![Anant Ambani-ರಾಧಿಕಾ ಮರ್ಚೆಂಟ್ ವಿವಾಹ ಆಮಂತ್ರಣ ಪತ್ರಿಕೆ ವೈರಲ್…Watch](https://www.udayavani.com/wp-content/uploads/2024/06/Ananth-415x232.jpg)
China ಹೊಸ ದುಸ್ಸಾಹಸ ; ಸಿಕ್ಕಿಂ ಗಡಿಯಲ್ಲಿ ಯುದ್ಧ ವಿಮಾನ!
Team Udayavani, May 31, 2024, 6:40 AM IST
![1-china](https://www.udayavani.com/wp-content/uploads/2024/05/1-china-620x437.jpg)
ಹೊಸದಿಲ್ಲಿ: ಮೂರು ವರ್ಷಗಳಿಂದ ಚೀನವು ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಸೇನಾ ಸೌಲಭ್ಯಗಳನ್ನು ಪಾಕಿಸ್ಥಾನದ ಜತೆಗೂಡಿ ವೃದ್ಧಿಸುತ್ತಿರುವ ಮಾಹಿತಿ ಹೊರಬಿದ್ದ ಬೆನ್ನಲ್ಲೇ ಸಿಕ್ಕಿಂ ಗಡಿಯಿಂದ 150 ಕಿ.ಮೀ.ಗಿಂತ ಕಡಿಮೆ ದೂರದಲ್ಲಿ ಅದು ಮೇ 27ರಂದು ತನ್ನ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ನಿಯೋಜಿಸಿರುವ ಮಾಹಿತಿಯು ಈಗ ತಿಳಿದುಬಂದಿದೆ.
ಈ ಸಂಬಂಧದ ಫೋಟೋಗಳು ಬಹಿರಂಗವಾಗಿದ್ದು, ಚೀನೀ ವಾಯುಪಡೆಯ ಜೆ-20 ಯುದ್ಧ ವಿಮಾನಗಳನ್ನು ಟಿಬೆಟ್ನ 2ನೇ ಅತಿದೊಡ್ಡ ನಗರವಾದ ಶಿಗಾತ್ಸೆಯ ಸೇನಾ ಮತ್ತು ನಾಗರಿಕ ಬಳಕೆಯ ವಿಮಾನ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿದೆ. ಈ ವಿಮಾನಗಳ ಜತೆಗೆ ಕೆ.ಜೆ-500 ಏರ್ಬೋರ್ನ್ ಅರ್ಲಿ ವಾರ್ನಿಂಗ್ ಮತ್ತು ಕಂಟ್ರೋಲ್ ಏರ್ಕ್ರಾಫ್ಟ್ ಕೂಡ ಇರುವುದನ್ನು ಕಾಣಬಹುದು. ವಿಶೇಷ ಎಂದರೆ ಭಾರತಕ್ಕೆ ತೀರಾ ಸಮೀಪದಲ್ಲಿ ನಡೆದಿರುವ ಈ ಬೆಳವಣಿಗೆ ಭಾರತೀಯ ವಾಯುಪಡೆಗೆ ತಿಳಿದಿದೆ ಎನ್ನಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇದಕ್ಕೆ ಪ್ರತಿಯಾಗಿ ಭಾರತದ ಬಳಿ ರಫೇಲ್ ಯುದ್ಧವಿಮಾನಗಳಿವೆ. ಭಾರತೀಯ ವಾಯುಪಡೆಯ 2ನೇ ರಫೇಲ್ ಸ್ಕ್ವಾಡ್ರನ್ ಪಶ್ಚಿಮ ಬಂಗಾಲದ ಹಾಸಿಮಾರಾದಲ್ಲಿದೆ. ಈ ಪ್ರದೇಶವು ಚೀನದ ಯುದ್ಧವಿಮಾನಗಳಿರುವ ಸ್ಥಳದಿಂದ ಹೆಚ್ಚುಕಡಿಮೆ 290 ಕಿ.ಮೀ. ದೂರದಲ್ಲಿದೆ.
ಅತ್ಯಾಧುನಿಕ ಯುದ್ಧವಿಮಾನ
ಜೆ-20 ಚೀನದ ಇದುವರೆಗಿನ ಅತ್ಯಾಧುನಿಕ ಯುದ್ಧವಿಮಾನವಾಗಿದೆ. ಸಾಮಾನ್ಯವಾಗಿ ಈ
ಯುದ್ಧ ವಿಮಾನಗಳನ್ನು ಚೀನದ ಪೂರ್ವ ಪ್ರಾಂತ್ಯ
ಗಳಲ್ಲಿ ನಿಯೋಜಿಸಲಾಗುತ್ತದೆ. ಈಗ ಇವು ಶಿಗಾತ್ಸೆಯಲ್ಲಿವೆ ಎಂದು ಆಲ್ ಸೋರ್ಸ್ ಅನಾಲಿಸಿಸ್ ಅಭಿಪ್ರಾಯಪಟ್ಟಿದೆ.
