![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 9, 2019, 4:40 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಪಟ್ನಾ: ಬಿಹಾರದಲ್ಲಿರುವ ಬಕ್ಸರ್ ಜೈಲು ನೇಣು ಕುಣಿಕೆ ತಯಾರಿಕೆಗೆ ದೇಶದಲ್ಲೇ ಹೆಸರುವಾಸಿಯಾಗಿದೆ. ಇದೀಗ ಬಕ್ಸರ್ ಜೈಲು ಮತ್ತೆ ಸುದ್ದಿಯಲ್ಲಿದೆ. ಇದಕ್ಕೆ ಕಾರಣ ಹತ್ತು ನೇಣು ಕುಣಿಕೆಗಳನ್ನು ತಯಾರಿಸುವಂತೆ ಈ ಜೈಲಿಗೆ ಆದೇಶ ಬಂದಿದೆ.
ಹಾಗಾದರೆ ಈ ಹತ್ತು ನೇಣು ಕುಣಿಕೆಗಳು ಯಾವ ಪಾತಕಿಗಳನ್ನು ನೇಣಿಗೇರಿಸಲು ಎಂಬ ಕುತೂಹಲ ಮೂಡುವುದು ಸಹಜವೇ. ನಂಬಲರ್ಹ ಮಾಹಿತಿಗಳ ಪ್ರಕಾರ ದೆಹಲಿಯ ತಿಹಾರ್ ಜೈಲಿನಲ್ಲಿರುವ ನಿರ್ಭಯಾ ಅತ್ಯಾಚಾರಿಗಳನ್ನು ನೇಣಿಗೇರಿಸಲು ಈ ನೇಣು ಕುಣಿಕೆಗಳನ್ನು ತಯಾರಿಸಲು ಹೇಳಲಾಗಿದೆ ಎನ್ನಲಾಗುತ್ತಿದೆ.
ಡಿಸೆಂಬರ್ 14ರೊಳಗೆ ಹತ್ತು ನೇಣು ಕುಣಿಕೆಗಳನ್ನು ತಯಾರಿಸಿಕೊಡುವಂತೆ ಕೇಳಿಕೊಳ್ಳಲಾಗಿದೆ. ಇದನ್ನು ನೋಡಿದರೆ, 2012ರ ನಿರ್ಭಯಾ ಅತ್ಯಾಚಾರದ ಅಪರಾಧಿಗಳಿಗೆ ಶೀಘ್ರದಲ್ಲೇ ಮರಣದಂಡನೆ ಶಿಕ್ಷೆಯಾಗುವ ಸಾಧ್ಯತೆ ದಟ್ಟವಾಗಿದೆ. ನೇಣು ಕುಣಿಕೆ ತಯಾರಿಸುವ ವಿಧಾನವನ್ನು ತಿಳಿದಿರುವ ರಾಜ್ಯದ ಏಕೈಕ ಜೈಲು ಇದಾಗಿದೆ.
‘ಡಿಸೆಂಬರ್ 14ರ ಒಳಗಾಗಿ 10 ನೇಣು ಕುಣಿಕೆಗಳನ್ನು ತಯಾರಿಸಿಕೊಡುವಂತೆ ನಮಗೆ ಬಂಧೀಖಾನೆ ನಿರ್ದೇಶಕರಿಂದ ನಮಗೆ ಸೂಚನೆ ಬಂದಿದೆ. ಆದರೆ ಇದು ಎಲ್ಲಿಗೆಂದು ನಮಗೆ ತಿಳಿದಿಲ್ಲ’ ಎಂದು ಬಕ್ಸರ್ ಜೈಲು ಅಧೀಕ್ಷಕರಾಗಿರುವ ವಿಜಯ್ ಕುಮಾರ್ ಅರೋರಾ ಅವರು ಪಿಟಿಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.