ಅಮ್ಮ ಈ ದುಃಖಗಳೆಲ್ಲ ಯಾಕೆ ಮುಗಿಯುತ್ತಿಲ್ಲ?
ಬಿಜೆಪಿಯಿಂದ ರಾಹುಲ್ ಗಾಂಧಿ ಅಣಕದ ವಿಡಿಯೊ ಬಿಡುಗಡೆ, ವೈರಲ್
Team Udayavani, Oct 17, 2022, 7:20 AM IST
ನವದೆಹಲಿ: ದೇಶಾದ್ಯಂತ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಬಳ್ಳಾರಿಯಲ್ಲಿ ಶನಿವಾರವಷ್ಟೇ 1000 ಕಿ.ಮೀ. ಯಾತ್ರೆ ಪೂರೈಸಿದ ಹಿನ್ನೆಲೆಯಲ್ಲಿ ದೊಡ್ಡ ರ್ಯಾಲಿಯೇ ನಡೆದಿದೆ.
ಇಂತಹ ಹೊತ್ತಿನಲ್ಲೇ ಬಿಜೆಪಿ ಒಂದು ಅಣಕು ಕಾರ್ಟೂನ್ ವಿಡಿಯೊ ಬಿಡುಗಡೆ ಮಾಡಿದೆ. ಅದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯನ್ನು “ಅಮ್ಮ ಈ ದುಃಖಗಳೆಲ್ಲ ಯಾಕೆ ಮುಗಿಯುತ್ತಿಲ್ಲ’ ಎಂದು ಕೇಳುತ್ತಾರೆ!
मम्मी ये दुःख खतम काहे नहीं होता है?
खतम…टाटा…गुडबाय! pic.twitter.com/J4tFqQgPOQ
— BJP (@BJP4India) October 16, 2022
ನಂತರ ಖತಮ್, ಟಾಟಾ, ಗುಡ್ ಬೈ ಎಂದು ಹೇಳುತ್ತಾರೆ. ಈ ವಿಡಿಯೊದ ಮೂಲಕ ದೇಶದ ಎಲ್ಲ ರಾಜ್ಯಗಳಲ್ಲಿ ನಾಯಕರು ಕಾಂಗ್ರೆಸ್ ತೊರೆಯುತ್ತಿರುವುದನ್ನು ತೋರಿಸಲಾಗಿದೆ. ಮೊದಲು ಗೋವಾ, ನಂತರ ಮಧ್ಯಪ್ರದೇಶ, ಜಮ್ಮುಕಾಶ್ಮೀರ, ಪ್ರಸ್ತುತ ರಾಜಸ್ಥಾನದ ಬಿಕ್ಕಟ್ಟುಗಳನ್ನು ತೋರಿಸಲಾಗಿದೆ. ಭಾರತ್ ಜೋಡೋ ಅಗತ್ಯವಿಲ್ಲ, ರಾಹುಲ್ ಮೊದಲು ಕಾಂಗ್ರೆಸ್ ಜೋಡೋ ಮಾಡಲಿ ಎಂದು ಅಣಕವಾಡಲಾಗಿದೆ.
ಇದಕ್ಕೆ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾತೆ ತಿರುಗೇಟು ನೀಡಿದ್ದಾರೆ. “ಭಾರತ್ ಜೋಡೋ ಯಾತ್ರೆಯಿಂದ ಇಡೀ ಬಿಜೆಪಿ ನಾಕಾಣೆ (25 ಪೈಸೆ) ಟ್ರೋಲ್ ಪಕ್ಷವಾಗಿ ಬದಲಾಗಿದೆ. ಆದರೆ ಈ ಭೀತಿ ಒಳ್ಳೆಯದು. ಬಿಜೆಪಿ ನಿರುದ್ಯೋಗ, ಹಣದುಬ್ಬರ ನಿಯಂತ್ರಿಸುವುದಕ್ಕೆ ಸಂಪೂರ್ಣ ಶ್ರಮ ಹಾಕಿದ್ದರೆ ಒಳ್ಳೆಯದಿತ್ತು’ ಎಂದಿದ್ದಾರೆ.
भारत जोड़ो यात्रा के डर से पूरी भाजपा चवन्नी छाप ट्रोल बन गई है।
पर यह डर अच्छा है!
काश, इतनी मेहनत बेरोज़गारी और महंगाई का समाधान ढूँढने में लगायी होती।@BJP4India #BharatJodoYatra https://t.co/bWyx8wPhrX pic.twitter.com/Y2rDi8YWjN
— Supriya Shrinate (@SupriyaShrinate) October 16, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.