![supreem](https://www.udayavani.com/wp-content/uploads/2024/07/supreem-2-415x259.jpg)
Amit Shah ನಕಲಿ ವೀಡಿಯೋ ಕೇಸ್: ಕಾಂಗ್ರೆಸ್ ಮುಖಂಡನ ಸೆರೆ
Team Udayavani, May 4, 2024, 6:02 AM IST
![Amit Shah](https://www.udayavani.com/wp-content/uploads/2024/05/Amit-Shah-2-620x363.jpg)
ಹೊಸದಿಲ್ಲಿ/ಹೈದರಾಬಾದ್: ಮೀಸಲು ರದ್ದು ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ ಎನ್ನಲಾಗಿರುವ ನಕಲಿ ವೀಡಿಯೋ ಹರಿಯಬಿಟ್ಟಿದ್ದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡನನ್ನು ಶುಕ್ರವಾರ ಹೊಸದಿಲ್ಲಿ ಪೊಲೀಸರು ಬಂಧಿಸಿದ್ದಾರೆ.
ಆತನನ್ನು ಅರುಣ್ ರೆಡ್ಡಿ ಎಂದು ಗುರುತಿಸಲಾಗಿದೆ. ಆತ ಎಕ್ಸ್ನಲ್ಲಿ “ಸ್ಪಿರಿಟ್ ಆಫ್ ಕಾಂಗ್ರೆಸ್’ ಹೆಸರಿನ ಖಾತೆಯನ್ನು ನಿಭಾಯಿಸುತ್ತಿದ್ದ ಎಂದು ದಿಲ್ಲಿ ಪೊಲೀಸ್ ಇಲಾಖೆಯ ವಿಶೇಷ ಸೆಲ್ನ ಅಧಿಕಾರಿಗಳು ಹೇಳಿದ್ದಾರೆ. ತಿರುಚಿದ ವೀಡಿಯೋ ವಿರುದ್ಧ ಕೇಂದ್ರ ಗೃಹ ಸಚಿವಾಲಯ ದೂರು ನೀಡಿತ್ತು.
ಈ ದೂರನ್ನು ಆಧರಿಸಿ ದಿಲ್ಲಿ ಪೊಲೀಸರ ವಿಶೇಷ ತಂಡವು ಕೇಸ್ ದಾಖಲಿಸಿತ್ತು. ಇದೇ ವೇಳೆ ವೀಡಿಯೋ ಹಂಚಿಕೆ ಆರೋಪದ ಹಿನ್ನೆಲೆಯಲ್ಲಿ ಝಾರ್ಖಂಡ್ ಕಾಂಗ್ರೆಸ್ನ ಎಕ್ಸ್ ಖಾತೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ವೀಡಿಯೋ ಹಂಚಿಕೆ ವಿರುದ್ಧ ಬಿಜೆಪಿ ನಾಯಕರು ದಿಲ್ಲಿ ಪೊಲೀಸರಿಗೆ ದೂರು ನೀಡಿದ್ದರು.
ಬಂಧನ, ಬಿಡುಗಡೆ: ಇನ್ನೊಂದು ಬೆಳವ ಣಿಗೆಯಲ್ಲಿ ನಕಲಿ ವೀಡಿಯೋ ಪ್ರಕರಣಕ್ಕೆ ಸಂಬಂಧಿದಂತೆ ಹೈದರಾಬಾದ್ನ ಪೊಲೀ ಸರು ಕಾಂಗ್ರೆಸ್ನ ಐವರು ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುವವರನ್ನು ಬಂಧಿಸಿದ್ದಾರೆ. ಅವರನ್ನು ಸ್ಥಳೀಯ ಕೋರ್ಟ್ ಮುಂದೆ ಹಾಜರುಪಡಿಸಿದ ಸಂದರ್ಭದಲ್ಲಿ ನ್ಯಾಯಾಧೀಶರು 2 ಖಾತರಿಗಳನ್ನು ಮತ್ತು ತಲಾ 10,000 ರೂ. ಜಾಮೀನು ಮೊತ್ತ ನೀಡುವಂತೆ ಆದೇಶಿಸಿ ಬಿಡುಗಡೆ ಮಾಡಲು ಆದೇಶಿಸಿದ್ದಾರೆ.
ಟಾಪ್ ನ್ಯೂಸ್
![supreem](https://www.udayavani.com/wp-content/uploads/2024/07/supreem-2-415x259.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.