![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 17, 2024, 8:31 PM IST
ಹೊಸದಿಲ್ಲಿ: ಹಿಂದೂಗಳ ಜಾಗೃತಿಯು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಾರಣವಾಯಿತು ಎಂದು ವಿಶ್ವ ಹಿಂದೂ ಪರಿಷತ್ತಿನ ಮಾಜಿ ನಾಯಕ ಪ್ರವೀಣ್ ತೊಗಾಡಿಯಾ ಭಾನುವಾರ ಹೇಳಿದ್ದಾರೆ.
ಜನವರಿ 22 ರಂದು ಉದ್ಘಾಟನೆಗೊಂಡ ರಾಮ ಮಂದಿರವು ಹಿಂದೂಗಳಿಗೆ ಶೌರ್ಯದ ಕಾರಣದ ವಿಜಯವನ್ನು ಯಾವಾಗಲೂ ನೆನಪಿಸುತ್ತದೆ ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ತೊಗಾಡಿಯಾ ಅವರು ಪಿಟಿಐಗೆ ತಿಳಿಸಿದರು.
ಎಂಟು ಕೋಟಿ ಮಂದಿ ಹಿಂದೂಗಳು ಭವ್ಯ ಮಂದಿರದ ಕಲ್ಲುಗಳನ್ನು ಕೆತ್ತಲು ತಲಾ 1.25 ರೂಪಾಯಿಗಳನ್ನು ದೇಣಿಗೆ ನೀಡಿದ್ದು ಹೇಗೆ ಎಂಬುದನ್ನು ಅವರು ನೆನಪಿಸಿಕೊಂಡರು. ಸುಪ್ರೀಂ ಕೋರ್ಟ್ ತೀರ್ಪು ಬರುವ ವೇಳೆಗೆ ಅಂತಹ ಸುಮಾರು 60,000 ಕಲ್ಲುಗಳು ಸಿದ್ಧವಾಗಿದ್ದವು ಎಂದರು.
”ರಾಮಶಿಲಾ ಪೂಜೆ, ಹನುಮಾನ್ ಚಾಲೀಸಾ, ರಾಮ್ ಜಾನಕಿ ಯಾತ್ರೆ, ಮಣಿಕರ್ ಸೇವೆ, ರಾಮ ಪಾದುಕಾ ಯಾತ್ರೆ, ರಾಮ ಜ್ಯೋತಿ ಯಾತ್ರೆ ಮುಂತಾದ ಕಾರ್ಯಕ್ರಮಗಳ ಮೂಲಕ ಹಿಂದೂಗಳಲ್ಲಿ ಜಾಗೃತಿ ಮೂಡಿಸಲು ನಾವು ಶ್ರಮಿಸಿದ್ದೇವೆ ಎಂದರು.
ಹನುಮಾನ್ ಚಾಲೀಸಾ ಕೇಂದ್ರಗಳ ಮೂಲಕ ಹಿಂದೂಗಳ ಮತಾಂತರವನ್ನು ತಡೆಯಲು ತಮ್ಮ ಸಂಘಟನೆ ಕೆಲಸ ಮಾಡುತ್ತದೆ, ಅವುಗಳಲ್ಲಿ 13,000 ಕಾರ್ಯಕಾರಿಯಾಗಿದೆ ಮತ್ತು ಈ ಸಂಖ್ಯೆಯನ್ನು ರಾಷ್ಟ್ರವ್ಯಾಪಿ ಒಂದು ಲಕ್ಷಕ್ಕೆ ಕೊಂಡೊಯ್ಯುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.
“ಸಂಕಷ್ಟದಲ್ಲಿರುವ ಹಿಂದೂಗಳಿಗಾಗಿ ನಾವು ಸಹಾಯವಾಣಿಯನ್ನು ಸಹ ಪ್ರಾರಂಭಿಸುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ಹಿಂದೂಗಳ ಬಗ್ಗೆ ಕಾಳಜಿ ಇರುವ ಸರಕಾರವನ್ನು ಆಯ್ಕೆ ಮಾಡಲಾಗುತ್ತದೆ ಎಂದು ನಾವು ಭಾವಿಸುತ್ತೇವೆ ಎಂದರು.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.