ದೇಶದೆಲ್ಲೆಡೆ ಆತಂಕ ಮೂಡಿಸಿದ ಹಕ್ಕಿ ಜ್ವರ


Team Udayavani, Jan 7, 2021, 6:08 AM IST

ದೇಶದೆಲ್ಲೆಡೆ ಆತಂಕ ಮೂಡಿಸಿದ ಹಕ್ಕಿ ಜ್ವರ

ಸಾಂದರ್ಭಿಕ ಚಿತ್ರ

ಕೋವಿಡ್‌ ಸಾಕ್ರಾಮಿಕದ ಮಧ್ಯೆ ಈಗ ಹಕ್ಕಿ ಜ್ವರದ ಹೊಡೆತವು ಕಳವಳ ಉಂಟು ಮಾಡುತ್ತಿದೆ. ಹರಿಯಾಣ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್‌ ಮತ್ತು ಕೇರಳದಲ್ಲಿ ಈವರೆಗೆ 4.85 ಲಕ್ಷ ಪಕ್ಷಿಗಳು ಸಾವನ್ನಪ್ಪಿವೆ ಎಂಬ ಮಾಹಿತಿ ಇದೆ. ಈ ಪೈಕಿ ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಕೇರಳದಲ್ಲಿ ಪಕ್ಷಿಗಳ ಸಾವಿಗೆ ಹಕ್ಕಿ ಜ್ವರವೇ ಕಾರಣ ಎಂಬುದು ದೃಢಪಟ್ಟಿದೆ. ಕೇರಳದಲ್ಲಿ 2016 ರಲ್ಲಿಯೂ ಹಕ್ಕಿ ಜ್ವರ ಕಾಣಿಸಿ ಕೊಂಡು ಭಾರೀ ಆತಂಕ ಸೃಷ್ಟಿಸಿತ್ತು.

ಏವಿಯನ್‌ ಇನ್‌ಪ್ಲ್ಯೂಯೆನ್ಸ
ಹಕ್ಕಿ ಜ್ವರಕ್ಕೆ ಕಾರಣ ವಾಗುವ ಏವಿಯನ್‌ ಇನ್‌ಪ್ಲ್ಯೂಯೆನ್ಸ ಅಥವಾ ಏವಿಯನ್‌ ಪ್ಲ್ಯೂ ವೈರಸ್‌ ಹೆಚ್ಚು ಅಪಾಯವನ್ನುಂಟು ಮಾಡುತ್ತದೆ. ಇದು ಸತ್ತ ಅಥವಾ ಜೀವಂತ ಪಕ್ಷಿಗಳಿಂದ ಮನುಷ್ಯರಿಗೆ ಹರಡಬಹುದು. ಸೋಂಕಿತ ಪಕ್ಷಿಯನ್ನು ತಿನ್ನುವುದು ಅಥವಾ ಸೋಂಕಿತ ಪಕ್ಷಿ ಬಳಸಿದ ನೀರನ್ನು ಕುಡಿಯುವುದರಿಂದ ಹರಡುತ್ತದೆ.

ತಡೆಗಟ್ಟುವ ವಿಧಾನಗಳು
ಸೋಂಕಿತ ಪಕ್ಷಿಗಳಿಂದ ದೂರವಿರಿ. ಸತ್ತ ಪಕ್ಷಿಗಳ ಹತ್ತಿರ ಹೋಗಬೇಡಿ. ಮಾಂಸಾಹಾರ ಸೇವನೆಯ ಸಂದರ್ಭ ಆದಷ್ಟು ನೈಮರ್ಲಕ್ಕೆ ಆದ್ಯತೆ ನೀಡಿ. ಪಕ್ಷಿಗಳು ತಿಂದುಳಿದ ಹಣ್ಣುಗಳು, ಉದಾ ಹರಣೆಗೆ ಪೇರಳೆ, ಜಂಬು ನೇರಳೆ, ಚಿಕ್ಕು ಮೊದಲಾದ ಹಣ್ಣುಗಳನ್ನು ಸೇವಿಸದಿರು ವುದು ಒಳಿತು. ಆದಷ್ಟು ತರಕಾರಿಗಳನ್ನು ಬೇಯಿಸಿ ತಿನ್ನುವುದೇ ಸೂಕ್ತ. ಮಾಂಸಗಳನ್ನು 73.9 ಡಿ. ಸೆ.ಗಳಿ ಗಿಂತ ಅಧಿಕ ಉಷ್ಣತೆಯಲ್ಲಿ ಬೇಯಿಸಿದಾಗ ಈ ಮಾಂಸ ಸುರಕ್ಷಿತ ಎಂದು ಪರಿಗಣಿಸಲ್ಪಡುತ್ತದೆ.

