Chandrayaan-3; ಗಗನಯಾನದತ್ತ ತಿರುಗಿದ ವಿಜ್ಞಾನಿಗಳು
ಚಂದ್ರಯಾನ-3ರ ಉಡ್ಡಯನದ ಬಳಿಕ ಇಸ್ರೋ ಚಿತ್ತ ಮಾನವಸಹಿತ ಯೋಜನೆಯತ್ತ
Team Udayavani, Jul 16, 2023, 7:30 AM IST
ಶ್ರೀಹರಿಕೋಟಾ:ಚಂದ್ರಯಾನ-3ರ ಯಶಸ್ವಿ ಉಡಾವಣೆಯ ಬಳಿಕ ಈಗ ಇಸ್ರೋದ ಗಮನ “ಗಗನಯಾನ’ದತ್ತ ನೆಟ್ಟಿದೆ. ಚಂದ್ರಯಾನ-3 ಅನ್ನು ಹೊತ್ತ ಎಲ್ವಿಎಂ3-ಎಂ4 ರಾಕೆಟ್ ಚಂದಿರನತ್ತ ಪ್ರಯಾಣ ಬೆಳೆಸಿರುವುದು ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆಗೆ ಹೊಸ ಶಕ್ತಿ ತುಂಬಿದೆ. ಇದೇ ಬಾಹ್ಯಾಕಾಶ ನೌಕೆಯನ್ನು ತನ್ನ ಮಹತ್ವಾಕಾಂಕ್ಷಿ ಗಗನಯಾನ ಯೋಜನೆಗೂ ಬಳಸಲು ಇಸ್ರೋ ಸಜ್ಜಾಗುತ್ತಿದೆ.
400 ಕಿ.ಮೀ.ಗಳ ಕಕ್ಷೆಗೆ ಮೂವರು ಮಾನವರನ್ನು 3 ದಿನಗಳ ಕಾಲ ಕಳುಹಿಸಿ, ನಂತರ ಅವರನ್ನು ಸುರಕ್ಷಿತವಾಗಿ ವಾಪಸ್ ಭೂಮಿಗೆ ಕರೆತರುವ ಗಗನಯಾನ ಯೋಜನೆಯನ್ನು ಯಶಸ್ವಿಯಾಗಿಸಲು ಈಗ ವಿಜ್ಞಾನಿಗಳು ಶ್ರಮಿಸತೊಡಗಿದ್ದಾರೆ.
ಗಗನಯಾನಕ್ಕಾಗಿ ಎಲ್ವಿಎಂ3 ರಾಕೆಟ್ ಅನ್ನು ಮರುವಿನ್ಯಾಸಗೊಳಿಸಿ, ಗಗನಯಾತ್ರಿಗಳ ಸುರಕ್ಷಿತ ಸಾಗಣೆಗೆ ಬೇಕಾದ ಅಗತ್ಯತೆಗಳನ್ನು (ಹ್ಯೂಮನ್ ರೇಟಿಂಗ್ ರಿಕ್ವಾರ್ಮೆಂಟ್ಸ್) ಪೂರೈಸಲಾಗುತ್ತದೆ. ನಂತರ ಇದನ್ನು “ಹ್ಯೂಮನ್ ರೇಟೆಡ್ ಎಲ್ವಿಎಂ3′ ಎಂದು ಕರೆಯಲಾಗುತ್ತದೆ. ಆಗಸ್ಟ್ ತಿಂಗಳ ಅಂತ್ಯದಲ್ಲಿ ಗಗನಯಾನದ ಮೊದಲ ಅಬಾರ್ಟ್ ಮಿಷನ್ ನಡೆಸಲಾಗುತ್ತದೆ. ಮುಂದಿನ ವರ್ಷಾಂತ್ಯದಲ್ಲಿ ಮಾನವರಹಿತ ಉಡಾವಣೆ ನಡೆಸಲು ಯೋಜಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.
ಭಾರತ ಮೂಲದವರಿಗೆ ಹೆಮ್ಮೆ:
ಇತ್ತ ಚಂದ್ರಯಾನ-3ರ ಉಡಾವಣೆ ಯಶಸ್ವಿಯಾಗುತ್ತಿದ್ದಂತೆ, ಅತ್ತ ಅಮೆರಿಕದಲ್ಲಿರುವ ಭಾರತೀಯ ಮೂಲದವರ ದೊಡ್ಡ ದೊಡ್ಡ ಕಂಪನಿಗಳು ಹಾಗೂ ಸ್ಟಾರ್ಟಪ್ಗಳ ಪ್ರತಿನಿಧಿಗಳು ಸಂಭ್ರಮಿಸಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿರುವುದನ್ನು ಈ ಉಡಾವಣೆಯು ಸಾಬೀತುಪಡಿಸಿದೆ ಎಂದಿದ್ದಾರೆ.
