ಮೇಜರ್ ಹಂದಾ ಪೊಲೀಸ್ ಕಸ್ಟಡಿಗೆ
Team Udayavani, Jun 26, 2018, 6:00 AM IST
ನವದೆಹಲಿ: ಸೇನಾಧಿಕಾರಿ ಪತ್ನಿಯನ್ನು ಹತ್ಯೆಗೈದ ಸೇನೆಯ ಮೇಜರ್ ನಿಖೀಲ್ ಹಂದಾರನ್ನು ದೆಹಲಿ ನ್ಯಾಯಾಲಯವು ನಾಲ್ಕು ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಕೊಲೆಗೆ ಬಳಸಿದ ಚಾಕು ಹಾಗೂ ಕೊಲೆ ಮಾಡಿದ ವೇಳೆ ಆರೋಪಿ ಧರಿಸಿದ್ದ ಬಟ್ಟೆಗಳನ್ನು ವಶಪಡಿಸಿಕೊಳ್ಳಬೇಕಿದೆ. ಹೀಗಾಗಿ ನಾಲ್ಕು ದಿನಗಳ ಕಸ್ಟಡಿಗೆ ನೀಡುವಂತೆ ಪೊಲೀಸರು ವಿನಂತಿಸಿದ್ದರು.
ಮೇಜರ್ ಅಮಿತ್ ದ್ವಿವೇದಿ ಪತ್ನಿ ಶೈಲಜಾ ದ್ವಿವೇದಿಯನ್ನು ವಿವಾಹವಾಗಲು ಮೇಜರ್ ಹಂದಾ ಬಯಸಿದ್ದರು. ಆದರೆ ಆಕೆ ವಿವಾಹವಾಗಲು ನಿರಾಕರಿಸಿದ್ದರಿಂದ ಕಾರಿನಲ್ಲಿ ಕುಳಿತಿದ್ದಾಗಲೇ ಚಾಕುವಿನಿಂದ ಕತ್ತು ಸೀಳಲಾಗಿದೆ. ನಂತರ ಘಟನೆ ಆತ್ಮಹತ್ಯೆಯಂತೆ ಕಾಣಿಸಲಿ ಎಂದು ಮುಖ ಹಾಗೂ ದೇಹದ ಮೇಲೆ ಕಾರು ಹತ್ತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
2015ರಲ್ಲಿ ಮೇಜರ್ ದ್ವಿವೇದಿ ನಾಗಾಲ್ಯಾಂಡ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಇಬ್ಬರ ಪರಿಚಯವಾಗಿತ್ತು. ಶೈಲಜಾ ಹಾಗೂ ನಿಖೀಲ್ ಗಂಟೆಗಟ್ಟಲೆ ಫೋನಿನಲ್ಲಿ ಮಾತನಾಡುತ್ತಿದ್ದರು. ದ್ವಿವೇದಿ ದೆಹಲಿಗೆ ವರ್ಗವಾದ ಮೇಲೂ ಇವರ ಮಧ್ಯೆ ಸಂವಹನವಿತ್ತು. ಶನಿವಾರವಷ್ಟೇ ನಿಖೀಲ್ ದೆಹಲಿಗೆ ಆಗಮಿಸಿ, ಮಾತನಾಡುವುದಕ್ಕಾಗಿ ಶೈಲಜಾರನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಶೈಲಜಾರನ್ನು ನಿಖೀಲ್ ಹತ್ಯೆಗೈದಿದ್ದಾರೆ. ಮನೆ ತೊರೆದ ಅರ್ಧಗಂಟೆಯಲ್ಲೇ ಶೈಲಜಾ ಹೆಣ ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.