Caste census issue: ಲೋಕಸಭೆಯಲ್ಲಿ ಅನುರಾಗ್-ರಾಹುಲ್ ಜಟಾಪಟಿ
Team Udayavani, Jul 31, 2024, 6:26 AM IST
ಹೊಸದಿಲ್ಲಿ: ಜಾತಿ ಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಭೆಯಲ್ಲಿ ಮಾಜಿ ಸಚಿವ ಅನುರಾಗ್ ಠಾಕೂರ್ ಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿ ನಡುವೆ ವಾಗ್ವಾದ ನಡೆದಿದೆ.
“ತನ್ನ ಜಾತಿಯ ಬಗ್ಗೆಯೇ ಗೊತ್ತಿಲ್ಲದವರು ಜಾತಿ ಗಣತಿ ಬಗ್ಗೆ ಮಾತ ನಾಡುತ್ತಿದ್ದಾರೆ’ ಎಂದು ಠಾಕೂರ್ ಹೇಳಿದ್ದು ವಾಗ್ವಾದಕ್ಕೆ ಕಾರಣವಾಯಿತು. ಗದ್ದಲದ ನಡುವೆಯೇ ಮಾತನಾಡಿದ ರಾಹುಲ್ ಗಾಂಧಿ “ನೀವು ನನ್ನನ್ನು ಏನು ಬೇಕಾ ದರೂ ಹೇಳಿ ಅವಮಾನ ಮಾಡ ಬಹುದು. ಜಾತಿ ಗಣತಿ ನಡೆಸುವ ಬಗ್ಗೆ ಸಂಸತ್ನಲ್ಲಿ ಮಸೂದೆ ಮಂಡಿಸಿ ಅದಕ್ಕೆ ಅನುಮೋದನೆ ಪಡೆದು ಕೊಳ್ಳುತ್ತೇವೆ’ ಎಂದರು. ತುಳಿತಕ್ಕೆ ಒಳಗಾದವರ ಬಗ್ಗೆ ದುಡಿಯುವವರಿಗೆ, ಅವರ ಪರ ಕೆಲಸ ಮಾಡುವವರು ಯಾವತ್ತೂ ಅವಮಾನ ಎದುರಿಸುತ್ತಾರೆ.
ನಾನು ಅರ್ಜುನನಂತೆ: ಮಹಾಭಾರತ ದಲ್ಲಿ ಅರ್ಜುನ ನನಗೆ ಹಕ್ಕಿ ಕಣ್ಣು ಮಾತ್ರ ಕಾಣುತ್ತದೆ ಎಂದು ಹೇಳಿದಂತೆ ನನಗೆ ಜಾತಿ ಗಣತಿ ನಡೆಸುವ ಉದ್ದೇಶ ಮಾತ್ರ ಹೊಂದಿದ್ದೇನೆ. ಅನುರಾಗ್ ತಮಗೆ ಅವಮಾನ ಮಾಡಿದ್ದರೂ, ಅವರಿಂದ ಕ್ಷಮೆ ಬಯ ಸುವುದಿಲ್ಲ ಎಂದರು ರಾಹುಲ್ ಗಾಂಧಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.