Ayodhya; ರಾಮ ಮಂದಿರ ಗೋಪುರ ನಿರ್ಮಾಣ ಬಿರುಸು
120 ದಿನಗಳಲ್ಲೇ ನಿರ್ಮಾಣ ಪೂರ್ಣಗೊಳಿಸುವ ಗುರಿ
Team Udayavani, Oct 14, 2024, 7:15 AM IST
ಅಯೋಧ್ಯೆ: ಜ.22ರ ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆ ಬಳಿಕ ಮಂದಿರದ ಉಳಿದ ಭಾಗಗಳ ನಿರ್ಮಾಣ ಕಾರ್ಯ ತ್ವರಿತವಾಗಿ ನಡೆಯುತ್ತಿದೆ. ನವರಾತ್ರಿಯ ಮೊದಲ ದಿನವೇ ಮಂದಿರದ ಗೋಪುರ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, 9 ದಿನಗಳಲ್ಲಿ ಮೊದಲ ಪದರ ಸಿದ್ಧವಾಗಿದೆ. ನೆಲದಿಂದ 161 ಅಡಿ ಎತ್ತರವಿರುವ ಈ ಶಿಖರವನ್ನು 120 ದಿನಗಳಲ್ಲಿ ನಗರ ಶೈಲಿಯಲ್ಲಿ ನಿರ್ಮಿಸಲಾಗುತ್ತದೆ. ವಿಶೇಷವೆಂದರೆ, ಗೋಪುರ ಚೌಕಾಕಾರದ ಬದಲಾಗಿ ಅಷ್ಟಭುಜಾಕೃತಿಯಲ್ಲಿರುತ್ತದೆ. ಅಷ್ಟಭುಜದ ಗೋಪುರ ಹೊಂದಿರುವ ದೇಶದ ಮೊದಲ ರಾಮಮಂದಿರ ಎಂಬ ಹೆಗ್ಗಳಿಕೆಗೂ ಅಯೋಧ್ಯೆ ದೇಗುಲ ಪಾತ್ರವಾಗಲಿದೆ.
ಮಂದಿರದ ವೈಭವೋಪೇತ ಗೋಪುರವನ್ನು 29 ಪದರಗಳಲ್ಲಿ ನಿರ್ಮಿಸಲಾಗುತ್ತದೆ. ರಾಮಮಂದಿರದ ಅಡಿಪಾಯವನ್ನು ಹೇಗೆ ಪದರ ಪದರವಾಗಿ ನಿರ್ಮಿಸಲಾಯಿತೋ ಅದೇ ರೀತಿ ಗೋಪುರ ನಿರ್ಮಾಣವಾಗಲಿದೆ. ಕೆಳಭಾಗದಿಂದ ಮೇಲಕ್ಕೆ ಹೋದಂತೆಲ್ಲ ಗೋಪುರದ ಸುತ್ತಳತೆ ಕಡಿಮೆಯಾಗಲಿದೆ. ಮೇಲ್ಭಾಗದಲ್ಲಿ 45 ಅಡಿ ಎತ್ತರ ಮತ್ತು 5 ಟನ್ ತೂಕದ ಧ್ವಜ ಸ್ತಂಭವನ್ನು ಅಳವಡಿಸಲಾಗುತ್ತದೆ. ಈ ಶಿಖರ ಎಷ್ಟು ಬಲಿಷ್ಠವಾಗಿರಲಿದೆ ಎಂದರೆ, ರಿಕ್ಟರ್ ಮಾಪಕದಲ್ಲಿ 8-10 ತೀವ್ರತೆ ಭೂಕಂಪವಾದರೂ ಇದು ಸುರಕ್ಷಿತವಾಗಿರಲಿದೆ ಎಂದು ವಾಸ್ತುಶಿಲ್ಪಿ ಆಶಿಷ್ ಸೋಂಪುರ ಹೇಳಿದ್ದಾರೆ.
