ಹಿಂಸಾದೃಶ್ಯಗಳನ್ನು ಹಸಿಹಸಿಯಾಗಿ ತೋರುವ ಟೀವಿವಾಹಿನಿಗಳಿಗೆ ಎಚ್ಚರಿಕೆ
ಕೇಂದ್ರ ವಾರ್ತಾ ಇಲಾಖೆಯಿಂದ ಉದಾಹರಣೆ ಸಮೇತ ಸಂದೇಶ
Team Udayavani, Jan 10, 2023, 7:30 AM IST
ನವದೆಹಲಿ: ದೇಶದ ಎಲ್ಲ ಟೀವಿ ವಾಹಿನಿಗಳಿಗೂ ಕೇಂದ್ರ ವಾರ್ತಾ ಇಲಾಖೆ ಸ್ಪಷ್ಟ ಎಚ್ಚರಿಕೆ ನೀಡಿದೆ. ಹಿಂಸಾತ್ಮಕ ಘಟನೆಗಳನ್ನು ಸ್ವಲ್ಪವೂ ಪರಿಷ್ಕರಣೆಗೊಳಿಸದೇ, ನೇರಾನೇರವಾಗಿ ಹಸಿಹಸಿಯಾಗಿ ತೋರಿಸುವ, ವಿಜೃಂಭಿಸುವ ಪ್ರವೃತ್ತಿಯಿಂದ ಜನರ ಮನಸ್ಸಿನ ಮೇಲೆ ಆಘಾತಕಾರಿ ಪರಿಣಾಮ ಬೀರುತ್ತಿದೆ ಎಂದು ಹೇಳಿದೆ.
ಸಾವು, ಅಪಘಾತ, ಮಹಿಳೆ, ಮಕ್ಕಳ ಮೇಲಿನ ಹಲ್ಲೆಯನ್ನು ಯಥಾರೀತಿಯಲ್ಲಿ ತೋರಿಸಿದ್ದನ್ನು ಉದಾಹರಣೆಯಾಗಿ ನೀಡಿರುವ ಅದು; ಈ ಮೂಲಕ ಟೀವಿ ವಾಹಿನಿಗಳು ಸದಭಿರುಚಿ ಮತ್ತು ಶಿಸ್ತಿನ ಪರಿಮಿತಿಯನ್ನು ಮೀರಿವೆ ಎಂದು ಕಿಡಿಕಾರಿದೆ.
ರಕ್ತಸಿಕ್ತ ದೇಹ, ಮೃತದೇಹಗಳು, ದೈಹಿಕ ಹಲ್ಲೆಗಳನ್ನು ಹಸಿಹಸಿಯಾಗಿ ತೋರಿಸುವುದು ನೀತಿಸಂಹಿತೆಗೆ ವಿರುದ್ಧ. ಸಾಮಾಜಿಕ ತಾಣಗಳಿಂದ ಪಡೆದುಕೊಂಡ ವಿಡಿಯೊಗಳನ್ನು ಸ್ವಲ್ಪವೂ ಪರಿಷ್ಕರಣೆಗೊಳಪಡಿಸದೇ ತೋರಿಸಲಾಗುತ್ತಿದೆ. ಇದು ಮಕ್ಕಳ ಮೇಲೆ, ಬಾಧಿತರ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಾರ್ತಾ ಇಲಾಖೆ ಹೇಳಿದೆ. ಜತೆಗೆ, ಕಾನೂನಿನ ನಿಯಮಗಳನ್ನು ಪಾಲಿಸುವಂತೆಯೂ ಸೂಚಿಸಿದೆ. ಹಾಗೆಯೇ ಟೀವಿ ವಾಹಿನಿಗಳು ಹಸಿಹಸಿಯಾಗಿ ತೋರಿದ ಹಲವು ದೃಶ್ಯಾವಳಿಗಳ ಉದಾಹರಣೆಯನ್ನು ಪಟ್ಟಿ ಮಾಡಿದೆ. ಅವು ಹೀಗಿವೆ…
1. 2022 ಡಿ.30ರಂದು ಕ್ರಿಕೆಟಿಗ ರಿಷಭ್ ಪಂತ್ ಅಪಘಾತಕ್ಕೊಳಗಾಗಿದ್ದು.
2. 2022, ಆ.28ರಂದು ವ್ಯಕ್ತಿಯೊಬ್ಬ ರಕ್ತಸಿಕ್ತ ಮೃತದೇಹವನ್ನು ಎಳೆದೊಯ್ಯತ್ತಿದ್ದದ್ದು.
3. 2022 ಜು.6ರಂದು ಬಿಹಾರದ ಪಾಟ್ನಾದಲ್ಲಿ ಶಿಕ್ಷಕನೊಬ್ಬ 5 ವರ್ಷದ ಹುಡುಗನನ್ನು ಕ್ರೂರವಾಗಿ ದಂಡಿಸಿದ್ದು.
4. 2022, ಜೂ.4ರಂದು ಪಂಜಾಬಿ ಗಾಯಕನೊಬ್ಬನ ರಕ್ತಸಿಕ್ತ ಶವವನ್ನು ತೋರಿಸಿದ್ದು.
5. 2022 ಮೇ 25ರಂದು ಅಸ್ಸಾಂ ಚಿರಾಂಗ್ನಲ್ಲಿ ವ್ಯಕ್ತಿಯೊಬ್ಬ ಇಬ್ಬರು ಅಪ್ರಾಪ್ತ ವಯಸ್ಕ ಹುಡುಗರನ್ನು ಕೋಲಿನಿಂದ ತೀವ್ರವಾಗಿ ದಂಡಿಸಿದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು
Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್: ಅಶ್ವಿನಿ ವೈಷ್ಣವ್
ಕಾಂಗ್ರೆಸ್ ನಾಯಿ ನಮ್ಮ ಕಾರ್ಯಕ್ರಮಕ್ಕೆ ಬಂದರೆ…: ಶಿವಸೇನೆ ಶಾಸಕನ ವಿವಾದಾತ್ಮಕ ಹೇಳಿಕೆ
One Nation, One Election ಅಸಂಭವ: ಕೇಂದ್ರ ಸಂಪುಟ ನಿರ್ಧಾರಕ್ಕೆ ಖರ್ಗೆ ವಿರೋಧ
Rahul Gandhi ವಿರುದ್ಧ ಕೇಂದ್ರ ಸಚಿವ, ಬಿಜೆಪಿಗರ ಹೇಳಿಕೆ;ದೇಶದ ವಿವಿಧೆಡೆ ಕೈ ಪ್ರತಿಭಟನೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.