ಮಾನವನಿಗೂ ಅಪಾಯಕಾರಿ
ಪಕ್ಷಿ ಜ್ವರದ ವೈರಸ್‌ ಕಣ್ಣು, ಮೂಗು ಮತ್ತು ಬಾಯಿಯ ಮೂಲಕ ಮಾನವರಲ್ಲಿ ಹರಡುತ್ತದೆ. ಈ ವೈರಸ್‌ ತುಂಬಾ ಅಪಾಯಕಾರಿಯಾಗಿದೆ. ಇದು ಮಾನವರಲ್ಲಿ ನ್ಯುಮೋನಿಯಾ ವನ್ನು ಉಂಟುಮಾಡಿದರೆ ಅತೀ ಅಪಾಯಕಾರಿ ಎನ್ನುತ್ತಾರೆ ತಜ್ಞರು.

ಹೊಸ ಕಾಯಿಲೆ ಅಲ್ಲ
ಹಕ್ಕಿ ಜ್ವರ ಹೊಸದಾಗಿ ಹುಟ್ಟಿಕೊಂಡ ಕಾಯಿಲೆಯಲ್ಲ. ನೂರಾರು ವರ್ಷಗಳ ಹಿಂದೆಯೇ ಇಟಲಿಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವುದಕ್ಕೆ ಪುರಾವೆಗಳಿವೆ. 1997ಕ್ಕೂ ಮುನ್ನವೇ ಈ ಕಾಯಿಲೆ ಅಲ್ಲಲ್ಲಿ ಪಿಡುಗಾಗಿ ಹರಡಿದೆ. 2003ರಲ್ಲಿ ದಕ್ಷಿಣ ಪೂರ್ವ ಏಷ್ಯಾದಲ್ಲಿ ಹರಡಿದ್ದ ಮಹಾಪಿಡುಗಿನಲ್ಲಿ ಕಾಯಿಲೆ ನಿಯಂತ್ರಿ ಸಲು ಒಂದೂವರೆ ಕೋಟಿ ಕೋಳಿಗಳನ್ನು ಕೊಲ್ಲಲಾಗಿತ್ತು. 2004ರಲ್ಲೂ ಮತ್ತೂಮ್ಮೆ ಸಣ್ಣ ಪ್ರಮಾಣದಲ್ಲಿ ಈ ಪಿಡುಗು ಕಾಣಿಸಿಕೊಂಡಿತ್ತು.

ಹಕ್ಕಿ ಜ್ವರ ರೋಗ ಲಕ್ಷಣಗಳು
ಹಕ್ಕಿ ಜ್ವರವು ಹಲವು ರೋಗಲಕ್ಷಣಗಳನ್ನು ಹೊಂದಿದೆ. ಅವುಗಳಲ್ಲಿ ಪ್ರಮುಖವಾಗಿ ಕಫ‌, ಅತಿಸಾರ, ಜ್ವರ, ಉಸಿರಾಟದ ತೊಂದರೆಗಳು, ತಲೆನೋವು, ಸ್ನಾಯು ನೋವು, ಗಂಟಲು ನೋವು, ಹೊಟ್ಟೆಯ ಕೆಳಭಾಗ ನೋವು, ಸ್ರವಿಸುವ ಮೂಗು ಮತ್ತು ಚಡಪಡಿಕೆ ಸಂಭವಿಸಬಹುದು. ಇವುಗಳಲ್ಲಿ ಯಾವುದಾದ ರೊಂದು ಲಕ್ಷಣ ಕಾಣಿಸಿ ಕೊಂಡಲ್ಲಿ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಏನೆಲ್ಲ ಅಪಾಯಕಾರಿ
ಸೋಂಕಿತ‌ ಹಕ್ಕಿಯ ಮಲ, ಮೂತ್ರ ಮತ್ತು ಉಸಿರು ರೋಗಾಣುಗಳಿಂದ (ವೈರಸ್‌) ತುಂಬಿರುತ್ತದೆ. ಪಕ್ಷಿ ವಾಸಿಸುವ ಸ್ಥಳ, ಅಲ್ಲಿನ ಗಾಳಿ, ಸಾಕಣೆಗೆ ಬಳಸುವ ಉಪಕರಣ.. ಎಲ್ಲವೂ ವೈರಸ್‌ನಿಂದ ಕೂಡಿರುತ್ತದೆ. ಇವುಗಳ ಸಂಪರ್ಕಕ್ಕೆ ಬರುವ ಎಲ್ಲ ಪಕ್ಷಿಗಳಿಗೂ ಸೋಂಕು ತಗಲುತ್ತದೆ. ಕೋಳಿ ಫಾರಂನಲ್ಲಿ ಒಂದು ಕೋಳಿಗೆ ಸೋಂಕು ತಗಲಿದರೆ ಎಲ್ಲ ಕೋಳಿಗಳಿಗೂ ಪಸರಿಸುತ್ತದೆ.

