![Ranji Trophy: ಸೆಮಿಫೈನಲ್ನಲ್ಲಿ ಪಾರ್ಥ್ ದಾಳಿಗೆ ಕುಸಿದ ಮುಂಬಯಿ](https://www.udayavani.com/wp-content/uploads/2025/02/ranji-1-415x224.jpg)
![Ranji Trophy: ಸೆಮಿಫೈನಲ್ನಲ್ಲಿ ಪಾರ್ಥ್ ದಾಳಿಗೆ ಕುಸಿದ ಮುಂಬಯಿ](https://www.udayavani.com/wp-content/uploads/2025/02/ranji-1-415x224.jpg)
Team Udayavani, Dec 26, 2024, 5:07 PM IST
ಆಂಧ್ರ ಪ್ರದೇಶ: ಮಂಗಳಮುಖಿ ಜತೆ ಪುತ್ರ ಮದುವೆ ಆಗುವುದಾಗಿ ಹೇಳಿದ ಕಾರಣಕ್ಕೆ ಅವಮಾನಗೊಂಡ ಪೋಷಕರು ಕ್ರಿಮಿನಾಶಕ ಸೇವಿಸಿ ಆತ್ಮ*ಹತ್ಯೆ ಮಾಡಿಕೊಂಡ ದಾರುಣ ಘಟನೆ ಆಂಧ್ರಪ್ರದೇಶದ ನಂದ್ಯಾಲ್ನಲ್ಲಿ ನಡೆದಿರುವುದು ವರದಿಯಾಗಿದೆ.
ಏನಿದು ಘಟನೆ?: ಆಂಧ್ರದ ನಂದ್ಯಾಲ ನಿವಾಸಿಗಳಾದ ಸುಬ್ಬು ರಾಯಡು ಮತ್ತು ಸರಸ್ವತಿ ದಂಪತಿಯ ಏಕೈಕ ಪುತ್ರ ಸುನೀಲ್ ಬಿಟೆಕ್ ಪದವೀಧರನಾಗಿದ್ದು, ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದಾನೆ.
ಸುನೀಲ್ ಕಳೆದ ಮೂರು ವರ್ಷಗಳಿಂದ ಮಂಗಳಮುಖಿಯಾಗಿರುವ ಸ್ಮಿತಾ ಎಂಬಾಕೆ ಜತೆ ಸಂಬಂಧದಲ್ಲಿದ್ದು, ಇತ್ತೀಚೆಗೆ ಸುನೀಲ್ ಬಳಿ ಪೋಷಕರು ಮದುವೆ ವಿಚಾರವನ್ನು ಮಾತನಾಡಿದ್ದಾರೆ. ಈ ವೇಳೆ ತಾನು ಸ್ಮಿತಾ ಎಂಬಾಕೆಯನ್ನೇ ಮದುವೆಯಾಗುವುದಾಗಿ ಹೇಳಿದ್ದಾನೆ.
ಮಗ ಪ್ರೀತಿಸುತ್ತಿರುವುದು ಮಂಗಳಮುಖಿ ಎನ್ನವುದನ್ನು ಅರಿತ ಪೋಷಕರು ಸುನೀಲ್ನನ್ನು ಕೌನ್ಸಿಲಿಂಗ್ ಮಾಡಿಸಲು ಸ್ಥಳೀಯ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಇದಾದ ಬಳಿಕವೂ ಸುನೀಲ್ ಸ್ಮಿತಾಳನ್ನೇ ವಿವಾಹವಾಗುವುದಾಗಿ ಪೋಷಕರ ಮುಂದೆ ಹೇಳಿದ್ದಾನೆ.
ಮಗನ ನಿರ್ಧಾರದಿಂದ ಮನನೊಂದು ಅವಮಾನ ಅನುಭವಿಸಿದ ಪೋಷಕರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ ಸೇವಿಸಿದ ಬಳಿಕ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಸುನೀಲ್ ಪ್ರೀತಿಸುತ್ತಿರುವ ಮಂಗಳಮುಖಿ ಸ್ಮಿತಾ ಅವರ ಪರಿಚಿತ ಗುಂಪು ಸುನೀಲ್ ಪೋಷಕರಿಗೆ ಅವಮಾನ ಮಾಡಿ, ಕಿರುಕುಳ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಸದ್ಯ ಈ ಬಗ್ಗೆ ಇದುವರೆಗೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ.
Kumbh stampede: ಸರ್ಕಾರದ ವಿರುದ್ಧ “ಅಸ್ಥಿ ಕುಡಿಕೆ’ ಪ್ರತಿಭಟನೆ
Augusta scam: 6 ವರ್ಷಗಳ ಕಸ್ಟಡಿ ಬಳಿಕ ಅಗಸ್ಟಾ ಹಗರಣ ದಲ್ಲಾಳಿ ಮೈಕೆಲ್ಗೆ ಜಾಮೀನು
TTD: ತಿರುಪತಿ ದೇಗುಲದ ಉಚಿತ ಅನ್ನಪ್ರಸಾದ ಟ್ರಸ್ಟ್ಗೆ ಮುಂಬೈ ವ್ಯಕ್ತಿ 11ಕೋಟಿ ರೂ.ದೇಣಿಗೆ!
ಮಹಾಕುಂಭ ‘ಮೃತ್ಯುಕುಂಭ’ ವಾಗಿ ಮಾರ್ಪಟ್ಟಿದೆ… ಯೋಗಿ ಸರ್ಕಾರದ ವಿರುದ್ಧ ಮಮತಾ ವಾಗ್ದಾಳಿ
Maharashtra: ಬಿಜೆಪಿ-ಶಿಂಧೆ ಶಿವಸೇನೆ ನಡುವೆ ಬಿಕ್ಕಟ್ಟು: 20 ಶಾಸಕರ “Y” ಭದ್ರತೆ ವಾಪಸ್!
You seem to have an Ad Blocker on.
To continue reading, please turn it off or whitelist Udayavani.