![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Aug 4, 2019, 6:27 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ದೇಶಾದ್ಯಂತ ಕಾರು ಮಾರುಕಟ್ಟೆ ತೀವ್ರವಾಗಿ ಕುಸಿತ ಕಂಡಿರುವಂತೆಯೇ, ಆಟೋಮೊಬೈಲ್ ಮಾರಾಟಗಾರರ (ಡೀಲರ್ ಶಿಪ್) ವಲಯದಲ್ಲಿ ಸುಮಾರು 2.5 ಲಕ್ಷ ಕೆಲಸಗಾರರ ಉದ್ಯೋಗಕ್ಕೂ ಕತ್ತರಿ ಬಿದ್ದಿದೆ.
ಕಳೆದ ಮೂರು ತಿಂಗಳಿಂದ ಕಾರು ಮಾರಾಟಗಾರರು ಉತ್ತಮ ಮಾರಾಟಕ್ಕೆ ಹೆಣಗಾಡುತ್ತಿದ್ದರೂ ಹೊಸ ಕಾರುಗಳನ್ನು ಕೊಳ್ಳಲು ಗ್ರಾಹಕರೇ ಮುಂದೆ ಬರುತ್ತಿಲ್ಲ. ಇದೆಲ್ಲದರ ನೇರ ಪರಿಣಾಮ ಈ ಕ್ಷೇತ್ರದಲ್ಲಿ ದುಡಿಯುವ ಉದ್ಯೋಗಿಗಳ ಮೇಲಾಗುತ್ತಿದೆ. ಮಾರಾಟ ಕುಂಠಿತಗೊಂಡಿರುವುದರಿಂದ ಆಗುತ್ತಿರುವ ನಷ್ಟವನ್ನು ತಪ್ಪಿಸಲು ಡೀಲರ್ ಗಳು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮುಂದಾಗಿದ್ದಾರೆ. ಆಟೋಮೊಬೈಲ್ ಡೀಲರ್ ಗಳ ಒಕ್ಕೂಟ (ಎಫ್.ಎ.ಡಿ.ಎ.) ಈ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ.
ಸದ್ಯದ ಪರಿಸ್ಥಿತಿಯಲ್ಲಿ ಕಾರುಗಳ ಮಾರಾಟ ಚೇತರಿಸಿಕೊಳ್ಳುವ ನಿರೀಕ್ಷೆ ಇಲ್ಲ. ಇದರೊಂದಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉದ್ಯೋಗ ಕಡಿತ ಭೀತಿ ಎದುರಾಗಬಹುದು ಎಂಬ ಮುನ್ಸೂಚನೆಯನ್ನೂ ಸಹ ಎಫ್.ಎ.ಡಿ.ಎ. ಹೇಳಿದೆ. ಕೇಂದ್ರ ಸರಕಾರ ಜಿ.ಎಸ್.ಟಿ.ಯಲ್ಲಿ ಕಡಿತ ಮಾಡಿದರೆ ಕಾರುಗಳ ಮಾರಾಟ ಪ್ರಮಾಣ ತುಸು ಸುಧಾರಿಸಬಹುದು ಎನ್ನುವ ಆಶಾವಾದವನ್ನೂ ಒಕ್ಕೂಟ ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದೆ.
ದೇಶಾದ್ಯಂತ ಸುಮಾರು 26 ಸಾವಿರ ಶೋರೂಂಗಳಿದ್ದು, 15 ಸಾವಿರ ಡೀಲರ್ ಗಳಿದ್ದಾರೆ. ಈಕ್ಷೇತ್ರದಲ್ಲಿ ಕಳೆದ ಮೂರು ತಿಂಗಳಲ್ಲಿ 2.5 ಲಕ್ಷ ಉದ್ಯೋಗ ಕಡಿತವಾಗಿದೆ.ಹೀಗೆ ಉದ್ಯೋಗ ಕಳೆದುಕೊಂಡವರು ಸುಮಾರು 286 ಶೋರೂಂಗಳಲ್ಲಿ ಕೆಲಸ ಮಾಡಿಕೊಂಡಿದ್ದರು. 271 ನಗರಗಳ ವಿವಿಧ ಕಾರು ಶೋರೂಂಗಳಲ್ಲಿ ಉದ್ಯೋಗ ಕಡಿತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.