ಯಾವ ರಾಜ್ಯಗಳಲ್ಲಿ ಹೆಚ್ಚು
ವಲಸೆ ಪಕ್ಷಿಗಳು, ಸಮುದ್ರ ಪಕ್ಷಿ, ಹಕ್ಕಿಯ ಉತ್ಪನ್ನಗಳು ವಿಶ್ವವ್ಯಾಪಿ ಹಕ್ಕಿ ಜ್ವರ ಹರಡಲು ಕಾರಣವಾಗು ತ್ತವೆ. ಸದ್ಯ ದೇಶದಲ್ಲಿ ಕೇರಳ, ಹರಿಯಾಣ, ಹಿಮಾಚಲ ಪ್ರದೇಶ, ಗುಜರಾತ್‌, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಹಕ್ಕಿ ಜ್ವರ ಭಾದಿಸಿರುವುದು ದೃಢಪಟ್ಟಿದೆ.

ಎಚ್ಚರಿಕೆ ಇರಲಿ
ಪಕ್ಷಿಗಳ ಕಾಯಿಲೆ ಮಾನವನಿಗೆ ಅಂಟುವುದೂ ಇದೆ. ಹೀಗಾಗಿ ಕೋಳಿ ಫಾರಂನಲ್ಲಿ ಕೆಲಸ ಮಾಡುವವರು, ಕೋಳಿ ಸಾಕಿರುವ ಮನೆಯವರು ಹಕ್ಕಿ ಜ್ವರಕ್ಕೆ ಒಳಗಾಗುವ ಸಾಧ್ಯತೆ ಇದೆ. ಪಕ್ಷಿಗಳನ್ನು, ಮೊಟ್ಟೆಯನ್ನು ಮಾರಾಟ ಮಾಡುವರಿಗೂ, ಕತ್ತರಿಸುವವರಿಗೂ, ಪಕ್ಷಿಗಳ ಮಾಂಸದ ಅಡುಗೆ ಮಾಡುವ ವರಿಗೂ ಹಕ್ಕಿ ಜ್ವರದ ವೈರಸ್‌ ತಗಲುವ ಸಂಭವ ಇರುತ್ತದೆ.

ಎಚ್ಚರಿಕೆ ಇರಲಿ
ಪಕ್ಷಿಗಳ ಕಾಯಿಲೆ ಮಾನವನಿಗೆ ಅಂಟುವುದೂ ಇದೆ. ಹೀಗಾಗಿ ಕೋಳಿ ಫಾರಂನಲ್ಲಿ ಕೆಲಸ ಮಾಡುವವರು, ಕೋಳಿ ಸಾಕಿರುವ ಮನೆಯವರು ಹಕ್ಕಿ ಜ್ವರಕ್ಕೆ ಒಳಗಾಗುವ ಸಾಧ್ಯತೆ ಇದೆ. ಪಕ್ಷಿಗಳನ್ನು, ಮೊಟ್ಟೆಯನ್ನು ಮಾರಾಟ ಮಾಡುವರಿಗೂ, ಕತ್ತರಿಸುವವರಿಗೂ, ಪಕ್ಷಿಗಳ ಮಾಂಸದ ಅಡುಗೆ ಮಾಡುವ ವರಿಗೂ ಹಕ್ಕಿ ಜ್ವರದ ವೈರಸ್‌ ತಗಲುವ ಸಂಭವ ಇರುತ್ತದೆ.

ಮೊದಲ ಪ್ರಯೋಗ!
ದೇಶದಲ್ಲಿ ಮೊದಲ ಬಾರಿಗೆ ಐವರು ವಿಜ್ಞಾನಿಗಳ ತಂಡವು ಭೋಪಾಲ್‌ನ ಆನಂದ್‌ನಗರದ ಹೈ ಸೆಕ್ಯುರಿಟಿ ಅನಿಮಲ್‌ ಡಿಸೀಸ್‌ ಲ್ಯಾಬೊರೇಟರಿಯಲ್ಲಿ ಪಕ್ಷಿಗಳ ಮಾದರಿಗಳನ್ನು ಪರೀಕ್ಷಿ ಸುವಲ್ಲಿ ನಿರತರಾಗಿದ್ದಾರೆ.ಕೋವಿಡ್‌ ಮಾದರಿಗಳನ್ನು ಸಹ ಇಲ್ಲಿ ಪರಿಶೀಲಿಸಲಾಗುತ್ತಿದೆ.ಮಾನವರು ಮತ್ತು ಪಕ್ಷಿಗಳ ಮಾದರಿ ಗಳನ್ನು ಏಕಕಾಲದಲ್ಲಿ ಪರೀಕ್ಷಿಸುತ್ತಿರುವುದು ಇದೇ ಮೊದಲು.

