![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Sep 21, 2020, 12:48 PM IST
ಹೊಸದಿಲ್ಲಿ: ಲಡಾಖ್ ಬಿಕ್ಕಟ್ಟಿನಿಂದ ವಿಶ್ವದ ಗಮನವನ್ನು ಬೇರೆಡೆ ಸೆಳೆಯಲು ಚೀನ ದಕ್ಷಿಣ ಸಮುದ್ರವನ್ನು ರಣರಂಗ ಮಾಡಿಕೊಳ್ಳುತ್ತಿದೆ. ಆಗಸ್ಟ್ ಕೊನೆ ವಾರದಲ್ಲಿ ಚೀನ ಇಲ್ಲಿ ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪರೀಕ್ಷೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
“ಚೈನೀಸ್ ಗುವಾಮ್ ಕಿಲ್ಲರ್’ ಖ್ಯಾತಿಯ ಡಿಎಫ್-26, “ಕ್ಯಾರಿಯರ್ ಕಿಲ್ಲರ್’ ಎಂದೇ ಕರೆಯಲ್ಪಡುವ ಡಿಎಫ್- 21 ಡಿ ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪಿಎಲ್ಎ ಉಡಾಯಿಸಿ, ಉದ್ಧಟತನ ಪ್ರದರ್ಶಿಸಿದೆ. ಅಮೆರಿಕದ ಪರಮಾಣು ನೌಕೆ ರೊನಾಲ್ಡ್ ರೇಗನ್, ನಿಮಿಟ್ಜ್ಗಳ ನಿಯೋಜನೆಗೆ ಪ್ರತ್ಯುತ್ತರವಾಗಿ ಚೀನ ಕ್ಷಿಪಣಿ ಪರೀಕ್ಷೆಯ ದುಸ್ಸಾಹಸ ಪ್ರದರ್ಶಿಸಿತ್ತು ಎಂದು ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ. ಹಾಂಕಾಂಗ್, ತೈವಾನ್ನ ಸಮುದ್ರ ಗಡಿಯಲ್ಲೂ ಚೀನ ತಂಟೆಗಳನ್ನು ಮುಂದುವರಿಸಿದೆ.
ಸಭೆ ಅನುಮಾನ: ಇನ್ನೊಂದೆಡೆ ಲಡಾಖ್ನಲ್ಲಿ ಈ ವಾರ ನಡೆಯಬೇಕಿದ್ದ ಭಾರತ- ಚೀನ ಮಿಲಿಟರಿ ಕಮಾಂಡರ್ ಗಳ ಮಾತುಕತೆ ಮುಂದೂಡಲ್ಪಡುವ ಸಾಧ್ಯತೆ ಇದೆ. ಎರಡೂ ರಾಷ್ಟ್ರಗಳು ಸಭೆಗೆ ಇನ್ನೂ ದಿನಾಂಕ ನಿಗದಿಪಡಿಸಿಲ್ಲ. ಕೆಲ ದಿನಗಳ ಮಟ್ಟಿಗೆ ಸಭೆ ಮುಂದೂಡಲು ಉಭಯ ರಾಷ್ಟ್ರಗಳು ಪರಸ್ಪರ ಯೋಚಿಸಿವೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕೃಷಿ ಮಸೂದೆಗೆ ವಿರೋಧ, ಮೇಲ್ಮನೆ ಕೋಲಾಹಲ: ಎಂಟು ಸಂಸದರು ಅಮಾನತು-ವೆಂಕಯ್ಯ ನಾಯ್ಡು
ನೇಪಾಳ ಗಡಿಯಲ್ಲಿ ಚೀನ 9 ಅಕ್ರಮ ಕಟ್ಟಡ!
ಚೀನ ಅತಿಕ್ರಮಣದ ಬಗ್ಗೆ ನೇಪಾಲೀ ಅಧಿಕಾರಿಗಳು ಪದೇ ಪದೆ ಆಕ್ಷೇಪ ತೆಗೆಯುತ್ತಿರುವ ನಡುವೆಯೇ ನೇಪಾಳದ ಗಡಿ ಹಳ್ಳಿಯಲ್ಲಿ ಪಿಎಲ್ಎ ಸದ್ದಿಲ್ಲದೆ 9 ಕಟ್ಟಡಗಳನ್ನು ನಿರ್ಮಿಸಿದೆ! ಹುಮ್ಲಾ ಜಿಲ್ಲೆಯ ನಾಂಖ್ಯಾ ಹಳ್ಳಿಯಲ್ಲಿ ಚೀನ ಸೇನೆ ಅಕ್ರಮ ಕಟ್ಟಡಗಳನ್ನು ನಿರ್ಮಿಸಿರುವುದು ಸ್ವತಃ ಸ್ಥಳೀಯರಿಗೇ ಆಘಾತ ಮೂಡಿಸಿದೆ.
ಕಟ್ಟಡ ಸಮೀಪ ಸ್ಥಳೀಯರಿಗೆ ಪ್ರವೇಶ ನಿಷೇಧಿಸಲಾಗಿದೆ. ನಾಂಖ್ಯಾ ಹಳ್ಳಿ ಮುಖ್ಯಸ್ಥ ವಿಷ್ಣು ಬಹದ್ದೂರ್ ಲಾಮಾ ಎಂದಿನಂತೆ ಗಡಿ ಪ್ರವಾಸ ಕೈಗೊಂಡಿದ್ದಾಗ ಪಿಎಲ್ಎ ಕಟ್ಟಿರುವ ಕಟ್ಟಡಗಳು ಕಂಡಿವೆ ಎಂದು ಪಿಟಿಐ ವರದಿ ಮಾಡಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.