![1-eqwwewq](https://www.udayavani.com/wp-content/uploads/2024/06/1-eqwwewq-415x279.jpg)
Election Result 2024: ಜಗನ್ ಕಿತ್ತೂಗೆದು ಅಧಿಕಾರಕ್ಕೆ ಏರಿದ ಚಂದ್ರಬಾಬು ನಾಯ್ಡು
Team Udayavani, Jun 4, 2024, 10:04 PM IST
![Election Result 2024: ಜಗನ್ ಕಿತ್ತೂಗೆದು ಅಧಿಕಾರಕ್ಕೆ ಏರಿದ ಚಂದ್ರಬಾಬು ನಾಯ್ಡು](https://www.udayavani.com/wp-content/uploads/2024/06/naidu-620x413.jpg)
ಅಮರಾವತಿ: ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಎನ್ಡಿಎ ಅಧಿಕಾರ ಪಡೆದುಕೊಂಡಿದೆ. ಸಿಎಂ ವೈ.ಎಸ್.ಜಗನ್ಮೋಹನ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಅನುಭವಿಸಿದೆ. ಒಟ್ಟು 175 ಸದಸ್ಯ ಬಲದ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಟಿಡಿಪಿ ನೇತೃತ್ವದ ಮೈತ್ರಿಕೂಟಕ್ಕೆ 162 ಕ್ಷೇತ್ರಗಳಲ್ಲಿ ಗೆದ್ದು ಅಭೂತಪೂರ್ವ ಜಯ ಸಾಧಿಸಿದೆ. ಸೋಲಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಜಗನ್ಮೋಹನ ರೆಡ್ಡಿ ರಾಜೀನಾಮೆ ನೀಡಿದ್ದಾರೆ.
ಟಿಡಿಪಿಗೆ 135, ಚಿತ್ರನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ 21, ಬಿಜೆಪಿ 8, ವೈಎಸ್ಆರ್ಸಿಪಿ 11 ಕ್ಷೇತ್ರಗಳಲ್ಲಿ ಜಯ ಗಳಿಸಿವೆ. ಆಂಧ್ರಪ್ರದೇಶ ವಿಭಜನೆಗೊಂಡು 2014ರಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಆದ ಬಳಿಕ ನಡೆಯುತ್ತಿರುವ 3ನೇ ವಿಧಾನಸಭೆ ಚುನಾವಣೆ ಇದಾಗಿದೆ. ಟಿಡಿಪಿ ನೇತೃತ್ವದ
ಎನ್ಡಿಎ, ವೈಎಸ್ಆರ್ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ನೇತೃತ್ವದ ಐಎನ್ಡಿಐಎ ಒಕ್ಕೂಟದ ನಡುವೆ ತ್ರಿಕೋನ ಹೋರಾಟ ಈ ಬಾರಿ ಆಂಧ್ರಪ್ರದೇಶದಲ್ಲಿತ್ತು.
ಜೂ.9ಕ್ಕೆ ಪ್ರಮಾಣ: ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಜೂ.9ರಂದು 4ನೇ ಬಾರಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಅಮರಾವತಿಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಮತ್ತು ಎನ್ಡಿಎಯ ನಾಯಕರು ಅದರಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ಗೆದ್ದಿರುವುದು ರಾಜಕೀಯವಾಗಿ ಚಂದ್ರಬಾಬು ನಾಯ್ಡು ಅವರಿಗೆ ರಾಜಕೀಯ ಮರು ಹುಟ್ಟು ಎಂದು ವಿಶ್ಲೇಷಿಸಲಾಗುತ್ತಿದೆ.
ವರವಾದ ಬಂಧನ: ಕೌಶಲಾಭಿವೃಭಿವೃದ್ಧಿ ಮಂಡಳಿಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದ್ದು ಮತ್ತು ಅದಕ್ಕೆ ಸಂಬಂಧಿಸಿದ ಕಾನೂನು ಹೋರಾಟ ಟಿಡಿಪಿಗೆ ವರವಾಗಿ ಪರಿಣಮಿಸಿತು ಎಂದು ಹೇಳಲಾಗುತ್ತಿದೆ.
