ಓರಗೆಯ ಬಾಲಕನನ್ನೇ ಕೊಂದು, ರಕ್ತವನ್ನೇ ಕುಡಿದ!


Team Udayavani, Jan 22, 2017, 9:24 AM IST

22-NT-6.jpg

ಲುಧಿಯಾನ: ಆತನೇನೂ ಗುರುತರ ಅಪರಾಧಿ ಖಂಡಿತ ಅಲ್ಲ. ಆದರೆ ಮಾಡಿದಂಥ ಕೃತ್ಯ ಮಾತ್ರ ಸಾಮಾನ್ಯರ ಎದೆಯನ್ನು ಝಲ್ಲೆನಿಸದೆ ಬಿಡದು. ಪಂಜಾಬ್‌ನ ಲುಧಿಯಾನದಲ್ಲಿ 16 ವರ್ಷದ ಬಾಲಕ ಒಂಬತ್ತು ವರ್ಷದ ಬಾಲಕನನ್ನು ಕೊಂದು, ಆತನ ದೇಹವನ್ನು ಆರು ತುಂಡು ಮಾಡಿದ್ದಾನೆ. ಜತೆಗೆ ಮಾಂಸ ತಿಂದು, ರಕ್ತ ಕುಡಿದಿದ್ದಾನೆ. ಆತ ಎಷ್ಟು ಕ್ರೂರತೆ ಮೆರೆದಿದ್ದಾನೆ ಎಂಬುದಕ್ಕೆ ಸಾಕ್ಷಿ ಯೆಂದರೆ ಹೃದಯವನ್ನು ಬಗೆದು ಅದನ್ನು ಶಾಲೆಯ ಆವರಣದಲ್ಲಿ ಎಸೆದು ಬಂದಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಲುಧಿಯಾನದ ದುಗ್ರಿ ಎಂಬ ಪ್ರದೇಶದಲ್ಲಿ ಕೂಲಿ ಕಾರ್ಮಿಕರ ಕುಟುಂಬಕ್ಕೆ ಸೇರಿದವರು ಈ ಮಕ್ಕಳು. ಸೋಮವಾರದಿಂದ 9 ವರ್ಷದ ಬಾಲಕ ನಾಪತ್ತೆಯಾಗಿದ್ದ. ಈ ಪೊಲೀಸ ರಿಗೂ ದೂರು ದಾಖಲಾಗಿತ್ತು. ಕುಕೃತ್ಯಕ್ಕೆ ಬಲಿಯಾದ ದೀಪು ಕುಮಾರ್‌ ಗಾಳಿ ಪಟ 
ಹಾರಿಸುವ ದಾರ ಪಡೆದುಕೊಳ್ಳಲೆಂದು ಬಾಲಕನ ಮನೆಗೆ ತೆರಳಿದ್ದ. ಮನೆಗೆ ಬಂದವನ ಕೊರಳನ್ನು ತಿರುಚಿ ಮುರಿದು ಹಾಕಿದ. ಅನಂತರ ಆತನನ್ನು ಮನೆಯ ಸ್ನಾನಗೃಹಕ್ಕೆ ಎಳೆದುಕೊಂಡು ಹೋಗಿ ಬಟ್ಟೆಯನ್ನೆಲ್ಲ ಕಳಚಿದ. ಬಳಿಕ ತೋಟದಲ್ಲಿ ಗಿಡಗಳನ್ನು ಕತ್ತರಿಸುವ ಹರಿತವಾದ ಆಯುಧದಿಂದ ದೀಪುವಿನ ದೇಹವನ್ನು ಆರು ಭಾಗಗಳನ್ನಾಗಿ ತುಂಡರಿಸಿದ. ಜತೆಗೆ ಮಾಂಸ ತಿಂದು, ರಕ್ತವನ್ನೂ ಕುಡಿದ. ಆತನ ಕ್ರೂರತೆ ಎಷ್ಟು ಇತ್ತು ಎಂದರೆ ಮಾಂಸವನ್ನು ಬಗೆದು ಹೃದಯವನ್ನು ಸುಲಿದ. ಇಷ್ಟೆಲ್ಲ ಮಾಡಿದ ಬಳಿಕ ಪ್ಲಾಸ್ಟಿಕ್‌ ಚೀಲದಲ್ಲಿ ದೇಹದ ತುಂಡುಗಳನ್ನೆಲ್ಲ ಸಂಗ್ರಹಿಸಿ, ಸೈಕಲ್‌ ಮೂಲಕ ಸಮೀಪದ ಖಾಲಿ ಸ್ಥಳದಲ್ಲಿ ಚೆಲ್ಲಿ ಮನೆಗೆ ವಾಪಸಾಗಿದ್ದ. ಶಾಲೆಯ ನೀರಿನ ಟ್ಯಾಂಕ್‌ ಬಳಿ ಬಿದ್ದಿದ್ದ ಹೃದಯವನ್ನು ಪೊಲೀಸರು ಪಡೆದುಕೊಂಡಿದ್ದಾರೆ.

