![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Sep 25, 2023, 1:17 PM IST
ನವದೆಹಲಿ: ಭಾರತೀಯ ವಾಯುಪಡೆಯ ಬಲ ದ್ವಿಗುಣಗೊಂಡಿದೆ. ಇಂದು ವಾಯುಪಡೆಯ ಮೊದಲ C-295 ಸಾರಿಗೆ ವಿಮಾನವನ್ನು ಔಪಚಾರಿಕವಾಗಿ ವಾಯುಪಡೆಗೆ ಸೇರಿಸಲಾಯಿತು.
ಇಂದು ಉತ್ತರ ಪ್ರದೇಶದ ಗಾಜಿಯಾಬಾದ್ನ ಹಿಂಡನ್ ವಾಯುನೆಲೆಯಲ್ಲಿ ಭಾರತ್ ಡ್ರೋನ್ ಶಕ್ತಿ -2023 ಪ್ರದರ್ಶನವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉದ್ಘಾಟಿಸಿದರು ಈ ವೇಳೆ ವಾಯುಪಡೆಗೆ ಸಾರಿಗೆ ವಿಮಾನವನ್ನು ಹಸ್ತಾಂತರಿಸಿದರು.
ಈ ವಿಮಾನವು ಸ್ಪೇನ್ನಿಂದ ಹೊರಟು ಸುಮಾರು 6,854 ಕಿಲೋಮೀಟರ್ ದೂರವನ್ನು ಕ್ರಮಿಸಿದ ನಂತರ ಸೆಪ್ಟೆಂಬರ್ 20 ರಂದು ವಡೋದರಾಕ್ಕೆ ಬಂದು ತಲುಪಿದೆ. ಇಂದು ಈ ವಿಮಾನವು ವಡೋದರಾದಿಂದ ಹೊರಟು ಹಿಂಡನ್ ವಾಯುನೆಲೆಯನ್ನು ತಲುಪಿತು.
#WATCH | Defence Minister Rajnath Singh formally inducts C-295 MW transport aircraft into the Indian Air Force at Hindon Airbase in Ghaziabad pic.twitter.com/hiIdEipFxY
— ANI (@ANI) September 25, 2023
ವಿಮಾನದ ವಿಶೇಷತೆ:
ಈ ವಿಮಾನದ ವಿಶೇಷವೆಂದರೆ ವಿಮಾನವು ಒಂದು ಕಿಲೋಮೀಟರ್ಗಿಂತ ಕಡಿಮೆ ರನ್ವೇಯಿಂದ ಟೇಕ್ ಆಫ್ ಮಾಡಬಹುದು. ಆದರೆ ಲ್ಯಾಂಡಿಂಗ್ಗೆ ಕೇವಲ 420 ಮೀಟರ್ ರನ್ವೇ ಅಗತ್ಯವಿದ್ದು. ಇದರರ್ಥ ಪ್ರಸ್ತುತ ವಾಯುಪಡೆಯು ಪ್ರವೇಶಿಸಲಾಗದ ಗುಡ್ಡಗಾಡು ಪ್ರದೇಶಗಳನ್ನು ಮತ್ತು ದ್ವೀಪಗಳಲ್ಲಿಯೂ ಸೈನ್ಯವನ್ನು ನೇರವಾಗಿ ಇಳಿಸಲು ಇದರಿಂದ ಸಾಧ್ಯವಾಗಲಿದೆ.
ಈ ವಿಮಾನ ಸ್ವಾವಲಂಬಿ ಭಾರತದ ಗುರುತಾಗಲಿದೆ. ಇಲ್ಲಿಯವರೆಗೆ ಈ ವಿಮಾನವನ್ನು ಏರ್ಬಸ್ ಕಂಪನಿ ತಯಾರಿಸುತ್ತಿತ್ತು ಆದರೆ ಈಗ ಇದನ್ನು ಭಾರತದಲ್ಲಿ ಮಾತ್ರ ತಯಾರಿಸಲಾಗುವುದು. ಎರಡು ವರ್ಷಗಳ ಹಿಂದೆ ಏರ್ಬಸ್ ಸ್ಪೇಸ್ ಮತ್ತು ಡಿಫೆನ್ಸ್ ಕಂಪನಿಯೊಂದಿಗೆ 56 ಸಿ – 295 ವಿಮಾನಗಳನ್ನು 21,935 ಕೋಟಿ ರೂ.ಗೆ ಖರೀದಿಸಲು ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಈ ಪೈಕಿ 16 ವಿಮಾನಗಳು ಸ್ಪೇನ್ನಿಂದ ಬರಬೇಕಿದ್ದರೆ, 17ನೇ ವಿಮಾನವನ್ನು ದೇಶದಲ್ಲೇ ತಯಾರಿಸಲಾಗುವುದು. ಈ ವಿಮಾನವನ್ನು ಭಾರತದಲ್ಲಿ ತಯಾರಿಸಲು ಏರ್ಬಸ್ ಮತ್ತು ಟಾಟಾ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಕಳೆದ ವರ್ಷ ಅಕ್ಟೋಬರ್ 31 ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಡೋದರಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ವಡೋದರದಲ್ಲಿ ಏರ್ಬಸ್ನ ಸಹಭಾಗಿತ್ವದಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಸಿದ್ಧಪಡಿಸಿದ ಸೆಟಪ್ನಲ್ಲಿ 40 ವಿಮಾನಗಳನ್ನು ತಯಾರಿಸಲಾಗುವುದು. ಆದರೆ ಏರ್ಬಸ್ ಸ್ಪೇನ್ನಲ್ಲಿ ತನ್ನ ಸ್ಥಾಪನೆಯಿಂದ ಭಾರತಕ್ಕೆ 16 ಸಿದ್ಧ ವಿಮಾನಗಳನ್ನು ಪೂರೈಸುತ್ತದೆ. 2026 ರ ವೇಳೆಗೆ ಎಲ್ಲಾ 56 ವಿಮಾನಗಳನ್ನು ವಾಯುಪಡೆಗೆ ತಲುಪಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಈ ಯೋಜನೆಯು ಭಾರತದ ವಾಯುಯಾನ ಉದ್ಯಮದಲ್ಲಿ ದೊಡ್ಡ ಬದಲಾವಣೆಯನ್ನು ತರಲಿದೆ ಎನ್ನಲಾಗಿದೆ.
ಇದನ್ನೂ ಓದಿ: Vizag Zoo: ವಿಶಾಖಪಟ್ಟಣಂ ಮೃಗಾಲಯದಲ್ಲಿ 18 ವರ್ಷದ ಸಿಂಹಿಣಿ ಮೃತ್ಯು… ಹೃದಯಾಘಾತವೇ ಕಾರಣ
You seem to have an Ad Blocker on.
To continue reading, please turn it off or whitelist Udayavani.