![iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ](https://www.udayavani.com/wp-content/uploads/2024/07/iphone-415x279.jpg)
ನಳಂದಾ ವಿಶ್ವವಿದ್ಯಾಲಯ ಪಾರಂಪರಿಕ ತಾಣಕ್ಕೆ ಭಾರೀ ಹಾನಿ
ಎಎಸ್ಐ ಅನುಮತಿಯಿಲ್ಲದೇ ಹೂಳೆತ್ತಿದ ಸರ್ಕಾರಿ ಎಂಜಿನಿಯರ್ಗಳ ಕೃತ್ಯದ ಪರಿಣಾಮ ಈ ಸ್ಥಿತಿ!
Team Udayavani, Jul 23, 2022, 7:00 AM IST
![thumb-6](https://www.udayavani.com/wp-content/uploads/2022/07/thumb-6-3-620x326.jpg)
ಪಾಟ್ನಾ: ಬಿಹಾರದ ಐತಿಹಾಸಿಕ ನಳಂದಾ ವಿಶ್ವವಿದ್ಯಾಲಯದ ಪ್ರಾಚೀನ ಸ್ಮಾರಕವೊಂದರಲ್ಲಿ, ಅಲ್ಲಿನ ಸರ್ಕಾರಿ ಎಂಜಿನಿಯರ್ಗಳು ಅನುಮತಿಯಿಲ್ಲದೇ ಹೂಳೆತ್ತಿದ್ದಾರೆ. ಇದರಿಂದ ನೆಲದಲ್ಲಿ ಹೂತುಹೋಗಿದ್ದ ಪಾಲರ ಕಾಲದ ಗೋಡೆಗಳಿಗೆ ಭಾರೀ ಹಾನಿಯಾಗಿದೆ.
ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಈ ನಿಷೇಧಿತ ವಲಯದಲ್ಲಿ, ಎಎಸ್ಐ (ಭಾರತ ಪುರಾತತ್ವ ಇಲಾಖೆ) ಅನುಮತಿಯಿಲ್ಲದೇ ಹೂಳೆತ್ತುವ ಕೆಲಸ ಕೈಗೆತ್ತಿಕೊಳ್ಳಲಾಗಿದೆ.
ಹೀಗೆಂದು ಪಾಟ್ನಾ ವಲಯ ಎಎಸ್ಐ ಸೂಪರಿಂಟೆಂಡ್ ಗೌತಮಿ ಭಟ್ಟಾಚಾರ್ಯ ಆರೋಪಿಸಿದ್ದಾರೆ. ಮಾತ್ರವಲ್ಲ ಈ ಕೆಲಸವನ್ನು ತೀವ್ರ ವಿರೋಧದ ನಡುವೆಯೂ ನಡೆಸಿದ ಬಿಹಾರ ಸರ್ಕಾರದ ಕಿರಿಯ ಎಂಜಿನಿಯರ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.
ನಳಂದಾ ವಿವಿಗೆ ಸೇರಿದ ದೇವಸ್ಥಾನವೊಂದರ ಹಿಂಭಾಗ 8ರಿಂದ 12ನೇ ಶತಮಾನಕ್ಕೆ ಸೇರಿದ್ದ ನಿಷೇಧಿತ ವಲಯದಲ್ಲಿ ಬಲವಾದ ಯಂತ್ರಗಳನ್ನು ಬಳಸಿ ಹೂಳೆತ್ತಲಾಗಿದೆ. ಇದರ ಪರಿಣಾಮ ಪಾಲರ ಕಾಲದ ಇಟ್ಟಿಗೆ ಗೋಡೆಗಳು ಪತ್ತೆಯಾಗಿವೆ. ಆದರೆ ಅವು ಯಂತ್ರಗಳ ಹೊಡೆತಕ್ಕೆ ಸಿಲುಕಿ ಹಾಳಾಗಿವೆ ಎಂದು ಗೌತಮಿ ಬೇಸರಿಸಿದ್ದಾರೆ.
ಟಾಪ್ ನ್ಯೂಸ್
![iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ](https://www.udayavani.com/wp-content/uploads/2024/07/iphone-415x279.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![suicide](https://www.udayavani.com/wp-content/uploads/2024/07/suicide-1-150x84.jpg)
Chhattisgarh; ಎರಡು ಪ್ರತ್ಯೇಕ ಅವಘಡದಲ್ಲಿ ಬಾವಿಗೆ ಬಿದ್ದು 9 ಮಂದಿ ಮೃತ್ಯು
![Sudhamurthy](https://www.udayavani.com/wp-content/uploads/2024/07/Sudhamurthy-1-150x90.jpg)
Sudha Murthy 30 ವರ್ಷದಿಂದ ಒಂದೂ ಸೀರೆ ಖರೀದಿಸಿಲ್ಲವೇಕೆ ಗೊತ್ತಾ?
![ಚುನಾವಣೆಗೆ ಸಿದ್ದರಾಗಿ… ಕೇಂದ್ರ ಸರ್ಕಾರ ಪತನವಾಗಲಿದೆ…: ಲಾಲು ಪ್ರಸಾದ್ ಯಾದವ್](https://www.udayavani.com/wp-content/uploads/2024/07/lalu-150x83.jpg)
RJD: ಚುನಾವಣೆಗೆ ಸಿದ್ದರಾಗಿ… ಕೇಂದ್ರ ಸರ್ಕಾರ ಪತನವಾಗಲಿದೆ…: ಲಾಲು ಪ್ರಸಾದ್ ಯಾದವ್
![1-aaaa](https://www.udayavani.com/wp-content/uploads/2024/07/1-aaaa-150x84.jpg)
Mumbai; ಟೀಮ್ ಇಂಡಿಯಾ ಸ್ವಾಗತ ಮೆರವಣಿಗೆ ಬಳಿಕ ಭಾರೀ ಕಸ ಸಂಗ್ರಹ
![pune](https://www.udayavani.com/wp-content/uploads/2024/07/pune-150x83.jpg)
Pune Porsche crash; 300 ಪದಗಳ ಪ್ರಬಂಧ ಬರೆದು ಸಲ್ಲಿಸಿದ ಬಾಲಾಪರಾಧಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.