ಬಾಂದ್ರಾ to ವರ್ಲಿ : ಮುಂಬಯಿಗೆ ಮತ್ತೊಂದು ಸೀ ಲಿಂಕ್
Team Udayavani, Dec 6, 2017, 1:32 PM IST
ಮುಂಬಯಿ: ಮಹಾನಗರ ಮುಂಬಯಿಯ ಅಭಿವೃದ್ಧಿಗೆ ಪ್ರಮುಖ ಉತ್ತೇಜನವೊಂದರಲ್ಲಿ, ಮಹಾರಾಷ್ಟ್ರ ಸರಕಾರವು ಸೋಮವಾರ ಪ್ರಸ್ತಾವಿತ ವಸೋìವಾ- ಬಾಂದ್ರಾ ಸೀ ಲಿಂಕ್(ವಿಬಿಸಿಎಲ್) ಯೋಜನೆಗೆ ತನ್ನ ಅಂತಿಮ ಹಾಗೂ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ. ಕಳೆದ ಜೂನ್ನಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನ ವೀಸ್ ನೇತೃತ್ವದ ಮೂಲಸೌಕರ್ಯಗಳಿಗೆ ಸಂಬಂಧಿ ಸಿದ ಕ್ಯಾಬಿನೆಟ್ ಉಪ ಸಮಿತಿಯಿಂದ ಹಸಿರು ನಿಶಾನೆ ಸಿಕ್ಕಿದ ಬಳಿಕ ಯೋಜನೆಗೆ ಅಂತಿಮ ಅನುಮೋದನೆ ಸಿಕ್ಕಿರುವುದಾಗಿದೆ.
ಈ ಸೀ ಲಿಂಕ್ ಯೋಜನೆಯು ರಸ್ತೆ, ಸುರಂಗ ಹಾಗೂ ಸೀ ಲಿಂಕ್ಗಳ ಮೂಲಕ ದಕ್ಷಿಣ ಮುಂಬಯಿಯನ್ನು ಪಶ್ಚಿಮ ಉಪನಗರಗಳಿಗೆ ಸಂಪರ್ಕಿಸುವ ಕೋಸ್ಟಲ್ ರೋಡ್ ಯೋಜ ನೆಯ ಪ್ರಮುಖ ಅಂಶವಾಗಿದೆ.
ಕ್ಯಾಶ್ ಕಾಂಟ್ರ್ಯಾಕ್ಟ್ ಮಾದರಿಯಲ್ಲಿ ವಿಬಿಎಸ್ಎಲ್ ನಿರ್ಮಾಣ
ಸಮಿತಿಯು ಕ್ಯಾಶ್ ಕಾಂಟ್ರ್ಯಾಕ್ಟ್ ಮಾದರಿಯ ಆಧಾರದ ಮೇಲೆ ಬಾಂದ್ರಾ- ವಸೋìವಾ ಸೀ ಲಿಂಕ್ನ್ನು ನಿರ್ಮಿಸಲು ತನ್ನ ಅನುಮತಿಯನ್ನು ನೀಡಿದೆ. ಅಂದರೆ ರಾಜ್ಯ ಸರಕಾರವು ಸ್ವತಃ ಈ ಸೀ ಲಿಂಕ್ ಅನ್ನು ನಿರ್ಮಾಣ ಮಾಡಿ, ತದನಂತರ ಟೋಲ್ ವಿಧಿಸುವ ಮೂಲಕ ಅದರ ವೆಚ್ಚವನ್ನು ವಸೂಲಿ ಮಾಡಲಿದೆ ಎಂದು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಎಂಎಸ್ಆರ್ಡಿಸಿ)ಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಂಎಸ್ಆರ್ಡಿಸಿ ಇತ್ತೀಚೆಗೆ ರಾಜ್ಯ ಸರಕಾರದಿಂದ ಈ ಯೋಜನೆಗೆ ಪರಿಸರ ಅನುಮತಿ ಪಡೆದುಕೊಂಡಿದೆ. 9.5 ಕಿ.ಮೀ. ಉದ್ದದ ಸೀ ಲಿಂಕ್ ನಿರ್ಮಾಣ ಮಾಡಲು ಸಂಸ್ಥೆಯು ಈಗಾಗಲೇ ಕೇಂದ್ರ ಸಂಸ್ಥೆಗ ಳಿಂದ ಕರಾವಳಿ ನಿಯಂತ್ರಣ ವಲಯ (ಸಿಆರ್ಝೆಡ್) ಅನುಮತಿ ಯನ್ನು ಪಡೆದುಕೊಂಡಿದೆ. ಈ ಯೋಜನೆಗೆ ಅಂದಾಜು 7,502 ಕೋ.ರೂ. ಖರ್ಚಾಗಲಿದೆ.
