ಸಲಿಂಗ ದಂಪತಿ ಬಾಡಿಗೆ ತಾಯ್ತನದ ಸೇವೆಗೆ ಅರ್ಹರಲ್ಲ: ಸುಪ್ರೀಂಗೆ ಕೇಂದ್ರ
Team Udayavani, May 10, 2023, 7:25 AM IST
ಹೊಸದಿಲ್ಲಿ: ಸಲಿಂಗ ದಂಪತಿಗಳು ಹಾಗೂ ಸಹಜೀವನ ನಡೆಸುತ್ತಿರುವ ಜೋಡಿ(ಲಿವ್ ಇನ್ ಪಾಟ್ನìರ್ಗಳು)ಗಳಿಗೆ ಬಾಡಿಗೆ ತಾಯ್ತನದ ಕಾನೂನಿನಡಿ ಸಿಗುವ ಸೇವೆಗಳನ್ನು ಯಾವುದೇ ಕಾರಣಕ್ಕೂ ಒದಗಿಸಬಾರದು ಎಂದು ಕೇಂದ್ರ ಸರಕಾರ ಹೇಳಿದೆ.
ಸಲಿಂಗ ವಿವಾಹಕ್ಕೆ ಸಂಬಂಧಿಸಿ ನಡೆಯುತ್ತಿರುವ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಹೆಚ್ಚುವರಿ ಅಫಿಡವಿಟ್ನಲ್ಲಿ ಕೇಂದ್ರ ಸರಕಾರ ಈ ವಿಚಾರ ತಿಳಿಸಿದೆ. ಸಲಿಂಗ ವಿವಾದ ಅಥವಾ ಸಹ ಜೀವನದ ವಿಚಾರ ಬಂದಾಗ, ಬಾಡಿಗೆ ತಾಯ್ತನಕ್ಕೆ ಅವಕಾಶ ಕಲ್ಪಿಸಿದರೆ, ಹುಟ್ಟುವ ಮಗುವಿನ ಸುರಕ್ಷತೆ ಹಾಗೂ ಪಾಲನೆಯು ಪ್ರಶ್ನಾರ್ಹವಾಗಿ ಉಳಿಯುತ್ತದೆ. ಹೀಗಾಗಿ, ಬಾಡಿಗೆ ತಾಯ್ತನ ಕಾನೂನಿನಡಿ ಸಿಗುವ ಸೇವೆಗಳನ್ನು ಇಂಥ ದಂಪತಿಗಳಿಗೆ ಕಲ್ಪಿಸುವಂತಿಲ್ಲ ಎಂದು ಸರಕಾರ ಹೇಳಿದೆ.
ಇದೇ ವೇಳೆ, ವಿವಾಹ ಎಂಬುದರ ಪರಿಕಲ್ಪನೆಯು ಈಗ ವಿಕಸಿತಗೊಂಡಿದೆ. ಅದು ಈಗ ಕೇವಲ “ಶಾಸನಾತ್ಮಕ ಗುರುತಿಸುವಿಕೆ’ಯಾಗಿ ಉಳಿದಿಲ್ಲ, ಬದಲಿಗೆ ವಿವಾಹಕ್ಕೆ ಈಗ “ಸಾಂವಿಧಾನಿಕ ರಕ್ಷಣೆ’ಯೂ ಇದೆ ಎಂದು ಸುಪ್ರೀಂ ಕೋರ್ಟ್ನ ಸಂವಿಧಾನ ಪೀಠ ಅಭಿಪ್ರಾಯಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Helicopter: ಮುಖ್ಯ ಚುನಾವಣಾ ಆಯುಕ್ತರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
Panaji: ಗೋವಾದಲ್ಲಿ ಕಲೆ ಬೆಳೆಸಿದ ವಿಷಯ ತಿಳಿದು ಹೆಮ್ಮೆ ಎನಿಸುತ್ತಿದೆ: ಸತೀಶ್ ಶೆಟ್ಟಿ ಪಟ್ಲ
Panaji: ಹೊರ ರಾಜ್ಯದವರ ಬಗ್ಗೆ ಗೋವಾ ಮುಖ್ಯಮಂತ್ರಿಯಿಂದ ವಿವಾದಾತ್ಮಕ ಹೇಳಿಕೆ: ಆಕ್ಷೇಪ
J&K; ಸಿಎಂ ಆಗಿ ಒಮರ್ ಅಬ್ದುಲ್ಲಾ, ಡಿಸಿಎಂ ಆಗಿ ಸುರೀಂದರ್ ಚೌಧರಿ ಪ್ರಮಾಣ ವಚನ
Ayodhya; ರಾಮ ಮಂದಿರಕ್ಕೆ ಭೇಟಿ ನೀಡಿದ ಇಸ್ರೇಲ್ ರಾಯಭಾರಿ ಅಜರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.