ಎದೆ ನಡುಗಿಸುವಂಥ ಕುಕೃತ್ಯ ನಡೆಸಿ ದರೂ ವರ್ತನೆಯಲ್ಲಿ ಯಾವುದೇ ಸಂಶಯ ಬಾರದಂತೆ ಆತ ವರ್ತಿಸಿದ. ತಂದೆ ಮತ್ತು ತಾಯಿಗೆ ಅಡುಗೆ ಮಾಡಿ ಊಟವನ್ನು ಕೂಡ ಬಡಿಸಿದ್ದ. ದೀಪು ಕುಮಾರ್‌ ನಾಪತ್ತೆಯಾದ ಬಗ್ಗೆ ಆತನ ಹೆತ್ತವರು ಪೊಲೀಸರಿಗೆ ದೂರಿದ್ದರು. ದುಗ್ರಿ ಸುತ್ತಮುತ್ತ   ಅಳವಡಿಸಲಾಗಿದ್ದ ಸಿಸಿ ಟಿವಿ ದೃಶ್ಯಗಳನ್ನು ಪೊಲೀಸರು ಅವಲೋಕಿಸಿದರು. ಈ ವೇಳೆ ಅಸುನೀಗಿದ ದೀಪುಕುಮಾರ್‌ ನೆರೆಯ ಮನೆಯ ಬಾಲಕನ ಜತೆ ಇದ್ದುದನ್ನು ಖಚಿತ ಪಡಿಸಿಕೊಂಡರು. ಆತನನ್ನು ಕರೆದು ವಿಚಾರಿ ಸಿದ ಬಳಿಕ ಘಾತಕ ಕೃತ್ಯದ ಸಂಪೂರ್ಣ ವಿವರಣೆಯನ್ನು ಪಡೆದುಕೊಂಡರು.

ಕಾರಣ ಏನು?: ಹಂತಕ ಬಾಲಕ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಆತನಿಗೆ ಶಾಲೆಯಲ್ಲಿನ ಅಧ್ಯಾಪಕರ ಮೇಲೆ ಯಾವುದೋ ಕಾರಣಕ್ಕೆ ಸಿಟ್ಟು ಇತ್ತು. ಬಾಲಕನನ್ನು ಕೊಂದು  ಶಾಲೆಗೆ ಕೆಟ್ಟ ಹೆಸರು ತರಬೇಕೆಂದು ಆತ ಉದ್ದೇಶಿಸಿದ್ದ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆMalpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

sringeri-new

Sringeri: ಇಂದು ಸುವರ್ಣ ಭಾರತೀ ಮಹೋತ್ಸವ “ಸ್ತೋತ್ರ ತ್ರಿವೇಣಿ ಮಹಾಸಮರ್ಪಣೆ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rahul-gandhi

Savarkar ಅವಮಾನ ಕೇಸ್‌: ರಾಹುಲ್‌ಗೆ ಪುಣೆ ಕೋರ್ಟ್‌ ಬೇಲ್‌

MONEY (2)

Tax share: ರಾಜ್ಯಕ್ಕೆ ಕೇಂದ್ರದಿಂದ 6,310 ಕೋ.ರೂ. ಹಂಚಿಕೆ

Exam 3

2024ರಲ್ಲಿ ಕಾಲೇಜಿಂದ ಹೊರಗುಳಿದವರಿಗೆ ಜೆಇಇ ಪರೀಕ್ಷೆಗೆ ಸಮ್ಮತಿ

Ashwin Vaishnav

Railway; 2 ವರ್ಷದಲ್ಲಿ 50 ಅಮೃತ್‌ ಭಾರತ ರೈಲು ಉತ್ಪಾದನೆ: ಅಶ್ವಿ‌ನಿ ವೈಷ್ಣವ್‌

1-wqewqeqwe

Cardiac arrest: ಗುಜರಾತ್‌ ಶಾಲೆಯಲ್ಲಿ 3ನೇ ತರಗತಿ ವಿದ್ಯಾರ್ಥಿನಿ ಸಾ*ವು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

1-saaai

Malaysia Open Badminton: ಸಾತ್ವಿಕ್‌-ಚಿರಾಗ್‌ ಜೋಡಿ ಸೆಮಿಗೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.