2020ರೊಳಗೆ ಪೂರ್ಣ ?
ಈ ಹೊಸ ಸೀ ಲಿಂಕ್ ನಿರ್ಮಾಣಕ್ಕಾಗಿ ನೋಡಲ್ ಏಜೆನ್ಸಿಯಾಗಿರುವ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮವು ಸುರಂಗ ಹಾಗೂ ಸೇತುವೆಗಳ ನಿರ್ಮಾಣ ಕ್ಷೇತ್ರದಲ್ಲಿ ಎಕ್ಸ್ ಪರ್ಟ್ ಆಗಿರುವ 5 ಕಂಪೆನಿಗಳನ್ನು ಶಾಟ್ ìಲಿಸ್ಟ್ ಮಾಡಿದ್ದು, ಅ. 1ರಿಂದ ನಿರ್ಮಾಣ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ. ಎಂಎಎಸ್ಆರ್ಡಿಸಿ ಬಾಂದ್ರಾ-ವಸೋìವಾ ಸೀ ಲಿಂಕ್ ಯೋಜನೆಯನ್ನು 2020 ರೊಳಗೆ ಪೂರ್ಣಗೊಳಿಸಲು ಗುರಿ ನಿಗದಿಪಡಿಸಿದೆ.
ಬಾಂದ್ರಾ-ವರ್ಲಿ ಸೀ ಲಿಂಕ್ನ ವಿಸ್ತರಣಾ ಯೋಜನೆಯಾಗಿರುವ ಇದು ಬಾಂದ್ರಾ ಸೀ ಲಿಂಕ್ ಅನ್ನು ವಸೋìವಾಗೆ ಜೋಡಿಸಲಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ವಾಹನ ಸವಾರರಿಗೆ ಬಾಂದ್ರಾ-ವಸೋìವಾ ನಡುವೆ ಜುಹೂವಿನ ಕೋಳಿವಾಡಾ ಮತ್ತು ವಸೋìವಾದ ನಾನಾ-ನಾನಿ ಪಾರ್ಕ್ ಸಮೀಪ ರಸ್ತೆ ಬದಲಾವಣೆಯ ಸೌಲಭ್ಯ ಸಿಗಲಿದೆ. ದೇಶೀಯ ಸಾಲದಾತರು ಇದಕ್ಕೆ ಹಣಕಾಸು ನೆರವು ನೀಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಪಕ್ಷವನ್ನು ತುಕ್ಡೆ ತುಕ್ಡೆ ಗ್ಯಾಂಗ್, ನಗರ ನಕ್ಸಲರು ನಡೆಸುತ್ತಿದ್ದಾರೆ:ಮೋದಿ
SC ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ರದ್ದು ಅರ್ಜಿ ಎರಡು ವಾರ ಮುಂದೂಡಿಕೆ
FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ
Moradabad ರಕ್ತದಾನಿಯಂತೆ ಪೋಸ್ ನೀಡಿ ಸಿಕ್ಕಾಪಟ್ಟೆ ಟ್ರೋಲ್ ಆದ ಬಿಜೆಪಿ ಮೇಯರ್!
West Bengal ಕೋರ್ಟ್ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
ಶಿರೂರುಗುಡ್ಡ ಕುಸಿತ ಸ್ಥಳ ತಲುಪಿದ ಡ್ರೆಜ್ಜಿಂಗ್ ಯಂತ್ರ-3 ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ!
Congress ಪಕ್ಷವನ್ನು ತುಕ್ಡೆ ತುಕ್ಡೆ ಗ್ಯಾಂಗ್, ನಗರ ನಕ್ಸಲರು ನಡೆಸುತ್ತಿದ್ದಾರೆ:ಮೋದಿ
Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ
SC ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ರದ್ದು ಅರ್ಜಿ ಎರಡು ವಾರ ಮುಂದೂಡಿಕೆ
Recipe: ಫಾಸ್ಟ್ ಫುಡ್ ಆಹಾರಗಳಿಗೆ ಮಾರು ಹೋಗುವ ಬದಲು ಈ ಫುಡ್ ಟ್ರೈ ಮಾಡಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.