ಟಾಪ್ ನ್ಯೂಸ್

Nayanthara: ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್‌ ಸ್ಟಾರ್?

Nayanthara: ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್‌ ಸ್ಟಾರ್?

Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು

Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು

Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…

Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…

Tata-Airbus: ಗುಜರಾತ್ ಗೆ ಆಗಮಿಸಿದ ಸ್ಪೇನ್ ಪ್ರಧಾನಿ: ಟಾಟಾ-ಏರ್‌ಬಸ್ ಸ್ಥಾವರ ಉದ್ಘಾಟನೆ

Tata-Airbus: ಗುಜರಾತ್ ಗೆ ಆಗಮಿಸಿದ ಸ್ಪೇನ್ ಪ್ರಧಾನಿ: ಟಾಟಾ-ಏರ್‌ಬಸ್ ಸ್ಥಾವರ ಉದ್ಘಾಟನೆ

Actor Darshan: ನಟ ದರ್ಶನ್‌ ಜಾಮೀನು ಅರ್ಜಿ ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ 

Actor Darshan: ನಟ ದರ್ಶನ್‌ ಜಾಮೀನು ಅರ್ಜಿ ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ 

Ajekar-mahajar

Ajekar Case Follow Up: ನಿಧಾನಗತಿಯ ಸಾವಿಗೆ ಎರಡು ವಿಷದ ಬಾಟಲಿ ಖರೀದಿಸಿದ್ದ ದಿಲೀಪ್‌

ಡಾಲರ್‌ಗೆ ಪರ್ಯಾಯ ಹೆಜ್ಜೆ! ಭಾರತಕ್ಕೆ ಉಂಟಾಗುವ ಲಾಭ-ನಷ್ಟಗಳೇನು?

ಡಾಲರ್‌ಗೆ ಪರ್ಯಾಯ ಹೆಜ್ಜೆ! ಭಾರತಕ್ಕೆ ಉಂಟಾಗುವ ಲಾಭ-ನಷ್ಟಗಳೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು

Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು

Tata-Airbus: ಗುಜರಾತ್ ಗೆ ಆಗಮಿಸಿದ ಸ್ಪೇನ್ ಪ್ರಧಾನಿ: ಟಾಟಾ-ಏರ್‌ಬಸ್ ಸ್ಥಾವರ ಉದ್ಘಾಟನೆ

Tata-Airbus: ಗುಜರಾತ್ ಗೆ ಆಗಮಿಸಿದ ಸ್ಪೇನ್ ಪ್ರಧಾನಿ: ಟಾಟಾ-ಏರ್‌ಬಸ್ ಸ್ಥಾವರ ಉದ್ಘಾಟನೆ

1-D-C

German company; ಖಾಸಗಿತನ ರಕ್ಷಣೆಗಾಗಿ ಡಿಜಿಟಲ್‌ ಕಾಂಡೋಮ್‌

1-wqewqe

Dravidian model ಹೆಸರಲ್ಲಿ ಲೂಟಿ; ಮೊದಲ ಬೃಹತ್ ರ್‍ಯಾಲಿಯಲ್ಲಿ ಅಬ್ಬರಿಸಿದ ವಿಜಯ್

1-reeaa

Maharashtra election: ವರ್ಲಿ ಕ್ಷೇತ್ರದಲ್ಲಿ ಆದಿತ್ಯ vs ಮಿಲಿಂದ್‌

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Goodudeepa Competition: ಪರ್ಯಾಯ ಶ್ರೀಕೃಷ್ಣ ಮಠ… ಗೂಡುದೀಪ ಸ್ಪರ್ಧೆ ಉದ್ಘಾಟನೆ

Goodudeepa Competition: ಪರ್ಯಾಯ ಶ್ರೀಕೃಷ್ಣ ಮಠ… ಗೂಡುದೀಪ ಸ್ಪರ್ಧೆ ಉದ್ಘಾಟನೆ

ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘ: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ

ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘ: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ

Nayanthara: ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್‌ ಸ್ಟಾರ್?

Nayanthara: ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್‌ ಸ್ಟಾರ್?

Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು

Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು

Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…

Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.