![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Sep 6, 2019, 12:31 PM IST
ನವದೆಹಲಿ:ಬಾಹ್ಯಾಕಾಶ ಸಾಧನೆಯಲ್ಲಿ ಹೊಸ ಶಕೆ ಆರಂಭಿಸಲು ತ್ರಿವಿಕ್ರಮ ಹೆಜ್ಜೆಯನ್ನಿಟ್ಟಿರುವ ಇಸ್ರೋಗೆ ಈಗ ಯಶಸ್ಸಿನ ಏಣಿ ಏರಲು ಒಂದೇ ಮೆಟ್ಟಿಲು ಉಳಿದಿದ್ದು, ಚಂದ್ರಯಾನ-2 ನೌಕೆ ಚಂದಿರನ ಅಂಗಳಕ್ಕೆ ಇಳಿಯಲು ಕ್ಷಣಗಣನೆ ಆರಂಭವಾಗಿದೆ.
ಶುಕ್ರವಾರ ತಡರಾತ್ರಿ 1.30ರಿಂದ 2-30ರ ವೇಳಗೆ ಚಂದ್ರಯಾನ-2 ನೌಕೆ ಚಂದ್ರನ ನೆಲಕ್ಕೆ ಇಳಿಯಲಿದೆ. ಚಂದ್ರಯಾನ-2 ನೌಕೆಯಿಂದ ಪ್ರತ್ಯೇಕಗೊಳ್ಳಲಿರುವ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಸ್ಪರ್ಶಿಸಲಿದೆ.
ಲ್ಯಾಂಡರ್ ನೌಕೆ ಚಂದ್ರನಲ್ಲಿ ಇಳಿದ ನಂತರ, ಶನಿವಾರ ಮುಂಜಾನೆ 5-30ರಿಂದ 6-30ರ ಸಮಯದಲ್ಲಿ ವಿಕ್ರಮ್ ನಲ್ಲಿರುವ ಪ್ರಜ್ಞಾನ್ ರೋವರ್ ಚಂದ್ರನ ಮೇಲೆ ಇಳಿಯಲಿದೆ. ಪ್ರಜ್ಞಾನ್ ರೋವರ್ ಚಂದ್ರನ ಮೇಲೆ ಚಲಿಸಿ ದತ್ತಾಂಶ ಸಂಗ್ರಹಿಸಲಿದೆ.
ಅತ್ಯಂತ ಕಠಿಣ ಸವಾಲು:
ಚಂದ್ರಯಾನ-2 ಯೋಜನೆಯಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ನೌಕೆಯನ್ನು ಇಳಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಚಂದ್ರಯಾನ -2 ನೌಕೆಯು ವಿಕ್ರಮ್ ಲ್ಯಾಂಡ್ ಆಗಲು ಸಹಕರಿಸುವ ನಿಟ್ಟಿನಲ್ಲಿ ಸುಮಾರು 8 ಉಪಕರಣಗಳನ್ನು ಹೊತ್ತೊಯ್ದಿದೆ.
ವಿಕ್ರಮ್ ಲ್ಯಾಂಡರ್ ಗೆ ಭಾರತೀಯ ಬಾಹ್ಯಾಕಾಶ ಸಂಶೋಧನೆಯ ಪಿತಾಮಹಾ ವಿಜ್ಞಾನಿ ಡಾ.ವಿಕ್ರಮ್ ಎ.ಸಾರಾಭಾಯಿ ಅವರ ಹೆಸರನ್ನೇ ಇಡಲಾಗಿದೆ. ವಿಕ್ರಮ್ ಚಂದ್ರನ ದಕ್ಷಿಣ ಧ್ರುವದಲ್ಲಿ 70ಡಿಗ್ರಿ ದಕ್ಷಿಣ ಅಕ್ಷಾಂಶದಲ್ಲಿನ ಎರಡು ಕುಳಿಗಳ ನಡುವೆ ಇಳಿಯಲಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 22ರಂದು ನಭಕ್ಕೆ ಚಿಮ್ಮಿದ್ದ ಚಂದ್ರಯಾನ 2 ಬಾಹ್ಯಾಕಾಶ ನೌಕೆ ಪ್ರಯಾಣ ಆರಂಭಿಸಿತ್ತು. ವಿಕ್ರಮ್ ಲ್ಯಾಂಡರ್ ತೂಕ 1,471 ಕೆಜಿ, ರೋವರ್ ತೂಕ 27ಕೆಜಿ ತೂಕ ಹೊಂದಿದೆ. ಭೂಮಿಯಿಂದ ಚಂದ್ರನವರೆಗೆ ಲ್ಯಾಂಡರ್ ಪ್ರಯಾಣದ ಅವಧಿ 47 ದಿನ.
ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್ ಒಳಗೊಂಡ ಚಂದ್ರಯಾನ 2 ಉಪಕರಣಗಳನ್ನು ಹೊತ್ತ ಜಿಎಸ್ ಎಲ್ ವಿ ಮಾರ್ಕ್ 3 ರಾಕೆಟ್ ಯಶಸ್ವಿಯಾಗಿ ಉಡ್ಡಯನವಾಗಿತ್ತು. ಇದೀಗ ಚಂದ್ರನ ಅಂಗಳದ ಸಮೀಪದಲ್ಲಿರುವ ವಿಕ್ರಮ್ ಶುಕ್ರವಾರ ನಸುಕಿನ 1.30ರಿಂದ 2.30ರ ವೇಳೆಗೆ ಚಂದ್ರನ ಮೇಲೆ ಇಳಿಯಲಿದೆ. ವಿಕ್ರಮ್ ಹೇಗೆ ಚಂದ್ರನ ಅಂಗಳದ ಮೇಲೆ ಇಳಿಯಲಿದೆ ಎಂಬುದನ್ನು ವಿವರಿಸುವ ವೀಡಿಯೋವನ್ನು ಇಸ್ರೋ ಬಿಡುಗಡೆ ಮಾಡಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.