ಜಮ್ಮು : ಮತ ಹಾಕುವ ಮುನ್ನ ಮತಗಟ್ಟೆಯಲ್ಲೇ ಮೃತಪಟ್ಟ ಬಿಜೆಪಿ ಅಭ್ಯರ್ಥಿ
Team Udayavani, Oct 10, 2018, 11:42 AM IST
ಬನಿಹಾಲ್/ಜಮ್ಮು : ಎರಡನೇ ಹಂತದ ಮುನಿಸಿಪಲ್ ಚುನಾವಣೆಗಳು ಜಮ್ಮು ಕಾಶ್ಮೀರ ದಲ್ಲಿ ಇಂದು ಜಾರಿಯಲ್ಲಿರುವ ನಡುವೆಯೆ ರಾಮಬನ ಜಿಲ್ಲೆಯ ಬಿಜೆಪಿ ಅಭ್ಯರ್ಥಿ, 62ರ ಹರೆಯದ ಆಜಾದ್ ಸಿಂಗ್ ರಾಜು ಎಂಬವರು ಮತದಾನಕ್ಕೆ ಹೋಗುತ್ತಿದ್ದಂತೆಯೇ ಹೃದಯಾಘಾತಕ್ಕೆ ಗುರಿಯಾಗಿ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.
ನೀರಾವರಿ ಮತ್ತು ನೆರೆ ನಿಯಂತ್ರಣ ಇಲಾಖೆಯ ಮಾಜಿ ನೌಕರ ರಾಜು ಅವರು ಮತದಾನ ಮಾಡುವ ಮುನ್ನವೇ ಮತಗಟ್ಟೆಯಲ್ಲಿ ಹೃದಯಾಘಾತಕ್ಕೆ ಗುರಿಯಾದರು. ಒಡನೆಯೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಒಯ್ಯಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ರಾಜು ಅವರು ರಾಮಬನ ಜಿಲ್ಲೆಯ ಏಳು ಮುನಿಸಿಪಾಲಿಟಿಗಳ ಚುನಾವಣೆಗಾಗಿ ಕಣದಲ್ಲಿದ್ದ 24 ಅಭ್ಯರ್ಥಿಗಳ ಪೈಕಿ ಒಬ್ಬರಾಗಿದ್ದಾರೆ.
ಜಮ್ಮು ಕಾಶ್ಮೀರಲ್ಲಿ ಇಂದು ಬುಧವಾರ 263 ಮುನಿಸಿಪಲ್ ವಾರ್ಡುಗಳಿಗೆ ಎರಡನೇ ಹಂತದ ಮತದಾನ ನಡೆಯುತ್ತಿದೆ. ಈ ಪೈಕಿ ಜಮ್ಮು ಪ್ರಾಂತ್ಯದ ಕಿಷ್ತ್ವಾರ್, ದೋಡಾ, ರಾಮಬನ, ರಿಯಾಸಿ, ಉಧಾಂಪುರ ಮತ್ತು ಕಠುವಾ ಸೇರಿದಂತೆ ಒಟ್ಟು ಆರು ಜಿಲ್ಲೆಯಗಳ 214 ಮುನಿಸಿಪಲ್ ವಾರ್ಡುಗಳೂ ಸೇರಿವೆ.
ಮತದಾನ ಇಂದು ಬೆಳಗ್ಗೆ 6 ಗಂಟೆಗೆ ಆರಂಭವಾಗಿದ್ದು ಸಂಜೆ 4 ಗಂಟೆಗೆ ಮುಗಿಯಲಿದೆ.
ಮೊದಲ ಎರಡು ತಾಸುಗಳಲ್ಲಿ ಇಂದು ಕಠುವಾ ಜಿಲ್ಲೆಯಲ್ಲಿ ಅತ್ಯಧಿಕ ಶೇ.17.2ರ ಮತದಾನವಾಗಿದ್ದು 54,622 ಮತದಾರರ ಮತ ಚಲಾಯಿಸಿದ್ದಾರೆ.
ಉಳಿದಂತೆ ರಿಯಾಸಿ ಶೇ.16.6, ಕಿಷ್ತ್ವಾರ್ ಶೇ.15.3, ದೋಡಾ ಶೇ.12.6, ರಾಮಬನ ಶೇ.12.4, ಉಧಾಂಪುರ ಜಿಲ್ಲೆಯಲ್ಲಿ ಶೇ.10.3 ಮತದಾನ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.