![supreem](https://www.udayavani.com/wp-content/uploads/2024/07/supreem-2-415x259.jpg)
ಕೇಸು ಹಂಚಿಕೆ ಅಧಿಕಾರ ಸಿಜೆಐಗಿದೆ
Team Udayavani, Apr 12, 2018, 6:00 AM IST
![34.jpg](https://www.udayavani.com/wp-content/uploads/2018/04/12/34.jpg)
ಹೊಸದಿಲ್ಲಿ: ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯ ಮೂರ್ತಿಗಳು ಸಮಾನರಲ್ಲಿ ಮೊದಲಿಗರು (ಫಸ್ಟ್ ಅಮಂಗ್ ಈಕ್ವಲ್ಸ್). ಯಾವ ಕೇಸುಗಳನ್ನು ಯಾವ ನ್ಯಾಯಪೀಠಗಳಿಗೆ ಹಂಚಬೇಕು ಎಂದು ನಿರ್ಧರಿಸುವ ಸಂವಿಧಾನಬದ್ಧ ಅಧಿಕಾರ ಅವರಿಗಿದೆ ಎಂದು ಬುಧವಾರ ಸುಪ್ರೀಂಕೋರ್ಟ್ ಹೇಳಿದೆ. ಸ್ವತಃ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ಪೀಠವೇ ಈ ತೀರ್ಪು ನೀಡಿದೆ.
ಪೀಠದಲ್ಲಿ ಸಿಜೆಐ ಹೊರತಾಗಿ ನ್ಯಾಯಮೂರ್ತಿಗಳಾಗಿರುವ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರ ಚೂಡ್ ಇದ್ದರು. “ಸಂವಿಧಾನದ ವ್ಯಾಪ್ತಿಯಲ್ಲಿ ಸುಪ್ರೀಂ ಕೋರ್ಟ್ ಕಾರ್ಯವೆಸಗುತ್ತಿದೆ. ಅದಕ್ಕೆ ಮುಖ್ಯ ನ್ಯಾಯಮೂರ್ತಿಗಳು ಮುಖ್ಯಸ್ಥರಾಗಿರುವುದರಿಂದ ಅವರು ನಿರ್ವಹಿಸುವ ಹೊಣೆಗಾರಿಕೆಯ ಮೇಲೆ ಸಂಶಯ ವ್ಯಕ್ತಪಡಿಸಲಾಗದು’ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.
ಜ.12ರಂದು ಸುಪ್ರೀಂನ ಹಿರಿಯ ನ್ಯಾಯಮೂರ್ತಿಗಳಾದ ಜೆ.ಚಲಮೇಶ್ವರ್, ರಂಜನ್ ಗೊಗೊಯ್, ಮದನ್ ಬಿ.ಲೋಕುರ್ ಮತ್ತು ಕುರಿಯನ್ ಜೋಸೆಫ್ ಬಹಿರಂಗವಾಗಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಸುದ್ದಿಗೋಷ್ಠಿ ನಡೆಸಿದ ಬಳಿಕ ಸುಪ್ರೀಂಕೋರ್ಟ್ ನಲ್ಲಿ ನ್ಯಾಯಪೀಠ ರಚನೆ ಮತ್ತು ನ್ಯಾಯಮೂರ್ತಿಗಳಿಗೆ ಕೇಸುಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆಯಲ್ಲಿ ಪಾರದರ್ಶಕ ವ್ಯವಸ್ಥೆ ತರುವ ಬಗ್ಗೆ ನಿಯಮ ರೂಪಿಸಬೇಕು ಎಂದು ಕೋರಿ ಪಿಐಎಲ್ ಸಲ್ಲಿಸಲಾಗಿತ್ತು. ಅದನ್ನು ವಜಾ ಮಾಡಿ ನ್ಯಾಯಪೀಠ ಇದೀಗ ಈ ತೀರ್ಪು ನೀಡಿದೆ.
ಟಾಪ್ ನ್ಯೂಸ್
![supreem](https://www.udayavani.com/wp-content/uploads/2024/07/supreem-2-415x259.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.