![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Jul 20, 2022, 6:55 AM IST
ನವದೆಹಲಿ: ಯೋಧನೊಬ್ಬ ದೇಶ ಸೇವೆಯಲ್ಲಿ ನಿರತನಾಗಿದ್ದಾಗ ಅಂಗವೈಕಲ್ಯಕ್ಕೆ ತುತ್ತಾದರೆ ಮಾತ್ರ ಆತ ಯೋಧರಿಗೆ ನೀಡಲಾಗುವ “ದಿವ್ಯಾಂಗ ಪಿಂಚಣಿ’ ಸೌಲಭ್ಯಕ್ಕೆ ಅರ್ಹನಾಗುತ್ತಾನೆ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
ಸುಮಾರು 23 ವರ್ಷಗಳ ಹಿಂದಿನ ಪ್ರಕರಣವೊಂದರ ವಿಚಾರಣೆ ನಡೆಸಿರುವ ನ್ಯಾಯಪೀಠ, ಸೇವೆಯಲ್ಲಿಲ್ಲದ ವೇಳೆ ಯೋಧನೊಬ್ಬ ಅಪಘಾತ ಅಥವಾ ಮತ್ತಿತರ ಕಾರಣದಿಂದ ಅಂಗವೈಕಲ್ಯಕ್ಕೀಡಾದರೆ, ಅಂಥವರಿಗೆ ಈ ಸೌಲಭ್ಯ ನೀಡಲು ಸಾಧ್ಯವಿಲ್ಲ. ಆದರೆ, ಸೇವೆಯಲ್ಲಿದ್ದಾಗಲೇ ಗಾಯಗೊಂಡು ವಿಕಲತೆಗೆ ಒಳಗಾಗಿದ್ದು ಆ ವಿಕಲತೆ ಶೇ. 20ಕ್ಕಿಂತ ಹೆಚ್ಚಿದ್ದರೆ, ಅಥವಾ ಈ ಹಿಂದೆ ಸೇನಾ ಸೇವೆಯಲ್ಲಿದ್ದಾಗ ಆಗಿದ್ದ ಲಘು ಅಂಗವೈಕಲ್ಯವು ಸೇವೆಯಲ್ಲಿದ್ದಾಗ ಉಲ್ಬಣಗೊಂಡರೆ ಅಂಥವರಿಗೆ ದಿವ್ಯಾಂಗ ಪಿಂಚಣಿ ಸೌಲಭ್ಯ ನೀಡಬಹುದು ಎಂದು ಸ್ಪಷ್ಟವಾಗಿ ಹೇಳಿದೆ.
1999ರಲ್ಲಿ ಯೋಧರೊಬ್ಬರು ರಜೆಯ ಮೇಲೆ ಊರಿಗೆ ತೆರಳಿದ್ದಾಗ ರಸ್ತೆ ಅಪಘಾತದಲ್ಲಿ ಅಂಗವಿಕಲರಾಗಿದ್ದರು. ಅವರಿಗೆ ಸೇನಾ ನ್ಯಾಯಾಲಯ ಅವರಿಗೆ ಪಿಂಚಣಿಯ ಸೌಲಭ್ಯ ಕಲ್ಪಿಸಿತ್ತು. ಆದರೆ, ಇದನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತ್ತು.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.