ಟಾಪ್ ನ್ಯೂಸ್
![Anant Ambani-ರಾಧಿಕಾ ಮರ್ಚೆಂಟ್ ವಿವಾಹ ಆಮಂತ್ರಣ ಪತ್ರಿಕೆ ವೈರಲ್…Watch](https://www.udayavani.com/wp-content/uploads/2024/06/Ananth-415x232.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![DNA Test: ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ… DNA ವರದಿ ಹೇಳಿದ್ದೇನು?](https://www.udayavani.com/wp-content/uploads/2024/06/ice-creme-2-150x84.jpg)
DNA Test: ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ… DNA ವರದಿ ಹೇಳಿದ್ದೇನು?
![Heavy Rain: ಮಳೆಗೆ ನಲುಗಿದ ದೆಹಲಿ… ಏರ್ಪೋರ್ಟ್ ಮೇಲ್ಛಾವಣಿ ಕುಸಿದು 6 ಮಂದಿಗೆ ಗಾಯ](https://www.udayavani.com/wp-content/uploads/2024/06/dehi-150x84.jpg)
Heavy Rain: ಮಳೆಗೆ ನಲುಗಿದ ದೆಹಲಿ… ಏರ್ಪೋರ್ಟ್ ಮೇಲ್ಛಾವಣಿ ಕುಸಿದು 6 ಮಂದಿಗೆ ಗಾಯ
![1-eeweqewqewqewqe](https://www.udayavani.com/wp-content/uploads/2024/06/1-eeweqewqewqewqe-150x95.jpg)
45,000 ಜೀವಪ್ರಭೇದ ಅಳಿವಿನಂಚಿಗೆ: ಕಳೆದ ವರ್ಷಕ್ಕಿಂತ ಸಾವಿರ ಹೆಚ್ಚಳ
![stalin](https://www.udayavani.com/wp-content/uploads/2024/06/stalin-150x90.jpg)
Bengaluru ಸನಿಹ ಏರ್ಪೋರ್ಟ್: ತಮಿಳುನಾಡು ಹೊಸ ಕ್ಯಾತೆ
![1-amesen](https://www.udayavani.com/wp-content/uploads/2024/06/1-amesen-150x102.jpg)
India ಹಿಂದೂ ರಾಷ್ಟ್ರವಲ್ಲ ಇದಕ್ಕೆ ಫಲಿತಾಂಶ ಸಾಕ್ಷಿ:ಅಮರ್ತ್ಯ ಸೇನ್
MUST WATCH
ಹೊಸ ಸೇರ್ಪಡೆ
![Anant Ambani-ರಾಧಿಕಾ ಮರ್ಚೆಂಟ್ ವಿವಾಹ ಆಮಂತ್ರಣ ಪತ್ರಿಕೆ ವೈರಲ್…Watch](https://www.udayavani.com/wp-content/uploads/2024/06/Ananth-150x84.jpg)
Anant Ambani-ರಾಧಿಕಾ ಮರ್ಚೆಂಟ್ ವಿವಾಹ ಆಮಂತ್ರಣ ಪತ್ರಿಕೆ ವೈರಲ್…Watch
![Egret ಆರಿದ್ರ ಮಳೆಯೊಂದಿಗೆ ಶಿರಸಿಯ ಮುಂಡಿಗೇಕೆರೆಗೆ ಬೆಳ್ಳಕ್ಕಿಗಳ ಆಗಮನ!](https://www.udayavani.com/wp-content/uploads/2024/06/egret-150x100.jpg)
Egret: ಆರಿದ್ರ ಮಳೆಯೊಂದಿಗೆ ಶಿರಸಿಯ ಮುಂಡಿಗೇಕೆರೆಗೆ ಬೆಳ್ಳಕ್ಕಿಗಳ ಆಗಮನ!
![Aranthodu; Man slipped and fell into the river](https://www.udayavani.com/wp-content/uploads/2024/06/death-150x95.jpg)
Aranthodu; ಕಾಲು ಜಾರಿ ಹೊಳೆಗೆ ಬಿದ್ದು ಸಾವು
![7-belthangady](https://www.udayavani.com/wp-content/uploads/2024/06/7-belthangady-150x90.jpg)
Belthangady: ಬಸ್-ಬೈಕ್ ಢಿಕ್ಕಿ; ನಡ ಗ್ರಾಮದ ಗ್ರಾಮ ಕರಣಿಕರ ಕಚೇರಿ ಸಹಾಯಕ ಸಾವು
![Rohit Sharma backs Virat kohli in T20 World Cup](https://www.udayavani.com/wp-content/uploads/2024/06/ro-ko-150x83.jpg)
T20 World Cup; ವಿರಾಟ್ ಫಾರ್ಮ್ ಬಗ್ಗೆ ಚಿಂತೆಯಿಲ್ಲ…: ಕ್ಯಾಪ್ಟನ್ ಶರ್ಮಾ ಹೀಗಂದಿದ್ಯಾಕೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.