PM Modi; 10 ವರ್ಷದಲ್ಲಿ ಕಾಂಗ್ರೆಸ್ ಸಮರ್ಥ ವಿಪಕ್ಷವೂ ಆಗಲಿಲ್ಲ
Team Udayavani, Sep 27, 2024, 2:27 AM IST
ಚಂಡೀಗಢ: “ಕಾಂಗ್ರೆಸ್ ಆಡಳಿತಕ್ಕೇರುವುದು ಬಿಡಿ, 10 ವರ್ಷದಲ್ಲಿ ಸಮರ್ಥ ವಿಪಕ್ಷವಾಗುವಲ್ಲಿಯೂ ವಿಫಲವಾಗಿದೆ. ಜನರ ಸಮಸ್ಯೆಗಳನ್ನು ಆಲಿಸುವುದು ಬಿಟ್ಟು, ಬರೀ ಒಳ ಜಗಳದಲ್ಲಿಯೇ ಕಾಲ ಕಳೆದಿರುವುದು, ಅವರ ಆಂತರಿಕ ಭಿನ್ನಮತ ಹರಿಯಾಣದ ಮಗುವಿಗೂಗೊತ್ತಿದೆ.’ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದ್ದಾರೆ.
“ಮೇರಾ ಬೂತ್,ಸಬ್ಸೇ ಮಜಬೂತ್’ ಕಾರ್ಯಕ್ರಮದ ಅನ್ವಯ ಚುನಾವಣೆ ಹೊಸ್ತಿಲಿನಲ್ಲಿರುವ ಹರಿಯಾಣ ದಲ್ಲಿ ಬೂತ್ ಮಟ್ಟದ ಪ್ರಚಾರದ ಕುರಿತು ನಮೋ ಆ್ಯಪ್ ಮೂಲಕ ಬಿಜೆಪಿ ಕಾರ್ಯಕರ್ತರ ಜತೆ ಪ್ರಧಾನಿ ಸಂವಾದ ನಡೆಸಿದ್ದಾರೆ.
ಈ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದು, ಕಾಂಗ್ರೆಸಿಗರು ಸುಳ್ಳು ಹೇಳುತ್ತಾರೆ. ಅವರ ವಾದಗಳಿಗೆ ತಲೆಯೂ ಇಲ್ಲ, ಬುಡವೂ ಇಲ್ಲ ಎಂದರು. ಕಾಂಗ್ರೆಸಿಗರು ಚುನಾವಣೆ ಗೆಲ್ಲಲ್ಲು ಹೇಗೆ ಸುಳ್ಳನ್ನು ಸುರಿಯುತ್ತಾರೆ ಎಂಬುದಕ್ಕೆ ಹಿಮಾಚಲ ಪ್ರದೇಶವೇ ಸಾಕ್ಷಿ. ಕಾಂಗ್ರೆಸ್ ನಾಯಕರು ಹಳೆ ಪಿಂಚಣಿ ಬಗ್ಗೆ ಮಾತನಾಡುತ್ತಿದ್ದರು. ಈಗ ಪಿಂಚಣಿ ವಿಚಾರ ಹಾಗಿರಲಿ, ಅಲ್ಲೀಗ ಕೆಲಸಗಳಿಗೆ ನೇಮಕಾತಿಯೂ ಇಲ್ಲ, ಸಂಬಳವೂ ಕೊಡಲಾಗುತ್ತಿಲ್ಲ ಎಂದು ಪ್ರಧಾನಿ ಚಾಟಿ ಬೀಸಿದ್ದಾರೆ. ಇದೇ ವೇಳೆ ಮುಕೇಶ್ ಸೈನಿ ಎಂಬ ಚಾಯ್ವಾಲಾ ಜತೆಗೆ ಮಾತನಾಡಿ, ನಾನೂ ಚಾಯ್ವಾಲಾ ನಾನೂ ನಿನ್ನ ಸಹೋದರ ಎಂದು ಮೋದಿ ಆತ್ಮೀಯತೆ ತೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.