![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 12, 2019, 6:00 AM IST
ಕಾರ್ಗಿಲ್: ಬೆಟ್ಟದ ಕಲ್ಲು ಬಂಡೆಗಳ ಮೇಲೆ ಕುಳಿತಿದ್ದ ಕರಡಿಯೊಂದು ಪ್ರವಾಸಿಗರ ಕೀಟಲೆ ದುರ್ಬುದ್ಧಿಯಿಂದಾಗಿ, ಬೆಟ್ಟದಿಂದ ಜಾರಿ ಪ್ರಪಾತದಲ್ಲಿ ಹರಿಯುತ್ತಿದ್ದ ನದಿಗೆ ಬಿದ್ದಿರುವ ಮನಕಲಕುವ ಘಟನೆ ಕಾರ್ಗಿಲ್ನಲ್ಲಿ ನಡೆದಿದೆ. ಇದರ 8 ಸೆಕೆಂಡ್ಗಳ ವಿಡಿಯೋ ತುಣುಕನ್ನು ಕಾಶ್ಮೀರದ ಪ್ರವಾ ಸೋದ್ಯಮ ಇಲಾಖೆ ನಿರ್ದೇಶಕ ಮೊಹ ಮೂದ್ ಶಾ ಅವರು, ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಕರಡಿಗಾದ ತೊಂದರೆಗೆ ಖೇದ ವ್ಯಕ್ತಪಡಿಸಿರುವ ಜನ, ಅದಕ್ಕೆ ಕಾಟ ಕೊಟ್ಟವರಿಗೆ ಹಿಡಿ ಶಾಪ ಹಾಕಿದ್ದಾರೆ.
ಆಗಿದ್ದೇನು?: ಕಾರ್ಗಿಲ್ನ ಲಡಾಖ್ ಪ್ರಾಂತ್ಯದ ಡಾಸ್ ಬೆಟ್ಟದಲ್ಲಿ ಅಡ್ಡಾಡಿ ಕೊಂಡಿದ್ದ ಈ ಕರಡಿ ಯನ್ನು ಸುತ್ತಲಿನ ಕೆಲ ಹಳ್ಳಿಗರು ಅಟ್ಟಿಸಿ ಕೊಂಡು ಹೋಗಿದ್ದಾರೆ. ಭಯದಿಂದಾಗಿ ಅದು ದುರ್ಗಮ ಬೆಟ್ಟ ಹತ್ತಲು ಯತ್ನಿಸಿದೆ. ಸುಮಾರು ಮುಕ್ಕಾಲು ಬೆಟ್ಟ ಹತ್ತಿದ್ದ ಆ ಕರಡಿಯ ಕಡೆಗೆ ಕೆಲವು ಹಳ್ಳಿಗರು ಕಲ್ಲೆಸೆದಿದ್ದಾರೆ. ಗಲಿ ಬಿಲಿಗೊಂಡ ಕರಡಿ ಬೆಟ್ಟ ಏರಲು ಹೊರಟಾಗ ಆಯತಪ್ಪಿ ಕೆಳಗೆ ಬೆಟ್ಟದ ತಪ್ಪಲಲ್ಲಿ ಹರಿಯುತ್ತಿದ್ದ ನದಿಗೆ ಬಿದ್ದಿದೆ. ಘಟನೆ ವಿಡಿಯೋ ವೈರಲ್ ಆಗುತ್ತಲೇ ಸ್ಥಳೀಯ ಪೊಲೀಸ್ ಠಾಣೆ ಯಲ್ಲಿ ಎಫ್ಐಆರ್ ದಾಖಲಾಗಿದ್ದು, ಕರ ಡಿಯ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ತಪ್ಪಿ ತಸ್ಥರ ಪತ್ತೆಗೂ ಬಲೆ ಬೀಸಲಾಗಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.