![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 14, 2020, 7:13 AM IST
ಕೋವಿಡ್ 19 ವೈರಸ್ ಲಾಕ್ಡೌನ್ನಿಂದಾಗಿ ತಯಾರಿಕೆ ಮತ್ತು ಮಾರಾಟ ಎರಡಲ್ಲೂ ಸಾಕಷ್ಟು ನಷ್ಟ ಹೊಂದಿದ್ದ ಆಟೋಮೊಬೈಲ್ ಕ್ಷೇತ್ರಕ್ಕೆ ಬುಧವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಘೋಷಿಸಿರುವ ಘೋಷಣೆ, ನಿಯಮ ಗಳು ಆಟೋಮೊಬೈಲ್ ಕ್ಷೇತ್ರಕ್ಕೆ ಪರೋಕ್ಷವಾಗಿ ನೆರವಾಗುತ್ತದೆ ಎಂದು ವಾಹನಗಳ ಬಿಡಿಭಾಗ ಗಳ ತಯಾರಿಕಾ ಕಾರ್ಖಾನೆಗಳ ಸಂಘ (ಐಸಿ ಎಂಎ)ದ ಅಧ್ಯಕ್ಷ ದೀಪಕ್ ಜೈನ್ ತಿಳಿಸಿದ್ದಾರೆ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಗಳ (ಎಂಎಸ್ಎಂಇ) ವರ್ಗೀಕರಣಕ್ಕೆ ಈವರೆಗೆ ಅನುಸರಿಸುತ್ತಿದ್ದ ನಿಯಮಗಳು ಇನ್ನು ಬದಲಾಗುವುದರಿಂದ ಹಾಗೂ ಎಂಎಸ್ಎಂಇ ಬಗ್ಗೆ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ನಿಂದಾಗಿ ಆಟೋಮೊಬೈಲ್ ಕ್ಷೇತ್ರ ಬಲಗೊಳ್ಳುತ್ತ ದೆ ಎಂದು ಅವರು ಹೇಳಿದ್ದಾರೆ. “ಎಂಎಸ್ಎಂಇ ಸಂಸ್ಥೆಗಳ ಮೂಲಾರ್ಥವ ನ್ನು ಬದಲಾಯಿಸಬೇಕು. ಅವುಗಳ ಪುನರ್ ವಿಂಗಡಣೆಗೆ ಕ್ರಮ ಕೈಗೊಳ್ಳಬೇಕು ಎಂದು ಐಸಿಎಂಎ ಬಹುದಿನಗಳಿಂದ ಕೇಂದ್ರ ಸರ್ಕಾರವ ನ್ನು ಒತ್ತಾಯಿಸುತ್ತಿತ್ತು. ಆದರೆ, ಅದು ಈವರೆಗೆ ಸಾಧ್ಯವಾಗಿರಲಿಲ್ಲ.
ಈಗ, ಇದಕ್ಕೆ ಕಾಲ ಕೂಡಿಬಂದಿದೆ’ ಎಂದಿರುವ ಅವರು, “ಹೊಸ ನಿಯಮಗಳನುಸಾರ, 1 ಕೋಟಿ ರೂ.ಗಿಂತ ಕಡಿಮೆ ಹೂಡಿಕೆ ಅಥವಾ 5 ಕೋಟಿ ರೂ.ಗಿಂತ ಕಡಿಮೆ ವಹಿವಾಟು ಹೊಂದಿರುವ ಸಂಸ್ಥೆಗಳನ್ನು ಸೂಕ್ಷ್ಮ ಉದ್ಯಮಗಳೆಂದೂ ಪರಿಗಣಿಸ ಲಾಗುತ್ತದೆ. 10 ಕೋಟಿ ರೂ.ಗಿಂತ ಕಡಿಮೆ ಹೂಡಿಕೆ ಅಥವಾ 50 ಕೋಟಿ ರೂ.ಗಿಂತ ಕಡಿಮೆ ವಹಿವಾಟು ಹೊಂದಿರುವವರನ್ನು ಸಣ್ಣ ಕೈಗಾರಿಕೆಗಳೆಂದೂ ಹಾಗೂ 20 ಕೋಟಿ ರೂ.ಗಿಂತ ಕಡಿಮೆ ಹೂಡಿಕೆ ಅಥವಾ 100 ಕೋಟಿ ರೂ.ಗಿಂತ ಕಡಿಮೆ ವಹಿವಾಟು ಹೊಂದಿರುವ ಕಂಪನಿಗಳನ್ನು ಮಧ್ಯಮ ಕೈಗಾರಿಕೆಗಳು ಎಂದು ಪರಿಗಣಿಸಲಾಗುತ್ತದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.