ಹಿಂದಿನ ಚುನಾವಣೆ: 2019ರ ಚುನಾವಣೆಯಲ್ಲಿ ವೈ.ಎಸ್.ಜಗನ್ಮೋಹನ ರೆಡ್ಡಿ ನೇತೃತ್ವದ ವೈ.ಎಸ್.ಆರ್. ಸಿ.ಪಿ. 151, ಟಿಡಿಪಿ 23 ಇತರರು 1 ಕ್ಷೇತ್ರಗಳಲ್ಲಿ ಗೆದ್ದಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ಗೆದ್ದಿರಲಿಲ್ಲ.
ಕುಪ್ಪಂನಲ್ಲಿ ಜಯ: ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಕುಪ್ಪಂ ಕ್ಷೇತ್ರದಿಂದ ಗೆದ್ದಿದ್ದಾರೆ. ಬಾಬುಗೆ 1,21,929 ಮತಗಳು ಸಿಕ್ಕಿವೆ.
ಗೆದ್ದ ಜಗನ್: ಪುಲಿವೆಂದುಲದಿಂದ ಸಿಎಂ ಜಗನ್ ರೆಡ್ಡಿ ಗೆದ್ದಿದ್ದಾರೆ.ಅವರಿಗೆ 1,16,315 ಮತಗಳು ಪ್ರಾಪ್ತವಾಗಿವೆ. ಟಿಡಿಪಿ ಅಭ್ಯರ್ಥಿಗೆ 54,628 ಮತಗಳು ಸಿಕ್ಕಿವೆ.
ಪವನ್ ಕಲ್ಯಾಣ್ ವಿಧಾನಸಭೆ ಪ್ರವೇಶ: ತೆಲುಗು ಚಿತ್ರರಂಗದ ಪ್ರಭಾವಿ ನಟ ಪವನ್ ಕಲ್ಯಾಣ್ 2014ರಲ್ಲಿ ಜನ ಕಲ್ಯಾಣ ಸೇನಾ ಪಕ್ಷ ಸ್ಥಾಪನೆ ಮಾಡಿದ್ದರೂ, ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ಈ ಬಾರಿ ಅವರ ಪಕ್ಷ 21 ಕ್ಷೇತ್ರಗಳಲ್ಲಿ ಗೆದ್ದಿದೆ. ಜತೆಗೆ ಕಾಕಿನಾಡ ಜಿಲ್ಲೆಯ ಪೀತಾಪುರಂ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ.
ಪ್ರಭಾವ ಬೀರದ ಶರ್ಮಿಳಾ: ಸಹೋದರ ಮತ್ತು ಹಾಲಿ ಸಿಎಂ ಜಗನ್ಮೋಹನ ರೆಡ್ಡಿ ಅವರ ಜತೆಗೆ ಮುನಿಸಿಕೊಂಡು ತೆಲಂಗಾಣದಲ್ಲಿ ಪ್ರತ್ಯೇಕ ರಾಜಕೀಯ ಅಸ್ತಿತ್ವ ಕಂಡುಕೊಳ್ಳಲು ಪ್ರಯತ್ನ ಮಾಡುತ್ತಿದ್ದ ವೈ.ಎಸ್.ಶರ್ಮಿಳಾ ಅವರನ್ನು ಮತ್ತೆ ಆಂಧ್ರಪ್ರದೇಶ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದ್ದರೂ ವಿಧಾನಸಭೆ ಚುನಾವಣೆಯಲ್ಲಿ ಪ್ರಭಾವ ಬೀರಲು ವಿಫಲರಾಗಿದ್ದಾರೆ.
