ಆಂಧ್ರ ಪ್ರದೇಶ : ಕೈಕೊಟ್ಟ ಮತಯಂತ್ರಗಳು, TDP-YSRC ಕಾರ್ಯಕರ್ತರ ಮಾರಾಮಾರಿ
Team Udayavani, Apr 11, 2019, 12:04 PM IST
ಅಮರಾವತಿ : ಆಂಧ್ರ ಪ್ರದೇಶದಲ್ಲಿ ತೆಲುಗು ದೇಶಂ ಪಕ್ಷ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆಗಳು ವರದಿಯಾಗಿವೆ.
ಇದೇ ವೇಳೆ ಆಂಧ್ರ ಪ್ರದೇಶದ ಅನೇಕ ಮತಗಟ್ಟೆಗಳಲ್ಲಿ ಇಂದು ಮತದಾನದ ವೇಳೆ ಇವಿಎಂ ಗಳಲ್ಲಿ ತಾಂತ್ರಿಕ ದೋಷ ಕಂಡು ಬಂದು ಮತದಾನಕ್ಕೆ ಅಡಚಣೆ ಉಂಟಾದ ವರದಿಗಳೂ ಬಂದಿವೆ. ಮತದಾನಕ್ಕೆ ಬಂದಿದ್ದವರಿಗೆ ದೀರ್ಘ ಕಾಲ ಕಾಯುವ ಸ್ಥಿತಿ ಉಂಟಾಯಿತು
ಆಂಧ್ರ ಪ್ರದೇಶದ 25 ಲೋಕಸಭಾ ಮತ್ತು 175 ವಿಧಾನಸಭಾ ಸ್ಥಾನಗಳಿಗೆ ಇಂದು ಏಕಕಾಲದಲ್ಲಿ ಮತದಾನ ನಡೆಯುತ್ತಿದೆ.
ಮತ ಯಂತ್ರದ ಬ್ಯಾಲೆಟ್ ಯೂನಿಟ್ನಲ್ಲಿ ಪಕ್ಷದ ಚಿಹ್ನೆಗಳು ಸರಿಯಾಗಿ ಕಂಡುಬರುತ್ತಿಲ್ಲ ಎಂಬ ಕಾರಣಕ್ಕೆ ಕೋಪೋದ್ರಿಕ್ತರಾದ ಜನ ಸೇನಾ ಪಕ್ಷದ ಸ್ಪರ್ಧಾಳು ಅಭ್ಯರ್ಥಿ, ಮಾಜಿ ಗುಂತಕಲ್ ಶಾಸಕ ಮಧುಸೂದನ್ ಗುಪ್ತಾ ಅವರು ಸಿಟ್ಟಿನ ಆವೇಶದಲ್ಲಿ ಮತಯಂತ್ರವನ್ನೇ ಧ್ವಂಸಗೊಳಿಸಿದರು.
ಮಾತ್ರವಲ್ಲದೆ ಕರ್ತವ್ಯ ನಿರತ ಚುನಾವಣಾಧಿಕಾರಿಗಳನ್ನು ತಾರಕ ಸ್ವರದಲ್ಲಿ ತರಾಟೆಗೆ ತೆಗೆದುಕೊಂಡರು. ಗುಪ್ತಾ ಅವರನ್ನು ಒಡನೆಯೇ ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡರು.
TDP ಕಾರ್ಯಕರ್ತರೊಂದಿಗಿನ ಜಗಳದಲ್ಲಿ ವೈಎಸ್ಆರ್ಸಿ ಮಂಡಲ ಪರಿಷತ್ ಸದಸ್ಯರೊಬ್ಬರು ಗಾಯಗೊಂಡ ಘಟನೆ ಏಲೂರು ಜಿಲ್ಲೆಯಲ್ಲಿ ನಡೆಯಿತು.
ಕಡಪ ಜಿಲ್ಲೆಯ ಜಮ್ಮಲಮಡುಗು ತಾಲೂಕಿನ ಪೊನ್ನ ತೋಟ ಗ್ರಾಮದಲ್ಲಿ ವೈಎಸ್ಆರ್ಸಿ ಮತ್ತು ಟಿಡಿಪಿ ಕಾರ್ಯಕರ್ತರು ಪರಸ್ಪರ ಕಲ್ಲೆಸೆತದಲ್ಲಿ ತೊಡಗಿಕೊಂಡರು.
ಪೊಲೀಸರು ಕೂಡಲೇ ಎರಡೂ ಕಡೆಯ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Recommendation: ನ್ಯಾ. ಸಂಜೀವ್ ಖನ್ನಾ ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ
NDA CMs Meet: ರಾಷ್ಟ್ರದ ಅಭಿವೃದ್ಧಿಗೆ ಎನ್ಡಿಎ ಬದ್ಧ: ಪ್ರಧಾನಿ ಮೋದಿ
Termination of Employees: ಅಮೆರಿಕದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾದ ಮೆಟಾ, ಇಂಟೆಲ್!
MUST WATCH
ಹೊಸ ಸೇರ್ಪಡೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Recommendation: ನ್ಯಾ. ಸಂಜೀವ್ ಖನ್ನಾ ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.