![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Dec 10, 2022, 5:14 PM IST
ಪಣಜಿ: ಕಳೆದ ಕೆಲವು ವರ್ಷಗಳಿಂದ ಗಣಿಗಾರಿಕೆ ವ್ಯವಹಾರ ಮುಚ್ಚಿದ್ದರಿಂದ ಗೋವಾದ ಗಣಿ ಅವಲಂಭಿತ ಪ್ರದೇಶದ ಜನಜೀವನ ಅಸ್ತವ್ಯಸ್ತಗೊಂಡಿದೆ. ಆದ್ದರಿಂದ, ನಿರುದ್ಯೋಗ ಹೆಚ್ಚಳದಿಂದ ನಾಗರಿಕರು ಆರ್ಥಿಕ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈಗ ಗಣಿಗಾರಿಕೆ ಸರ್ಕಾರದ ಒಡೆತನದಲ್ಲಿರುವುದರಿಂದ ಈ ಭಾಗದ ಗಣಿ ಗುತ್ತಿಗೆಯನ್ನು ಕೂಡಲೇ ಹರಾಜು ಮಾಡಿ ಸ್ಥಳೀಯರಿಗೆ ಉದ್ಯೋಗ, ವ್ಯಾಪಾರ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದರು.
ಗೋವಾದ ಪಿಸುರ್ಲೆ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಚಿವ ರಾಣೆ ಮಾತನಾಡಿ, ನನ್ನ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಪ್ರತಾಪ್ ಸಿಂಹ ರಾಣೆಯವರಿಂದಾಗಿ ಐವತ್ತು ವರ್ಷಗಳಿಂದ ಈ ಕ್ಷೇತ್ರವು ಅಭಿವೃದ್ಧಿ ಹೊಂದಿದ್ದು, ಈ ಭಾಗದ ಅಭಿವೃದ್ಧಿಯು ಅದೇ ಹಾದಿಯಲ್ಲಿ ಮುಂದುವರಿಯಲಿದೆ ಎಂದರು.
ಪರ್ಯೆ ಕ್ಷೇತ್ರದಿಂದ ನನ್ನ ಪತ್ನಿ ಡಾ. ದಿವ್ಯಾ ರಾಣೆ ಅವರನ್ನು ಮತದಾರರು ದಾಖಲೆ ಮತಗಳಿಂದ ಆಯ್ಕೆ ಮಾಡಿದ್ದೀರಿ. ಆದ್ದರಿಂದ ಪರ್ಯೆ ಮತ್ತು ವಾಲ್ಪೈ ಕ್ಷೇತ್ರಗಳು ಉದ್ಯೋಗ ಮತ್ತು ಅಭಿವೃದ್ಧಿಯಲ್ಲಿ ಎಂದಿಗೂ ಹಿಂದುಳಿದಿಲ್ಲ ಎಂದರು.
ಈ ಸಂದರ್ಭಧಲ್ಲಿ ಉಪಸ್ಥಿತರಿದ್ದ ಶಾಸಕಿ ದಿವ್ಯಾ ರಾಣೆ ಮಾತನಾಡಿ, ಗಣಿ ಉದ್ಯಮ ಆರಂಭಿಸಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿಕೊಡಬೇಕು. ಕೂಡಲೇ ಹರಾಜಿನಲ್ಲಿ ಗಣಿ ಗುತ್ತಿಗೆ ತೆಗೆದು ಮೊದಲಿನಂತೆ ಸ್ಥಳೀಯರಿಗೆ ಆದ್ಯತೆ ನೀಡಲು ಶ್ರಮಿಸಲಾಗುವುದು ಎಂದರು.
ನಾಗರಿಕರು ಎದುರಿಸುತ್ತಿರುವ ನೆಲ, ಜಲ ಮತ್ತು ಉದ್ಯೋಗದ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು. ನಮ್ಮ ಕ್ಷೇತ್ರದಲ್ಲಿ ಎರಡು ಕೈಗಾರಿಕಾ ವಸಾಹತುಗಳಿದ್ದು, ಅದರ ಲಾಭ ಸ್ಥಳೀಯರಿಗೆ ಸಿಗಬೇಕು. ಅಲ್ಲದೆ ನಾವು ಈ ಪ್ರದೇಶವನ್ನು ಸೂಕ್ಷ್ಮ ಪ್ರದೇಶದಿಂದ ಹೊರಗಿಡಲು ಪ್ರಯತ್ನಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಹೋಂಡಾ ಜಿಲ್ಲಾ ಪಂಚಾಯತ್ ಸದಸ್ಯ ಸಗುನ್ ವಾಡ್ಕರ್, ಸಾಮಾಜಿಕ ಕಾರ್ಯಕರ್ತರಾದ ವಿನೋದ ಶಿಂಧೆ, ಪಂಚಾಯತ ಅಧ್ಯಕ್ಷ ದೇವಾನಂದ್ ಪರಬ್, ಉಪಾಧ್ಯಕ್ಷೆ ಬಿಜಿಲಿ ಗಾವಡೆ, ರೂಪೇಶ ಗಾವಡೆ, ಆತ್ಮಾರಾಮ್ ಪರಬ್, ಮತ್ತಿತರರು ಉಪಸ್ಥಿತರಿದ್ದರು.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.