ ಅಕ್ರಮ ಸಂಬಂಧ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.