![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 2, 2020, 9:15 AM IST
ಹೊಸದಿಲ್ಲಿ: ‘ಬಾಬಾ ಕಾ ಡಾಬಾ’ ಕೆಲವು ದಿನಗಳ ಹಿಂದೆ ಈ ಹೆಸರನ್ನು ನೀವೂ ಕೇಳಿರಬಹುದು. ರಸ್ತೆ ಪಕ್ಕದಲ್ಲಿ ಸಣ್ಣ ಕ್ಯಾಂಟೀನ್ ಇಟ್ಟುಕೊಂಡು ವ್ಯಾಪಾರ ಇಲ್ಲದೆ ಕಣ್ಣೀರು ಹಾಕಿದ್ದ ವೃದ್ಧ ದಂಪತಿಯ ಒಂದು ವಿಡಿಯೋ ವೈರಲ್ ಆದ ಘಟನೆ ನಡೆದು ಇನ್ನು ಕೆಲವೇ ದಿನಗಳಾಗಿವೆ. ಆದರೆ ತನ್ನ ಕ್ಯಾಂಟೀನ್ ಅನ್ನು ಪ್ರಸಿದ್ದಿ ಮಾಡಿದ ಯೂಟ್ಯೂಬರ್ ವಿರುದ್ಧ ಕ್ಯಾಂಟೀನ್ ಮಾಲಕ ಪೊಲೀಸರಿಗೆ ದೂರು ನೀಡಿದ್ದಾರೆ.
ಬಾಬಾ ಕಾ ಡಾಬಾ ವಿಡಿಯೋ ಮಾಡಿದ್ದ ಗೌರವ್ ವಾಸನ್ ಜನರಿಂದ ಹಣ ಪಡೆಯುತ್ತಿದ್ದಾರೆ. ಅವರು ತನ್ನ ಸ್ನೇಹಿತರ ಬ್ಯಾಂಕ್ ಅಕೌಂಟ್ ಮಾಹಿತಿ ನೀಡಿ ಜನರಿಂದ ಹಣ ಸಂಗ್ರಹಿಸಿದ್ದಾರೆ ಎಂದು ಬಾಬಾ ಕಾ ಡಾಬಾ ಮಾಲಕ ಕಾಂತ ಪ್ರಸಾದ್ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ;ಕೊನೆಯ ಐಪಿಎಲ್ ಪಂದ್ಯವಾಡಿದರೆ ಧೋನಿ? ಡ್ಯಾನಿ ಮಾರಿಸನ್ ಪ್ರಶ್ನೆಗೆ ಮಾಹಿ ಹೇಳಿದ್ದೇನು?
ದಕ್ಷಿಣ ದೆಹಲಿಯ ಮಾಳ್ವಿಯಾ ನಗರದ ರಸ್ತೆಯ ಬದಿಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಈ ದಂಪತಿಯ ಸಂಕಷ್ಟದ ವಿಡಿಯೋವನ್ನು ಫುಡ್ ಬ್ಲಾಗರ್ ಆದ ಗೌರವ್ ವಾಸನ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಲಾಕ್ ಡೌನ್ ಕಾರಣದಿಂದ ಸಂಕಷ್ಟದಲ್ಲಿರುವ ಈ ದಂಪತಿಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದರು. ನಂತರ ಈ ವಿಡಿಯೋ ವೈರಲ್ ಆಗಿದ್ದು, ನಟರು ಸೇರಿದಂತೆ ಬಹಳಷ್ಟು ಜನರು ವಿಡಿಯೋ ಶೇರ್ ಮಾಡಿದ್ದರು.
ಬಾಬಾ ಕಾ ಡಾಬಾ ಬಳಿ ಭಾರಿ ಜನರು ಸೇರಿ ಆಹಾರ ಖರೀದಿಸಿದ್ದರು. ಬಹಳಷ್ಟು ಜನರು ದಂಪತಿಯ ಹಣಕಾಸಿನ ನೆರವನ್ನೂ ನೀಡಿದ್ದಾರೆ. ಆದರೆ ಇದೀಗ ದಂಪತಿ ಠಾಣೆ ಮೆಟ್ಟಿರೇರಿದ್ದು, ಯೂಟ್ಯೂಬರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಾಲ್ವಿಯಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.