![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Sep 19, 2022, 9:18 PM IST
ಭೋಪಾಲ್: ನಮೀಬಿಯಾದಿಂದ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ತಂದುಬಿಡಲಾಗಿರುವ 8 ಚೀತಾಗಳು ಈಗಾಗಲೇ ಉದ್ಯಾನಕ್ಕೆ ಹೊಂದಿಕೊಳ್ಳಲಾರಂಭಿಸಿವೆ.
ಭಾರತಕ್ಕೆ ಬಂದ ನಂತರ ಭಾನುವಾರ ಸಂಜೆ ಮೊದಲ ಬಾರಿಗೆ ಅವುಗಳಿಗೆ ಆಹಾರ ನೀಡಲಾಗಿತ್ತು. ಸೋಮವಾರ ಬೆಳಗ್ಗೆ ಅವೆಲ್ಲವೂ ಖುಷಿಯಿಂದ ಓಡಾಡಿಕೊಂಡಿದ್ದಾಗಿ ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಎಲ್ಲ ಚೀತಾಗಳಿಗೆ ತಲಾ 2ಕೆ.ಜಿ. ಎಮ್ಮೆ ಮಾಂಸ ಕೊಡಲಾಗಿದೆ. ಅದರಲ್ಲಿ ಒಂದು ಚೀತಾ ಮಾತ್ರ ಸ್ವಲ್ಪ ಕಡಿಮೆ ತಿಂದಿದ್ದರೆ, ಬೇರೆಲ್ಲವೂ ಪೂರ್ತಿ ತಿಂದಿವೆ. ಈ ಚೀತಾಗಳು ಮೂರು ದಿನಗಳಿಗೊಮ್ಮೆ ಆಹಾರ ಸ್ವೀಕರಿಸುತ್ತವೆ ಎಂದು ತಿಳಿಸಲಾಗಿದೆ.
8 ಚೀತಾಗಳಿಗೆ ನಮೀಬಿಯಾದಲ್ಲಿಯೇ ಫ್ರೆಡ್ಡಿ, ಆ್ಯಲ್ಟನ್, ಸವನ್ನಾ, ಸಾಶಾ, ಒಬಾನ್, ಆಶಾ, ಸಿಬಿಲಿ, ಸೈಸಾ ಎನ್ನುವ ಹೆಸರಿಡಲಾಗಿದೆ. ಅವುಗಳಿಗೆ ಮರುನಾಮಕರಣ ಮಾಡುವ ಬಗ್ಗೆ ಇನ್ನೂ ಚಿಂತನೆ ನಡೆಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.