![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Jul 27, 2021, 11:07 AM IST
ಪ್ರಾತಿನಿಧಿಕ ಚಿತ್ರ
ಮಂಡಿ : ಭಾರಿ ಮಳೆಯ ಕಾರಣದಿಂದಾಗಿ ಗುಡ್ಡ ಕುಸಿತ ಸಂಭವಿಸಿದ ಕಾರಣದಿಂದಾಗಿ ಚಂಡೀಗಡ ಹಾಗೂ ಮನಾಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್ ಐ ವರದಿ ತಿಳಿಸಿದೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸದ ಜಿಲ್ಲಾಧಿಕಾರ, ಸದ್ಯ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದೆ. ಮಾತ್ರವಲ್ಲದೇ, ಜೂನ್ 13 ರಿಂದ ಆರಂಭವಾದ ವಿಪರೀತ ಮಳೆಯ ಕಾರಣದಿಂದಾಗಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದ್ದು, ಸುಮಾರು 187 ಮಂದಿ ಸಾವನ್ನಪ್ಪಿದ್ದಾರೆ. ನಾಲ್ಕು ಮಂದಿ ಗುಡ್ಡ ಕುಸಿತದಿಂದಾಗಿ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಂದಾಜಿಸಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದೆ.
ಇದನ್ನೂ ಓದಿ : ನಮ್ ಭಾಷಿ, ನಮ್ಗ್ ಖುಷಿ ಅಲ್ದೇ…ವಿಶ್ವಕನ್ನಡ ಕುಂದಾಪ್ರ ದಿನಾಚರಣೆಗೆ UV ಫೋಟೊ ಸ್ಪರ್ಧಿ
ಇನ್ನು, ಗುಡ್ಡ ಕುಸಿತ ಹಾಗೂ ಮಳೆಯ ಕಾರಣದಿಂದಾಗಿ ಸುಮಾರು 401 ಕೋಟಿಯಷ್ಟು ಮೌಲ್ಯದ ಆಸ್ತಿ ಪಾಸ್ತಿಗಳಿಗೆ ನಷ್ಟವಾಗಿದೆ ಎಂದು ಕೂಡ ತಿಳಿಸಿದೆ.
28 ರಸ್ತೆಗಳು ಬಂದ್..!
ರಾಷ್ಟ್ರೀಯ ಸುದ್ದಿ ಸಂಸ್ಥೆ ಎ ಎನ್ ಐ ನೊಂದಿಗೆ ಮಾತನಾಡಿದ ಹಿಮಾಚಲ ಪ್ರದೇಶದ ಕಂದಾಯ-ವಿಪತ್ತು ನಿರ್ವಹಣೆ, ನಿರ್ದೇಶಕ ವಿಶೇಷ ಕಾರ್ಯದರ್ಶಿ ಸುದೇಶ್ ಕುಮಾರ್ ಮೋಖ್ತಾ, ಬಟ್ಸೆರಿ ಮತ್ತು ಚಿಟ್ಕುಲ್ ಪ್ರದೇಶದ ರಸ್ತೆಗಳನ್ನು ಒಳಗೊಂಡು 28 ಪ್ರಮುಖ ರಸ್ತೆಗಳು ಬಂದ್ ಆಗಿವೆ. ತೆರವು ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಅಸ್ಸಾಂ-ಮಿಜೋರಾಂ ಗಡಿ ವಿವಾದ: ಹಿಂಸಾಚಾರದಲ್ಲಿ ಎಂಟು ಪೊಲೀಸರು ಹುತಾತ್ಮ
You seem to have an Ad Blocker on.
To continue reading, please turn it off or whitelist Udayavani.