ನಾಯ್ಡುಗೆ ಪ್ರಧಾನಿ, ಅಮಿತ್ ಶಾ ಅಭಿನಂದನೆ: 5 ವರ್ಷಗಳ ಬಳಿಕ ಮತ್ತೆ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ಟಿಡಿಪಿ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಚಂದ್ರಬಾಬು ನಾಯ್ಡು ಅವರಿಗೆ ಫೋನ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ವೈಎಸ್ಆರ್ಸಿಪಿ ಸೋಲಿಗೆ ಕಾರಣ
3 ರಾಜಧಾನಿಗಳ ನಿರ್ಮಾಣ, ಜನರಿಗೆ ಉಂಟಾದ ಅನನುಕೂಲ
ಪೋಲಾವರಂ ಯೋಜನೆ ಪೂರ್ಣಗೊಳಿಸಲು ವಿಫಲವಾದದ್ದು
ಮನೆ ಬಾಗಿಲಿಗೇ ಕಲ್ಯಾಣ ಕಾರ್ಯಕ್ರಮಗಳು ಜಾರಿಗೆ ತಂದರೂ ಮತ ಗಳಿಕೆಯಲ್ಲಿ ವಿಫಲ
ನಾಯ್ಡು ಗೆಲುವಿಗೆ ಕಾರಣ
ಕೌಶಲಾಭಿವೃದ್ಧಿ ಮಂಡಳಿ ಹಗರಣದಲ್ಲಿ ಬಂಧನ ಪ್ರಕರಣ ಪ್ರಚಾರಕ್ಕೆ ಬಳಕೆ
ಕಾಪು ಸಮುದಾಯದ ನಟ ಪವನ್ ಕಲ್ಯಾಣ್ ಪಕ್ಷದ ಜತೆಗೆ ಮೈತ್ರಿ
ಖಮ್ಮ ಸಮುದಾಯದ ಮತಗಳು, ವಿಶೇಷವಾಗಿ ಮಹಿಳಾ ಸಮುದಾಯದ ಮತ ಟಿಡಿಪಿ
ಟಾಪ್ ನ್ಯೂಸ್
![1-eqwwewq](https://www.udayavani.com/wp-content/uploads/2024/06/1-eqwwewq-415x279.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-eqwwewq](https://www.udayavani.com/wp-content/uploads/2024/06/1-eqwwewq-150x101.jpg)
Maharashtra ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಸುಜಾತಾ ಸೌನಿಕ್
![6](https://www.udayavani.com/wp-content/uploads/2024/06/6-20-150x90.jpg)
ಯೂಟ್ಯೂಬ್ನಲ್ಲಿ IAS ಪಾಠ ಮಾಡಿ, 21ರ ಹರೆಯದಲ್ಲೇ 10 ಲಕ್ಷ ರೂ. ಕಾರು ಖರೀದಿಸಿದ ವಿದ್ಯಾರ್ಥಿ
![1-qwewqewq](https://www.udayavani.com/wp-content/uploads/2024/06/1-qwewqewq-1-150x92.jpg)
West Bengal; ನಡು ಬೀದಿಯಲ್ಲೇ ಮಹಿಳೆಗೆ ನಿರ್ದಯವಾಗಿ ಥಳಿತ:ವಿಡಿಯೋ ವೈರಲ್
![ARMY,-Navy-Chiefs](https://www.udayavani.com/wp-content/uploads/2024/06/ARMY-Navy-Chiefs-150x90.jpg)
Indian Army: ಆಗ ಸಹಪಾಠಿಗಳು, ಈಗ ಭೂ ಸೇನೆ, ನೌಕಪಡೆ ಮುಖ್ಯಸ್ಥರು!
![1-adsdadsad](https://www.udayavani.com/wp-content/uploads/2024/06/1-adsdadsad-150x87.jpg)
Technical Error; ಬಾಹ್ಯಾಕಾಶದಲ್ಲೇ ಬಾಕಿ ಆಗಲಿದ್ದಾರಾ ಸುನೀತಾ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.