![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Apr 2, 2024, 8:22 PM IST
ಮೀರತ್: ರಮಾನಂದ ಸಾಗರ್ ಅವರ “ರಾಮಾಯಣ’ ಧಾರಾವಾಹಿ “ರಾಮ’ನ ಪಾತ್ರಧಾರಿ ಅರುಣ್ ಗೋವಿಲ್ ಅವರು ಮಂಗಳವಾರ ಮೀರತ್ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದರು. ಈ ವೇಳೆ, ಉತ್ತರ ಪ್ರದೇಶದ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಸೇರಿದಂತೆ ಬಿಜೆಪಿಯ ನಾಯಕರು ಹಾಜರಿದ್ದರು.
ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಮಾಹಿತಿಯ ಪ್ರಕಾರ ಗೋವಿಲ್ ಬಳಿ ಒಟ್ಟು 3.19 ಕೋಟಿ ರೂ. ಆಸ್ತಿ ಇದ್ದು, ಅವರ ಪತ್ನಿ ಬಳಿ 2.76 ಕೋಟಿ ರೂ. ಆಸ್ತಿ ಇದೆ. ಗೋವಿಲ್ ಕೈಯಲ್ಲಿ 3.75 ಲಕ್ಷ ನಗದು, 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಮರ್ಸಿಡೆಸ್ ಬೆಂಜ್ ಕಾರ್ ಇದೆ.
ಅವರ ಪತ್ನಿ ಹತ್ತಿರ 4 ಲಕ್ಷ ರೂ. ಇದೆ. 1.34 ಕೋಟಿ ರೂ. ಬ್ಯಾಂಕ್ ಖಾತೆಯಲ್ಲಿದ್ದರೆ, ಪತ್ನಿಯ ಅಕೌಂಟ್ನಲ್ಲಿ 85 ಲಕ್ಷ ರೂ. ಇದೆ.
ಅಭ್ಯರ್ಥಿ ಬದಲಿಸಿದ ಸಮಾಜವಾದಿ ಪಾರ್ಟಿ
ಸಮಾಜವಾದಿ ಪಾರ್ಟಿ(ಎಸ್ಪಿ) ಮೀರತ್ ಕ್ಷೇತ್ರದ ಅಭ್ಯರ್ಥಿಯನ್ನು ಬದಲಿಸಿದೆ. ಸಾರ್ಧಾನಾ ಕ್ಷೇತ್ರದ ಶಾಸಕ ಅತುಲ್ ಪ್ರಧಾನ್ ಅವರನ್ನು ಕಣಕ್ಕಿಳಿಸಿದೆ. ಈ ಮೊದಲು ಭಾನು ಪ್ರತಾಪ್ ಸಿಂಗ್ಗೆ ಟಿಕೆಟ್ ಘೋಷಣೆ ಮಾಡಿತ್ತು. ಆದರೆ, ಅರುಣ್ ಗೋವಿಲ್ಗೆ ಬಿಜೆಪಿ ಟಿಕೆಟ್ ನೀಡಿದ ಬೆನ್ನಲ್ಲೇ ಎಸ್ಪಿ ಅಭ್ಯರ್ಥಿಯನ್ನು ಬದಲಿಸಿದೆ. ಈ ಮಧ್ಯೆ, ಆಗ್ರಾ ಕ್ಷೇತ್ರಕ್ಕೆ ಸುರೇಶ್ ಚಂದ್ ಕದಮ್ ಅವರಿಗೆ ಸಮಾಜವಾದಿ ಪಕ್ಷವು ಟಿಕೆಟ್ ಘೋಷಿಸಿದೆ. ಮೀರತ್ನಲ್ಲಿ ಏ.26ರಂದು ಮತದಾನ ನಡೆಯಲಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Sulya: ಪೈಪ್ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.