ಚಂದಿರನೆಂಬ ಕುತೂಹಲದೊಳಗೆ ಶೋಧನೆ
ಚಂದ್ರನ ಬಗ್ಗೆ ಮಾಹಿತಿ ಸಂಗ್ರಹಿಸುವುದು, ಚಂದ್ರನಲ್ಲಿ ಲಭ್ಯವಿರುವ ವಸ್ತುಗಳು ಮತ್ತು ಅವುಗಳ ಗುಣವಿಶೇಷಗಳನ್ನು ಅರಿಯುವುದು ಇಸ್ರೋದ ಉದ್ದೇಶವಾಗಿದೆ ಎಂದು ಇಸ್ರೋದ ಯುಆರ್ ರಾವ್ ಉಪಗ್ರಹ ಕೇಂದ್ರದ ನಿರ್ದೇಶಕರಾದ ಡಾ. ಶಂಕರನ್ ಹೇಳಿದ್ದಾರೆ.
“ನ್ಯೂಸ್ 18′ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ಚಂದ್ರನಲ್ಲಿ ಕೆಲವು ಅಮೂಲ್ಯ ರಾಸಾಯನಿಕಗಳು ಮತ್ತು ಖನಿಜಗಳು ಇವೆ ಎಂದು ಹೇಳಲಾಗುತ್ತಿದೆ. ಅವುಗಳನ್ನು ಅನ್ವೇಷಿಸಿ, ಬಳಸಿಕೊಳ್ಳಬಹುದೇ ಎಂಬುದನ್ನು ತಿಳಿಯಬೇಕು. ಅಲ್ಲದೇ, ಇಡೀ ಜಗತ್ತೇ ಭವಿಷ್ಯದ ಅಂತರ್ಗ್ರಹೀಯ ಪರಿಶೋಧನೆಗೆ ಚಂದ್ರನನ್ನೇ ಆಧಾರವಾಗಿಟ್ಟುಕೊಳ್ಳಬಹುದೇ? ಚಂದ್ರನ ಮೇಲ್ಮೈನಲ್ಲೇ ಕೆಲವೊಂದು ಪ್ರಾಪೆಲ್ಲೆಂಟ್ಗಳು ಮತ್ತು ಇತರೆ ಉಪಕರಣಗಳನ್ನು ಸಿದ್ಧಪಡಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haryana Polls; ಕೈ ಕಾರ್ಯಕರ್ತರು ಮತ್ತು ಪಕ್ಷೇತರನ ಬೆಂಬಲಿಗರ ಮಾರಾಮಾರಿ
PM: ಕಾಂಗ್ರೆಸ್ ಡ್ರಗ್ಸ್ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ
IFFI: ನವೆಂಬರ್ 20ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ
West Bengal: ಬಾಲಕಿಯನ್ನು ಅಪಹರಿಸಿ ಕೊ*ಲೆ: ಭುಗಿಲೆದ್ದ ಆಕ್ರೋಶ, ಪ್ರತಿಭಟನೆ
Pune: ಉತ್ತರಕನ್ನಡ ಮೂಲದ ಮಾಜಿ ಕ್ರಿಕೆಟಿಗ, ನಟ ಸಲೀಲ್ ತಾಯಿ ಶವ ಪತ್ತೆ, ಗಂಟಲು ಸೀಳಿ ಕೊಲೆ?
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Haryana Polls; ಕೈ ಕಾರ್ಯಕರ್ತರು ಮತ್ತು ಪಕ್ಷೇತರನ ಬೆಂಬಲಿಗರ ಮಾರಾಮಾರಿ
Vinesh Phogat; ನನ್ನ ತಂದೆಯ ಸಹಾಯವನ್ನು ವಿನೇಶ್ ಮರೆತಿದ್ದಾರೆ: ಬಬಿತಾ ಫೋಗಾಟ್
Bigg Boss: ಬಿಗ್ ಬಾಸ್ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..
Irani Cup: ತನುಷ್ ಕೋಟ್ಯಾನ್ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್ ಗೆದ್ದ ಮುಂಬೈ
Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.