![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 23, 2018, 7:36 PM IST
ಶ್ರೀನಗರ : 2017ರಲ್ಲಿ ಯೋಧರ ಮೇಲೆ ಕಲ್ಲೆಸೆತ ನಡೆದಿದ್ದಾಗ ಸೆರೆಸಿಕ್ಕ ಓರ್ವ ಕಲ್ಲೆಸೆತಕೋರನನ್ನು ತನ್ನ ಜೀಪಿನ ಬಾನೆಟ್ಗೆ ಕಟ್ಟಿ ಆತನನ್ನು ಮಾನವ ಗುರಾಣಿಯಾಗಿ ಬಳಸಿಕೊಂಡ ಕಾರಣಕ್ಕೆ ದೇಶಾದ್ಯಂತ ವ್ಯಾಪಕ ಟೀಕೆ, ಖಂಡನೆಗೆ ಗುರಿಯಾಗಿದ್ದ ಸೇನೆಯ ಮೇಜರ್ ಬಡಗಾಂವ್ನ ಸಮೀರ್ ಅಹ್ಮದ್ ಅವರನ್ನು ಇಲ್ಲಿನ ಹೊಟೇಲ್ನಲ್ಲಿ ಇಂದು ಓರ್ವ ಮಹಿಳೆಯೊಂದಿಗೆ ಪೊಲೀಸರು ವಶಕ್ಕೆ ತೆಗೆದುಕೊಂಡರು.
ಇಲ್ಲಿನ ಹೊಟೇಲ್ ಗ್ರ್ಯಾಂಡ್ ಮಮತಾ ದಲ್ಲಿ ಬೆಳಗ್ಗೆ 11 ಗಂಟೆಯ ವೇಳೆಗೆ ರಿಸೆಪ್ಶನ್ ಕೌಂಟರ್ನಲ್ಲಿ ಕೆಲವು ವ್ಯಕ್ತಿಗಳು ಮತ್ತು ಹೊಟೇಲ್ ಸಿಬಂದಿಗಳಲ್ಲಿ ಮಾತಿನ ಜಗಳ ಜೋರಾಗಿ ನಡೆಯುತ್ತಿದ್ದ ಬಗ್ಗೆ ಫೋನ್ ಕರೆ ಬಂದಾಗ ಪೊಲೀಸರು ಅಲ್ಲಿಗೆ ಧಾವಿಸಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡರು.
ಪೊಲೀಸರು ವಶಕ್ಕೆ ತೆಗೆದುಕೊಂಡಿರುವವರಲ್ಲಿ ಬಡಗಾಂವ್ನ ಸೇನಾ ಮೇಜರ್ ಸಮೀರ್ ಅಹ್ಮದ್ ಕೂಡ ಸೇರಿದ್ದು ಅನಂತರದಲ್ಲಿ ಪೊಲೀಸರು ಅವರ ಹೇಳಿಕೆಯನ್ನು ದಾಖಲಿಸಿಕೊಂಡು ಬಳಿಕ ಅವರನ್ನು ಅವರ ಸೇನಾ ಘಟಕಕ್ಕೆ ಒಪ್ಪಿಸಿದರು ಎಂದು ವರದಿಗಳು ತಿಳಿಸಿವೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.