4 ತಿಂಗಳಲ್ಲಿ ಪೂರ್ಣ: ಇದರ ಜತೆಗೆ, ಮಂದಿರದ ಆವರಣದಲ್ಲಿ ಸಪ್ತಮಂದಿರ ನಿರ್ಮಾಣ ಕಾರ್ಯವೂ ತ್ವರಿತಗತಿಯಲ್ಲಿ ನಡೆಯುತ್ತಿದ್ದು, 4 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಒಟ್ಟಾರೆಯಾಗಿ ಇಡೀ ಮಂದಿರದ ಸಂಪೂರ್ಣ ನಿರ್ಮಾಣ ಕಾಮಗಾರಿ ಪ್ರಸಕ್ತ ವರ್ಷದ ಡಿಸೆಂಬರ್ ಒಳಗೆ ಮುಗಿಸುವುದು ನಮ್ಮ ಉದ್ದೇಶ ಎಂದು ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ.
ಬಾಲಕರಾಮನ ಗರ್ಭಗುಡಿ ನೆಲಮಹಡಿಯಲ್ಲೇ ಇರುತ್ತದೆ. ಮೊದಲ ಮಹಡಿಯಲ್ಲಿ ರಾಮದರ್ಬಾರ್ ಇರಲಿದೆ. ಮೊದಲಿಗೆ ಬಾಲಕರಾಮನ ದರ್ಶನ ಪಡೆದು, ಬಳಿಕ ಭಕ್ತರು ಮೆಟ್ಟಿಲು ಹತ್ತಿಕೊಂಡು ಮೊದಲ ಮಹಡಿಗೆ ಹೋಗಿ ರಾಮ್ದರ್ಬಾರ್ನ ದರ್ಶನ ಪಡೆಯುತ್ತಾರೆ. 2ನೇ ಮಹಡಿಯಲ್ಲಿ ಯಾವುದೇ ವಿಗ್ರಹ ಪ್ರತಿಷ್ಠಾಪನೆ ಬಗ್ಗೆ ಸದ್ಯಕ್ಕೆ ನಿರ್ಧಾರವಾಗಿಲ್ಲ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UP: ದುರ್ಗಾ ವಿಸರ್ಜನೆ ವೇಳೆ ಕೋಮು ಘರ್ಷಣೆ: ಗುಂಡಿನ ದಾಳಿ… ಯುವಕ ಬಲಿ, 30 ಮಂದಿ ಬಂಧನ
Flight: ಮುಂಬೈಯಿಂದ ನ್ಯೂಯಾರ್ಕ್ ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ…
Kumbhamela; ನಕಲಿ ಬಾಬಾಗಳ ಹಾವಳಿ: ಪ್ರಯಾಗ್ರಾಜ್ನಲ್ಲಿ ಸಾಧುಗಳಿಗೆ ಐಡಿ ಕಾರ್ಡ್?
Muslims; ಹಿಮಾಚಲ ಸೇಬು ಬಹಿಷ್ಕರಿಸಿ: ಒವೈಸಿ ಪಕ್ಷದ ನಾಯಕನ ವಿವಾದ
Love; ಒಟ್ಟಿಗಿರಲು ಭಿಕ್ಷುಕನನ್ನು ಸುಟ್ಟು ಪ್ರೇಮಿಗಳ ನಾಟಕ!!: 27 ವರ್ಷದ ಯುವತಿ ಬಂಧನ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
UP: ದುರ್ಗಾ ವಿಸರ್ಜನೆ ವೇಳೆ ಕೋಮು ಘರ್ಷಣೆ: ಗುಂಡಿನ ದಾಳಿ… ಯುವಕ ಬಲಿ, 30 ಮಂದಿ ಬಂಧನ
Actor Bala: ಮಾಜಿ ಪತ್ನಿ ಜತೆ ಅನುಚಿತ ವರ್ತನೆ ಆರೋಪ; ಖ್ಯಾತ ನಟ ಬಂಧನ
Women’s T20 World Cup: ಆಸೀಸ್ ವಿರುದ್ದ ಸೋತರೂ ಭಾರತಕ್ಕೆ ಇನ್ನೂ ಇದೆ ಸೆಮಿ ಅವಕಾಶ
Hunasuru: ಜ್ವರಕ್ಕೆ ಮದ್ದು ತರಲು ಹೋಗುತ್ತಿದ್ದ ತಂದೆ ಮಗಳಿಗೆ ಬೈಕ್ ಡಿಕ್ಕಿ, ಬಾಲಕಿ ಮೃತ್ಯು
Punjalkatte: ನಿಯಂತ್ರಣ ತಪ್ಪಿ ಉರುಳಿಬಿದ್ದ ಕಾರು; ಮಹಿಳೆ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.