ಸಾಮ್ನಾ ನಿಷೇಧದ ಬಿಜೆಪಿ ಯತ್ನ ತುರ್ತು ಪರಿಸ್ಥಿತಿಗೆ ಸಮ: ಉದ್ಧವ್
Team Udayavani, Feb 16, 2017, 12:31 PM IST
ಪುಣೆ : ಸ್ಥಳೀಯಾಡಳಿತೆ ಚುನಾವಣೆಯ ಪ್ರಯುಕ್ತ ಇದೇ ಫೆ.16, 20 ಮತ್ತು 21ರಂದು ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಯ ಪ್ರಕಟನೆಯನ್ನು ನಿಷೇಧಿಸಬೇಕು ಎಂದು ರಾಜ್ಯ ಬಿಜೆಪಿಯ ಪದಾಧಿಕಾರಿ ಓರ್ವರು ರಾಜ್ಯದ ಚುನಾವಣಾ ಆಯೋಗವನ್ನು ಆಗ್ರಹಿಸಿರುವ ಹಿನ್ನೆಲೆಯಲ್ಲಿ, ಶಿವಸೇನೆಯ ರಾಷ್ಟ್ರಾಧ್ಯಕ್ಷರಾಗಿರುವ ಉದ್ಧವ್ ಠಾಕ್ರೆ ಅವರು ಈ ಯತ್ನವನ್ನು ತುರ್ತು ಪರಿಸ್ಥಿತಿಗೆ ಹೋಲಿಸಿದ್ದಾರೆ.
ಮತದಾನಕ್ಕೆ ಎರಡು ದಿನ ಮುನ್ನ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪ್ರಚಾರಾಭಿಯಾನದ ವಿವರಗಳನ್ನು ಪ್ರಕಟಿಸುವುದಕ್ಕೆ ನಿಷೇಧ ಇರುವುದರಿಂದ, ಈ ರೀತಿಯ ಪ್ರಕಟನೆಯನ್ನು ಕೈಗೊಳ್ಳುತ್ತಿರುವ ಸಾಮ್ನಾ ಮೇಲೆ ಫೆ.16, 20 ಹಾಗೂ 21ರಂದು ಪ್ರಕಟನೆ ನಿಷೇಧ ಹೇರಬೇಕು ಎಂದು ರಾಜ್ಯ ಬಿಜೆಪಿ ವಕ್ತಾರೆ ಶ್ವೇತಾ ಶಾಲಿನಿ ಅವರು ರಾಜ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದರು.
ಮಹಾರಾಷ್ಟ್ರದ 10 ಮುನಿಸಿಪಲ್ ಕಾರ್ಪೊರೇಶನ್ ಮತ್ತು 25 ಜಿಲ್ಲಾ ಪರಿಷತ್ಗಳಿಗೆ ಇದೇ ಫೆ.16 ಮತ್ತು 21ರಂದು ಎರಡು ಹಂತಗಳ ಚುನಾವಣೆ ನಡೆಯಲಿದೆ.
“ಸಾಮ್ನಾವನ್ನು ಮುಚ್ಚುವುದು ಎಂದಿಗೂ ಸಾಧ್ಯವಿಲ್ಲ’ ಎಂದು ಪುಣೆಯಲ್ಲಿ ನಿನ್ನೆ ಬುಧವಾರ ಸಂಜೆ ನಡೆದಿದ್ದ ಚುನಾವಣಾ ರಾಲಿಯಲ್ಲಿ ಗುಡುಗಿದ ಉದ್ಧವ್ ಠಾಕ್ರೆ, “ಇಂತಹ ಪರಿಸ್ಥಿತಿಯನ್ನು ದೇಶ ಈ ಹಿಂದೆ ಕಂಡಿದ್ದ ತುರ್ತು ಪರಿಸ್ಥಿತಿಗೆ ಹೋಲಿಸಬಹುದಾಗಿದೆ’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Recommendation: ನ್ಯಾ. ಸಂಜೀವ್ ಖನ್ನಾ ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ
NDA CMs Meet: ರಾಷ್ಟ್ರದ ಅಭಿವೃದ್ಧಿಗೆ ಎನ್ಡಿಎ ಬದ್ಧ: ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.