ಮುಂದಿನ ಜೂನ್‌ನಲ್ಲಿ ಏರ್‌ ಇಂಡಿಯಾ ಬಂದ್‌?


Team Udayavani, Dec 30, 2019, 9:38 PM IST

air-india

ಮಾರಾಟವಾಗದಿದ್ದರೆ, ಆರ್ಥಿಕ ಪ್ಯಾಕೇಜ್‌ ಸಿಗದಿದ್ದರೆ ಲಾಕ್‌ಔಟ್‌ ಸಾಧ್ಯತೆ

– 60,000 ಕೋಟಿ ರೂ. ಸಾಲ ಹೊತ್ತಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆ
– 2011-12ರಿಂದ ಈವರೆಗೆ ಸಂಸ್ಥೆಗೆ 30,520.21 ಕೋಟಿ ರೂ. ಸಹಾಯ
– ಮತ್ತಷ್ಟು ಆರ್ಥಿಕ ಪ್ಯಾಕೇಜ್‌ ನೀಡುವ ಸ್ಥಿತಿಯಲ್ಲಿ ಇಲ್ಲದ ಕೇಂದ್ರ ಸರ್ಕಾರ
– ಪರಭಾರೆ ಹಾಗೂ ಬಂಡವಾಳ ಹಿಂತಗೆತವೇ ಪ್ರಮುಖ ದಾಳವಾಗಿಸಿರುವ ಸರ್ಕಾರ

ನವದೆಹಲಿ: ತೀವ್ರ ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ ಸಂಸ್ಥೆಯನ್ನು ಸದ್ಯದಲ್ಲೇ ಯಾರೂ ಕೊಳ್ಳಲು ಮುಂದೆ ಬಾರದಿದ್ದರೆ ಅಥವಾ ಸರ್ಕಾರದಿಂದ ಮತ್ತಷ್ಟು ಆರ್ಥಿಕ ಪರಿಹಾರದ ಪ್ಯಾಕೇಜ್‌ಗಳು ಲಭ್ಯವಾಗದಿದ್ದರೆ ಮುಂದಿನ ಜೂನ್‌ ಹೊತ್ತಿಗೆ ಆ ಸಂಸ್ಥೆ ಶಾಶ್ವತವಾಗಿ ಮುಚ್ಚಿಹೋಗಲಿದೆ ಎಂದು ಅದೇ ಸಂಸ್ಥೆಯ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

ತಲೆಯ ಮೇಲೆ ಸದ್ಯಕ್ಕೆ 60,000 ಕೋಟಿ ರೂ.ಗಳನ್ನು ಹೊತ್ತುಕೊಂಡಿರುವ ಏರ್‌ ಇಂಡಿಯಾ ಸಂಸ್ಥೆಗೆ ಪುನಶ್ಚೇತನ ನೀಡಲು ಹಾಗೂ ಅದನ್ನು ಪರಭಾರೆ ಮಾಡುವ ನಿರಂತರ ಪ್ರಯತ್ನದಲ್ಲಿ ಕೇಂದ್ರ ಸರ್ಕಾರ ತಲ್ಲೀನವಾಗಿದೆ. ಈ ಪ್ರಕ್ರಿಯೆಗಳನ್ನು ಸರಾಗವಾಗಿ ನಡೆಸಲು ಸಂಸ್ಥೆಯಲ್ಲಿ ತಾನು ಹೊಂದಿದ್ದ ಬಂಡವಾಳ ಹಿಂಪಡೆತಕ್ಕೂ ಕೈ ಹಾಕಿದೆ. ಆದರೂ, ಸಂಸ್ಥೆಯನ್ನು ಖರೀದಿಸಲು ಬೇರ್ಯಾವುದೇ ಕಂಪನಿ ಆಸಕ್ತಿ ವಹಿಸುತ್ತಿಲ್ಲವಾದ್ದರಿಂದ ಸದ್ಯದ ಮಟ್ಟಿನ ಚೇತರಿಕೆಗಾಗಿ ಆರ್ಥಿಕ ಪ್ಯಾಕೇಜ್‌ಗಳು ಅಥವಾ ಮತ್ಯಾವುದೇ ವಿತ್ತೀಯ ಅನುಕೂಲತೆಗಳು ಸಂಸ್ಥೆಗೆ ಸಿಗಲೇಬೇಕಿದೆ. ಅಷ್ಟು ಸಿಕ್ಕಿದರೂ, ಈಗಾಗಲೇ ಹಾರಾಟ ನಿಲ್ಲಿಸಿರುವ ಕಂಪನಿಯ 12 ವಿಮಾನಗಳನ್ನು ಮತ್ತೆ ಸೇವೆಗೆ ಸಜ್ಜುಗೊಳಿಸಬಹುದಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ, 2011-12ರಿಂದ 2019ರ ಡಿಸೆಂಬರ್‌ವರೆಗೂ ಸಂಸ್ಥೆಯ ಅನುಕೂಲಕ್ಕಾಗಿ 30,520.21 ಕೋಟಿ ರೂ.ಗಳಷ್ಟು ಹಣವನ್ನು ನೀಡಿದೆ. ಈಗ, ಮತ್ತಷ್ಟು ಆರ್ಥಿಕ ಪ್ಯಾಕೇಜ್‌ಗಳನ್ನು ನೀಡುವ ಸ್ಥಿತಿಯಲ್ಲಿ ಕೇಂದ್ರವೂ ಇಲ್ಲ. ಹಾಗಾಗಿ, ಬೇರೆ ರೀತಿಯ ಆರ್ಥಿಕ ಅನುಕೂಲಗಳು ಸಿಕ್ಕರೂ ಸಾಕು ಏರ್‌ ಇಂಡಿಯಾ ಕೊಂಚವಾದರೂ ಚಿಗುರುತ್ತದೆ ಎಂದು ಅವರು ತಿಳಿಸಿದ್ದಾರೆ.

ಇಂಥ ಪ್ಯಾಕೇಜ್‌ಗಳು ಸಿಗದಿದ್ದರೆ 25 ವರ್ಷಗಳ ಕಾಲ ಸತತ ಸೇವೆ ನೀಡಿ ಈಗ ನೇಪಥ್ಯಕ್ಕೆ ಸರಿದ ಜೆಟ್‌ ಏರ್‌ವೆàಸ್‌ ಸಂಸ್ಥೆಯ ಸಾಲಿಗೆ ಏರ್‌ ಇಂಡಿಯಾ ಕೂಡ ಸೇರ್ಪಡೆಯಾಗುವುದು ಖಾತ್ರಿ ಎಂದು ಅವರು ತಿಳಿಸಿದ್ದಾರೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.