Burhanpur; ಕರ್ನಾಟಕಕ್ಕೆ ಬರುತ್ತಿದ್ದ ಯೋಧರ ರೈಲು ಸ್ಫೋಟಿಸಲು ಸಂಚು?
Team Udayavani, Sep 23, 2024, 6:40 AM IST
ನವದೆಹಲಿ: ಜಮ್ಮು ಕಾಶ್ಮೀರದಿಂದ- ಕರ್ನಾಟಕಕ್ಕೆ ಸೇನಾ ಸಿಬ್ಬಂದಿಯನ್ನು ಹೊತ್ತು ಸಾಗುತ್ತಿದ್ದ ರೈಲೊಂದನ್ನು ಸ್ಫೋಟಿಸಲು ದುಷ್ಕರ್ಮಿಗಳು ಯತ್ನಿಸಿದ್ದು, ರೈಲ್ವೆ ಹಳಿಯ ಮೇಲೆ ಕನಿಷ್ಠ 10 ಸ್ಫೋಟಕಗಳನ್ನು ಇರಿಸಿದ್ದ ವಿಚಾರ ಬಹಿರಂಗಗೊಂಡಿದೆ. ಐಸಿಸ್ ಉಗ್ರ ಫರ್ಹಾ ತುಲ್ಲಾ ಘೋರಿ, ಭಯೋತ್ಪಾದಕರಿಗೆ ಕರೆ ನೀಡಿದ್ದ ಬೆನ್ನಲ್ಲೇ ಇಂಥ ಘಟನೆಗಳ ವರದಿ ಆತಂಕ ಹೆಚ್ಚಿಸಿದೆ.
ಮಧ್ಯಪ್ರದೇಶದ ಬುರ್ಹಾನ್ಪು ರದ ರೈಲ್ವೆ ನಿಲ್ದಾಣದ ಬಳಿ ಬುಧ ವಾರ ರೈಲು ಆಗಮಿಸುವ ವೇಳೆ ಹಳಿ ಮೇಲೆ ಸ್ಫೋಟಕಗಳನ್ನು ಇಡಲಾಗಿದೆ. ರೈಲು ಚಲಿಸಿದ ಬಳಿಕ ಸಣ್ಣ ಸ್ಫೋಟವೂ ಆಗಿದೆ. ತಕ್ಷಣವೇ ಚಾಲಕ ಬ್ರೇಕ್ ಹಾಕಿದ್ದಾರೆ. ತನ್ಮೂಲಕ ಕಳೆದ 4ತಿಂಗಳಲ್ಲಿ ದೇಶದಲ್ಲಿ ಒಟ್ಟು 18 ರೈಲು ಹಳಿತಪ್ಪಿ ಸುವ ಪ್ರಯತ್ನ ನಡೆದಂತಾಗಿದೆ.
ರೈಲು ಹಳಿ ಮೇಲೆ ಸಿಲಿಂಡರ್ ಪತ್ತೆ
ಉತ್ತರ ಪ್ರದೇಶದ ಕಾನ್ಪುರದ ಬಳಿ ಕಾಲಿಂದಿ ಎಕ್ಸ್ಪ್ರೆಸ್ ಅನ್ನು ಸ್ಫೋಟಿ ಸಲು ಹಳಿ ಮೇಲೆ ಸಿಲಿಂಡರ್ ಇಡ ಲಾಗಿತ್ತು. ಆ ಬೆನ್ನಲ್ಲೇ ಇದೀಗ ಕಾನ್ಪುರದ ಪೆಂಪುರ್ ರೈಲ್ವೆ ಹಳಿ ಮೇಲೆ ಮತ್ತೂಂದು ಖಾಲಿ ಸಿಲಿಂ ಡರ್ ಇಟ್ಟು ಸರಕು ಸಾಗಣೆ ರೈಲು ಹಳಿ ತಪ್ಪಿಸಲು ಯತ್ನಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.