![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 19, 2019, 12:30 AM IST
ಹೊಸದಿಲ್ಲಿ: ಆಕೆ ಕೆಲವೇ ನಿಮಿಷಗಳಲ್ಲಿ ಹಸೆಮಣೆ ಏರಬೇಕಿತ್ತು. ವೇದಿಕೆಯ ಮೇಲೆ ಮಾಂಗಲ್ಯಧಾರಣೆಗೆ ವರ ಸಜ್ಜಾಗಿದ್ದ. ಆದರೆ, ವೇದಿಕೆ ಕಡೆಗೆ ಕರೆತರಲಾಗುತ್ತಿದ್ದ ವಧುವಿಗೆ ಅಜ್ಞಾತ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಓಡಿಹೋದ! ನೆರೆದಿದ್ದವರೆಲ್ಲರೂ ಶಾಕ್ ಆದರು. ಆದರೆ, ಅದೃಷ್ಟವಶಾತ್ ಗುಂಡು ಆಕೆಯ ಕಾಲಿಗೆ ತಗುಲಿತ್ತು. ಆದರೆ, ಪೂಜಾ ಹೆಸರಿನ ಆ ವನಿತೆ ಅಧೀರಳಾಗಲಿಲ್ಲ. ಆಸ್ಪತ್ರೆಗೆ ಹೋಗಿ ಗುಂಡು ತೆಗೆಸಿಕೊಂಡು ಪುನಃ ಕಲ್ಯಾಣ ಮಂಟಪಕ್ಕೆ ಹಾಜರಾಗಿ ಮಾಂಗಲ್ಯ ಬಂಧನಕ್ಕೊಳಗಾದಳು. ಇದು ದೆಹಲಿಯ ಶಾಕಾರ್ಪುರದಲ್ಲಿ ನಡೆದ ಸತ್ಯ ಘಟನೆ. ಗುಂಡು ತಾಗಿದ ಕೂಡಲೇ ವಧುವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಅಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಗುಂಡು ಹೊರತೆಗೆಯಲಾಯಿತು. ವೈದ್ಯರು ವಿಶ್ರಾಂತಿಗೆ ಸಲಹೆ ಮಾಡಿದರೂ, ವಿನಂತಿಸಿಕೊಂಡು ಮದುವೆ ಮಂಟಪಕ್ಕೆ ಬಂದ ಯುವತಿ ಮದುವೆ ಶಾಸ್ತ್ರ ಮುಗಿಸಿದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.